ಕುಂಬಳೆಯಲ್ಲಿ ಐಕ್ಯರಂಗದ ನವಯುಗ ಯಾತ್ರೆಗೆ ಅದ್ಧೂರಿ ಚಾಲನೆ: ಐಕ್ಯರಂಗ ಅಧಿಕಾರಕ್ಕೇರಿದರೆ ದೇವಸ್ಥಾನ ಕಳ್ಳರನ್ನು ಸೆರೆ ಹಿಡಿಯಲಾಗುವುದು- ಕೆ.ಸಿ. ವೇಣುಗೋಪಾಲನ್
ಕುಂಬಳೆ: ವಿಧಾನಸಭಾ ಚುನಾವಣೆ ಯಲ್ಲಿ ಐಕ್ಯರಂಗ ಅಧಿಕಾರಕ್ಕೇರಿದರೆ ದೇವಸ್ಥಾನ ಕಳ್ಳರನ್ನು ಸೆರೆ ಹಿಡಿಯುವುದೇ ಪ್ರಥಮ ಕಾರ್ಯವೆಂದು ಎಐಸಿಸಿ ಜನರಲ್ ಸೆಕ್ರೆಟರಿ, ಸಂಸದ ಕೆ.ಸಿ. ವೇಣುಗೋಪಾಲ್ ನುಡಿದರು. ಕುಂಬಳೆಯಲ್ಲಿ ಐಕ್ಯರಂಗದ ನವಯುಗ ಯಾತ್ರೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಾಥಾ ನಾಯಕ ವಿ.ಡಿ. ಸತೀಶನ್ರಿಗೆ ಐಕ್ಯರಂಗದ ಘಟಕ ಪಕ್ಷಗಳ ಪತಾಕೆಗಳು ಒಳಗೊಂಡ ಧ್ವಜವನ್ನು ಹಸ್ತಾಂತರಿಸಿ ಅವರು ಉದ್ಘಾಟನೆ ನೆರವೇರಿಸಿದರು. ಯಾತ್ರೆ ಮಾರ್ಚ್ 7ರಂದು ತಿರುವನಂತಪುರದಲ್ಲಿ ಸಮಾಪ್ತಿಗೊಳ್ಳುವಾಗ ರಾಜ್ಯದ ಎಡರಂಗ ಸರಕಾರ ಹೊರ ಹೋಗುವುದರ ರಣಕಹಳೆ ಮೊಳಗಲಿದೆ. ಪಿಣರಾಯಿ ವಿಜಯನ್ ಸರಕಾರ …