ಯುವಕ ಕ್ವಾರ್ಟರ್ಸ್‌ನೊಳಗೆ ನೇಣುಬಿಗಿದು ಸಾವು

ಪೆರ್ಲ: ಯುವಕನೋರ್ವ ಬಾಡಿಗೆ ಕ್ವಾರ್ಟರ್ಸ್‌ನೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೆರ್ಲ ಬಳಿಯ ಇಡಿಯಡ್ಕದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಹರೀಶ್ ನಾಯ್ಕ್ (39) ಮೃತ ವ್ಯಕ್ತಿ.  ಇವರು ಕೂಲಿ ಕಾರ್ಮಿಕನಾಗಿದ್ದರು.  ಈ ಹಿಂದೆ ಪಡ್ರೆ ಶಿವಗಿರಿಯಲ್ಲಿ ವಾಸವಾಗಿದ್ದ ಇವರು ಬಳಿಕ ಇಡಿಯಡ್ಕಕ್ಕೆ ತಲುಪಿದ್ದರು. ನಿನ್ನೆ ಮಧ್ಯಾಹ್ನ ೨.೩೦ರ ವೇಳೆ ಕ್ವಾರ್ಟರ್ಸ್‌ನೊಳಗೆ ಇವರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.  ಬದಿಯಡ್ಕ ಪೊಲೀಸರು  ಕೇಸು ದಾಖಲಿಸಿಕೊಂಡಿದ್ದಾರೆ.

ರಾಮ ನಾಯ್ಕ-ಸರಸ್ವತಿ ದಂಪತಿಯ ಪುತ್ರನಾದ  ಮೃತರು ಪತ್ನಿ ಬಾಲಕ್ಕ, ಪುತ್ರಿ ಸುಧಿ (ಪ್ಲಸ್‌ಟು ವಿದ್ಯಾರ್ಥಿನಿ), ಸಹೋದರ ಸುರೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page