ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದು ಸಂಘರ್ಷಕ್ಕೆತ್ನ: ಮೂವರ ಬಂಧನ

ಕಾಸರಗೋಡು: ರಸ್ತೆಯಲ್ಲಿ ಬಿಯರ್ ಬಾಟಲಿ ಒಡೆದು ಸಂಘರ್ಷಕ್ಕೆ ಯತ್ನಿಸಲಾಯಿತೆಂಬ ದೂರಿನಂತೆ ಮೂವರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಾರೆಕಟ್ಟೆಯ ಅಭಿಲಾಷ್, ಕೇಳುಗುಡ್ಡೆಯ ಮನೀಶ್ ಕುಮಾರ್, ಆರ್.ಡಿ.ನಗರದ ಅವಿನೇಶ್ ಎಂಬಿವರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಗೆ ನ್ಯಾಯಾಲಯ ರಿಮಾಂ ಡ್ ವಿಧಿಸಿದೆ. ಮೊನ್ನೆ  ರಾತ್ರಿ 12.30 ರ ವೇಳೆ ಚೂರಿ ಎಂಬಲ್ಲಿ ಘಟನೆ ನಡೆದಿತ್ತು.  ಬೈಕ್‌ನಲ್ಲಿ ಪ್ರಯಾಣಿಸು ತ್ತಿದ್ದ ಯುವಕರು ಹಾಗೂ ಸ್ಥಳದಲ್ಲಿದ್ದ ಕೆಲವು ಯುವಕರ ಮಧ್ಯೆ ವಾಗ್ವಾದ ನಡೆದಿತ್ತೆನ್ನಲಾಗಿದೆ. ಬಳಿಕ ಸ್ಥಳದಿಂದ ಹೋದ ತಂಡ ಮರಳಿ ಬಂದು ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದು ಸಂಘರ್ಷಕ್ಕೆ ಯತ್ನಿಸಿರುವುದಾಗಿ ಆರೋಪಿಸಲಾಗಿದೆ. 

RELATED NEWS

You cannot copy contents of this page