ಎಂಟು ತಿಂಗಳು ಪ್ರಾಯದ ಮಗುವನ್ನು ರೈಲಿನಲ್ಲಿ ಸಹಪ್ರಯಾಣಿಕನಿಗೆ ನೀಡಿ ಪರಾರಿಯಾದ ಯುವತಿ

ಕಲ್ಲಿಕೋಟೆ: ಶೌಚಾಲಯಕ್ಕೆ ಹೋಗಿ ಬರುತ್ತೇ ನೆಂದು ತಿಳಿಸಿ 8 ತಿಂಗಳ ಪ್ರಾಯದ ಮಗುವನ್ನು  ಸಹ ಪ್ರಯಾಣಿಕನ ಕೈಯಲ್ಲಿ ನೀಡಿ ಯುವತಿ ಪರಾರಿಯಾಗಿದ್ದು, ಬಳಿಕ   ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆಕೆಯನ್ನು ಪತ್ತೆಹಚ್ಚಲಾಗಿದೆ.   ಕಲ್ಲಿಕೋಟೆಯಿಂದ ಶೋರ್ನೂರಿಗೆ  ಬೆಳಿಗ್ಗೆ 10.15 ಕ್ಕೆ  ಹೊರಡುವ ರೈಲಿನಲ್ಲಿ ಈ ಘಟನೆ ನಡೆದಿದೆ.  ಮಗುವಿನೊಂದಿಗೆ ರೈಲಿನಲ್ಲಿ ಕುಳಿತಿದ್ದ ಯುವತಿ ರೈಲು ಪ್ರಯಾಣ ಆರಂಭಿಸಲು  ಕೆಲವೇ ನಿಮಿಷಗಳಿರುವಾಗ  ಶೌಚಾಲಯಕ್ಕೆ ಹೋಗಿ ಬರುತ್ತೇನೆಂದೂ ಅದುವರೆಗೆ ಮಗುವನ್ನು ಹಿಡಿದುಕೊಳ್ಳುವಂತೆ ರೈಲಿನಲ್ಲಿದ್ದ ಪ್ರಯಾಣಿಕನಲ್ಲಿ ಯುವತಿ ತಿಳಿಸಿದ್ದಾಳೆ. ಇದರಂತೆ ಸಹಪ್ರಯಾ ಣಿಕ ಮಗುವನ್ನು  …

ಕಡ್ಡಾಯ ಮಲೆಯಾಳ ಮಸೂದೆ: ಕರ್ನಾಟಕ ವಿಧಾನಪರಿಷತ್‌ನಲ್ಲಿ ವಿಷಯ ಪ್ರಸ್ತಾಪಿಸಿದ ಬಲ್ಕೀಸ್ ಬಾನು

ಬೆಂಗಳೂರು: ಕೇರಳ ವಿಧಾನಸಭೆ ಮಂಡಿಸಿದ ಕಡ್ಡಾಯ ಮಲೆಯಾಳ ಮಸೂದೆ ವಿರುದ್ಧ ಕರ್ನಾಟಕ ಎಂಎಲ್‌ಸಿ ಬಲ್ಕೀಸ್ ಬಾನು ವಿಧಾನಪರಿಷತ್‌ನಲ್ಲಿ ಧ್ವನಿ ಎತ್ತಿದರು. ಕಾಸರಗೋಡು ಗಡಿನಾಡು ಪ್ರದೇಶದ ಕನ್ನಡಿಗರ ಸಮಸ್ಯೆಗಳ ಬಗ್ಗೆ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ ಕರ್ನಾಟಕ ಸರಕಾರದ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಮೊದಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಕಡ್ಡಾಯ ಮಲೆಯಾಳ ಮಸೂದೆಯನ್ನು ಹಿಂತೆಗೆಯಲು ಒತ್ತಾಯಿಸಿದ್ದರು. ಪ್ರಸ್ತುತ ಕಾಂಗ್ರೆಸ್ ಮುಖಂಡೆಯಾಗಿರುವ ಬಲ್ಕೀಸ್ ಬಾನು ಕರ್ನಾಟಕ ವಿಧಾನಪರಿ ಷತ್‌ನಲ್ಲಿ ಪ್ರಸ್ತಾಪಿಸಿ ಕೇರಳದ …

ಬೇಸಿಗೆ ಮಳೆ : ಹಳ್ಳದಂತಾದ ಪೆರಿಯ ಹೆದ್ದಾರಿ ಸರ್ವಿಸ್ ರಸ್ತೆ

ಕಾಸರಗೋಡು: ನಿನ್ನೆ ರಾತ್ರಿ ಸುರಿದ ಬೇಸಿಗೆ ಮಳೆಯಿಂದ ಪೆರಿಯ ಬಜಾರ್ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ.  ರಾತ್ರಿ ೧೦.೩೦ರ ವೇಳೆ ಸುರಿಯತೊಡಗಿದ ಮಳೆ ಸುಮಾರು ೧೫ ನಿಮಿಷಗಳ ಕಾಲ ಮುಂದುವರಿದಿದೆ. ಇದೇ ವೇಳೆ  ಬೇಸಿಗೆ ಮಳೆಗೆ ರಸ್ತೆಯಲ್ಲಿ ನೀರು ತುಂಬಿಕೊಂಡರೆ  ಮಳೆಗಾಲದಲ್ಲಿ ಏನಾಗಿರಲಿದೆಯೆಂಬ ಬಗ್ಗೆ  ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.  ಎರಡೂ ಭಾಗಗಳಿಂದ ಹರಿದು ಬರುವ ಮಳೆ ನೀರು   ಪೆರಿಯ ಬಜಾರ್ ರಾಷ್ಟ್ರೀಯ ಹೆದ್ದಾರಿಯ ಕೆಳ ಸೇತುವೆ ಸಮೀಪ ತುಂಬಿಕೊಳ್ಳುತ್ತಿದೆ. ಇಲ್ಲಿಂದ  ಮಳೆ ನೀರು ಹರಿದುಹೋ …

ಕಾಸರಗೋಡು ನಗರದಲ್ಲಿ ರಾತ್ರಿ ಕಾಲ ಆಟೋ ಚಾಲಕರಲ್ಲಿ ಕೆಲವರು ನೈತಿಕ ಪೊಲೀಸರಾಗುತ್ತಿರುವುದಾಗಿ ಬಿಎಂಎಸ್ ಆರೋಪ

ಕಾಸರಗೋಡು: ನಗರದಲ್ಲಿ ರಾತ್ರಿ ಕಾಲ ಆಟೋ ಚಾಲಕರಲ್ಲಿ ಕೆಲವರು ನೈತಿಕ ಪೊಲೀಸ್‌ಗಿರಿ ತೋರಿಸುತ್ತಿರುವು ದಾಗಿ ಬಿಎಂಎಸ್ ಆರೋಪಿಸಿದೆ. ರಾತ್ರಿ ಕಾಲದ ಗೂಂಡಾ ಪ್ರವೃತ್ತಿಯನ್ನು ಕೊನೆಗೊಳಿಸಬೇಕೆಂದು ಪೊಲೀಸರಲ್ಲಿ ಬಿಎಂಎಸ್ ಆಗ್ರಹಿಸಿದೆ. ಪೇಟೆಯಲ್ಲಿ ರಾತ್ರಿ ಕಾಲಗಳಲ್ಲಿ ಆಟೋ ನಿಲುಗಡೆ ಸ್ಥಳಗಳಲ್ಲಿ ನಿಲ್ಲಿಸುವ ಆಟೋ ರಿಕ್ಷಾಗಳ ಚಾಲಕರಲ್ಲಿ ಸ್ಟಾಂಡ್‌ನಿಂದ ಆಟೋ ವನ್ನು ತೆಗೆಯಬೇಕೆಂದು ಆಗ್ರಹಿಸುತ್ತಿ ರುವುದಾಗಿಯೂ, ತೆಗೆಯದಿದ್ದರೆ ಆಕ್ರಮಣ ನಡೆಸುವುದಾಗಿಯೂ ಬೆದರಿಕೆಯೊಡ್ಡುತ್ತಿರುವುದಾಗಿ ಬಿಎಂಎಸ್ ಸಭೆ ಆರೋಪಿಸಿದೆ. ಫೆಬ್ರವರಿ ೨೫ರಂದು ರಾತ್ರಿ ಕೆಎಸ್‌ಆರ್‌ಟಿಸಿ ಕಿಂಗ್ ಕೋಬ್ರಾ ಆಟೋ ಸ್ಟಾಂಡ್‌ನಲ್ಲಿ ಸ್ಥಿರವಾಗಿ ನಿಲುಗಡೆ ಮಾಡುವ …

ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘಕ್ಕೆ ಸಹಕಾರಿ ರತ್ನ ಪುರಸ್ಕಾರ

ಕಾಸರಗೋಡು:  ತೃಶೂರು ಕೇಂದ್ರವಾಗಿ ಕಾರ್ಯಾಚರಿಸುವ ಟೀಮ್ ಕೋ-ಆಪರೇಟಿವ್‌ನ ಸಹಕಾರಿ ರತ್ನ ಪುರಸ್ಕಾರ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘಕ್ಕೆ ಲಭಿಸಿದೆ. ಸಂಘದ ಸ್ತುತ್ಯರ್ಹವಾದ ಚಟುವಟಿಕೆ, ನೂತನ ಸಹಕಾರಿ ಮಾದರಿಗಳು ಎಂಬಿವುಗಳನ್ನು ಪರಿಗಣಿಸಿ ಪುರಸ್ಕಾರ ಲಭಿಸಿದೆ. ಕಲ್ಲಿಕೋಟೆ ನಳಂದ ಸಭಾಂಗಣದಲ್ಲಿ ನಡೆದ ಸಹಕಾರಿ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಂಘಕ್ಕೆ ಬೇಕಾಗಿ ಕಾರ್ಯದರ್ಶಿ ಪ್ರದೀಪ್ ಕೆ. ಪುರಸ್ಕಾರ ಸ್ವೀಕರಿಸಿದರು. ಅಗ್ರಿಕಲ್ಚರ್ ಕೋ-ಓಪರೇಟಿವ್ ಸ್ಟಾಫ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನ ಮಾಜಿ ನಿರ್ದೇಶಕ ಬಿ.ಪಿ. ಪಿಳ್ಳ, ಐ.ಸಿ.ಎಂ. ಮಾಜಿ ನಿರ್ದೇಶಕ ಎಂ.ವಿ. ಶಶಿಕುಮಾರ್, …

ಬಿಜೆಪಿ ಬದಿಯಡ್ಕ ಮಂಡಲ ಕಾರ್ಯಕರ್ತರ ಶಿಬಿರ

ಬದಿಯಡ್ಕ: ಬಿಜೆಪಿ ಬದಿಯಡ್ಕ ಮಂಡಲ ಕಾರ್ಯಕರ್ತರ ಶಿಬಿರ ಮಾರ್ಪನಡ್ಕದಲ್ಲಿ ಜರಗಿದ್ದು, ಬೆಳ್ತಂಗಡಿ ಶಾಸಕ ಹಾಗೂ ಕಾಸರಗೋಡು ವಿಧಾನಸಭಾ ಮಂಡಲ ಚುನಾವಣಾ ಪ್ರಭಾರಿ ಹರೀಶ್ ಪೂಂಜ ಉದ್ಘಾಟಿಸಿದರು. ಬಿಜೆಪಿ ಕೇರಳದಲ್ಲೂ ಅಧಿಕಾರಕ್ಕೇರಬೇಕಾದುದು ಕಾಲ ಘಟ್ಟದ ಅನಿವಾರ್ಯತೆ ಎಂದು, ಸ್ಥಳೀಯಾಡಳಿತ ಚುನಾವಣೆಯಲ್ಲಿ ಕೇರಳದಾದ್ಯಂತ ಗಳಿಸಿದ ಮುನ್ನಡೆ ವಿಧಾನಸಭಾ ಚುನಾವಣೆಯಲ್ಲೂ ಪ್ರತಿಫಲಿಸಲಿದೆ ಎಂದು ಅವರು ನುಡಿದರು. ಮಂಡಲ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಕೆ. ಶ್ರೀಕಾಂತ್, ಸುಧಾಮ ಗೋಸಾಡ, ಎಂ.ಎಲ್. ಅಶ್ವಿನಿ, ಮಣಿಕಂಠ ರೈ, ಶ್ರೀಧರ ಬೆಳ್ಳೂರು, ರವೀಂದ್ರ …

ಮಹಿಳೆಯರನ್ನು ಗೌರವಿಸುವುದು ಭಾರತೀಯ ಸಂಸ್ಕಾರ- ಬ್ರಹ್ಮಚಾರಿಣಿ ದಿಶಾ ಚೈತನ್ಯ

ಕಾಸರಗೋಡು: ಮಹಿಳೆಯರನ್ನು ಗೌರವಿಸುವುದು, ಅಂಗೀಕರಿಸುವ ಸಂಸ್ಕಾರ ಭಾರತೀಯ ಸಂಸ್ಕಾರವಾಗಿದೆ ಎಂದು ಚಿನ್ಮಯ ಮಿಷನ್‌ನ ಬ್ರಹ್ಮಚಾರಿಣಿ ದಿಶಾ ಚೈತನ್ಯ ನುಡಿದರು. ಭಾರತೀಯ ಅಭಿಭಾಷಕ ಪರಿಷತ್‌ನ ಆಶ್ರಯದಲ್ಲಿ ನಡೆಸಿದ ರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಯವಾದಿ ಬೀನ ಕೆ.ಎಂ. ಅಧ್ಯಕ್ಷತೆ ವಹಿಸಿದರು. ಅಭಿಭಾಷಕ ಪರಿಷತ್ ಜಿಲ್ಲಾಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್, ನ್ಯಾಯವಾದಿಗಳಾದ ಬಿ. ರವೀಂದ್ರನ್, ಹರ್ಷಿತ, ಜಾಹ್ನವಿ ಮಾತನಾಡಿದರು.

ಎಕೆಪಿಎ ಈಸ್ಟ್ ಘಟಕದಿಂದ ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಗೆ ಅಭಿನಂದನೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಈಸ್ಟ್ ಘಟಕದ ವತಿಯಿಂದ ನಡೆದ ಮಹಿಳಾ ದಿನಾಚರಣೆಯಂಗವಾಗಿ ಹಸಿರು ಕ್ರಿಯಾಸೇನೆಯಲ್ಲಿ ಕಳೆದ 9 ವರ್ಷದಿಂದ ದುಡಿಯುತ್ತಿರುವ ಗಾಯತ್ರಿ ಕಿಣಿಯವರನ್ನು ಅಭಿನಂದಿಸಲಾಯಿತು. ಈಸ್ಟ್ ಯೂನಿಟ್ ಅಧ್ಯಕ್ಷ ರಾಜಶೇಖರ ಅಭಿನಂದಿಸಿದರು. ಕಾರ್ಯದರ್ಶಿ ಅಖಿಲ್, ಕೋಶಾಧಿಕಾರಿ ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯ ರಾಜೇಂದ್ರನ್, ಜಿಲ್ಲಾ ಸಮಿತಿ ಸದಸ್ಯ ಸಂಜೀವ್ ರೈ, ವಲಯ ಕೋಶಾಧಿಕಾರಿ ಅಜಿತ್ ಕುಮಾರ್, ಘಟಕ ಸದಸ್ಯರಾದ ಫೈಸಲ್, ಸುರೇಶ್ ಬಿ.ಜೆ. ಭಾಗವಹಿಸಿದರು.

ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ: ಅಡುಗೆ ಅನಿಲ ಬೆಲೆ ಹೆಚ್ಚಳ

ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಶಮನಗೊಳ್ಳದೆ ಇನ್ನೂ ಮುಂದುವರಿಯುತ್ತಿರುವ ವೇಳೆಯಲ್ಲೇ ಭಾರತಕ್ಕೂ ಅದರ ಬಿಸಿ ತಟ್ಟಿದ್ದು, ಇದರ ಪರಿಣಾಮ ಅಡುಗೆ ಅನಿಲ ಬೆಲೆ ಇಂದು ಬೆಳಿಗ್ಗಿನಿಂದ ಗಗನಕ್ಕೇರಿದೆ.  ಮಧ್ಯಪ್ರಾಚ್ಯ ಯುದ್ದದ ಪರಿಸ್ಥಿತಿಯೇ ಬೆಲೆಯೇರಿಕೆಗೆ ಕಾರಣವೆಂದು ವಿಶ್ಲೇಷಿಸಲಾಗಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ತಲಾ 60 ರೂ.ನಂತೆ  ಇಂದಿನಿಂದ ಹೆಚ್ಚಿಸಲಾಗಿದೆ. ಇದರಿಂದಾಗಿ 14 ಕೆಜಿ ಸಿಲಿಂಡರೊಂದರ ಬೆಲೆ ಈಗ 915 ರೂ.ಗೇರಿದೆ. ಇನ್ನು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲೂ ಹೆಚ್ಚಳ ತರಲಾಗಿದೆ. ಇದರಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ …

ಜಸೀಲಾ ಆತ್ಮಹತ್ಯೆ ಪ್ರಕರಣ: ನೆರೆಮನೆ ನಿವಾಸಿ ಮಹಿಳೆ ಸೆರೆ

ಕಾಸರಗೋಡು: ಚಿನ್ನ ಕಳವುಗೈದಿರುವುದಾಗಿ ಹೊರಿಸಲಾದ ಆರೋಪದಿಂದ ಮನನೊಂದು ಆಲಂಪಾಡಿ ನಾಲತ್ತಡ್ಕ ನಿವಾಸಿ ಜಸೀಲಾ (24) ಎಂಬಾಕೆ ವಿಷಸೇವಿಸಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿ ಮನೆಯ ನೆರೆಮನೆ ನಿವಾಸಿಯಾದ ಮಹಿಳೆಯನ್ನು ಬಳಿಕ ವಿದ್ಯಾನಗರ  ಠಾಣೆಯ ಎಸ್‌ಐ ಸಫ್ವಾನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಮುಳಿಯಾರು ಪೊವ್ವಲ್ ಬೆಂಚ್‌ಕೋರ್ಟ್‌ಗೆ ಸಮೀಪದ ಆಯಿಷಾ (48) ಬಂಧಿತಳಾದ ಆರೋಪಿ. ನಂತರ ನ್ಯಾಯಾಲಯದ ಆದೇಶ ಪ್ರಕಾರ ಆಕೆಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಆಕೆಯ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ವಿಷಪ್ರಾಶನಗೈದ …