ಕಾಸರಗೋಡು ಟೌನ್ ಬ್ಯಾಂಕ್ ಮುಳ್ಳೇರಿಯ ಬ್ರಾಂಚ್ ನವೀಕೃತ ಕಚೇರಿ ಉದ್ಘಾಟನೆ

 ಮುಳ್ಳೇರಿಯ: ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನ ಮುಳ್ಳೇರಿಯ ಬ್ರಾಂಚ್ ನವೀಕರಿಸಿದ ಕಚೇರಿಗೆ ಸ್ಥಳಾಂತರಗೊಂಡಿತು. ಪಂಚಾಯತ್ ಅಧ್ಯಕ್ಷ ಕೆ. ಗೋಪಾಲ ಕೃಷ್ಣ ಕಚೇರಿ ಉದ್ಘಾಟಿಸಿದರು. ಹಿಂದೂ ಕಲ್ಚರಲ್ ಸೊಸೈಟಿ ಅಧ್ಯಕ್ಷ ರಂಗನಾಥ ರಾವ್ ಎಟಿಎಂ ಉದ್ಘಾಟಿಸಿದರು. ಬ್ಯಾಂಕ್ ಅಧ್ಯಕ್ಷ ಕರುಣಾಕರ ನಂಬ್ಯಾರ್ ಅಧ್ಯಕ್ಷತೆ ವಹಿಸಿ ದರು. ಸಿ.ಇ.ಒ.ಆರ್.ವಿ ಸುರೇಶ್ ಕುಮಾರ್, ಎ.ಸಿ. ಅಶೋಕ್ ಕುಮಾರ್, ಬಿಜೆಪಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಮಾತನಾಡಿದರು. ಉಪಾಧ್ಯಕ್ಷ ಮಹಾಬಲ ರೈ ಸ್ವಾಗತಿಸಿ, ಬ್ರಾಂಚ್ ಮೆನೇಜರ್ ಅಜಯ್ ಕಾಮತ್ ವಂದಿಸಿದರು.

You cannot copy contents of this page