ಊರು ಬಿಟ್ಟು ತೆರಳಿ ವರ್ಷಗಳ ಬಳಿಕ ಹಿಂತಿರುಗಿದ ಚಟ್ಟಂಚಾಲ್ ನಿವಾಸಿ ನಿಧನ

ಕಾಸರಗೋಡು: ಊರು ಬಿಟ್ಟು ತೆರಳಿ ವರ್ಷಗಳ  ಬಳಿಕ ಹಿಂತಿರುಗಿದ ವ್ಯಕ್ತಿ ಅಸೌಖ್ಯದಿಂದ ನಿಧನಹೊಂ ದಿದರು. ಚಟ್ಟಂಚಾಲ್ ಪುತ್ತರಿಯಡ್ಕದ ದಿ| ಮಾಯಿಲನ್-ಚೋಮು ದಂಪತಿ ಪುತ್ರ ಸದಾನಂದನ್ (60) ಮೃತಪಟ್ಟವರು.  ಸಣ್ಣ ಪ್ರಾಯದಲ್ಲೇ ಊರು ಬಿಟ್ಟು ತೆರಳಿದ ಇವರು 2023 ಡಿಸೆಂಬರ್ 16ರಂದು ಊರಿಗೆ ಹಿಂತಿರುಗಿದ್ದರು. ಈ ಸಂದರ್ಭದಲ್ಲಿ ಹಲವೆಡೆಗಳಲ್ಲಿ ವಾಸವಾಗಿದ್ದ ಸದಾನಂದನ್ ಯಾವುದೋ ಆಂತರಿಕ ತುಡಿತ ಹೊಂದಿ ಹುಟ್ಟೂರಿಗೆ ಹಿಂತಿರುಗಿದ್ದರು.  ಊರಿಗೆ ಬಂದಾಗ ಇವರ ಗುರುತು  ಸಂಬಂಧಿಕರಿಗೆ ಪತ್ತೆಹಚ್ಚಲಾಗಲಿಲ್ಲ.  ಆ ಬಳಿಕ ಹಳೆಯ ವಿಷಯಗಳನ್ನೆಲ್ಲಾ ತಿಳಿಸಿ ಸದಾನಂದನ್ ಎಂದು ಖಚಿತಪಡಿಸಲಾಗಿತ್ತು.

ಮೃತರು ಸಹೋದರರಾದ ಶಿವರಾಮನ್, ಶಿಬು, ಸಹೋದರಿಯರಾದ ಉಷಾ, ಸಿಂಧು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page