ಸೀತಾಂಗೋಳಿಯಲ್ಲಿ ಯುವಕನ ಕೊಲೆ : ಬಂಧಿತ ಆರೋಪಿಗೆ ರಿಮಾಂಡ್

ಕುಂಬಳೆ: ಬಾಪಾಲಿಪೊನ ಕುಂಟಿಕಾನ ನಿವಾಸಿಯಾದ  ಸಫಾಹಿದ್  ಯಾನೆ ಶಫಾಯತ್ (35) ಎಂಬವರನ್ನು ತಲೆಗೆ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಸೆರೆಗೀಡಾದ ಕುಂಬಳೆ ನಾಯ್ಕಾಪು ಕೋಟೆಕಾರಿನ ಶ್ರೀನಿವಾಸ (39) ಎಂಬಾತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಇದೇ ವೇಳೆ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಯುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.  ಘಟನೆಗೆ ಸಂಬಂಧಿಸಿ  ಸೀತಾಂಗೋಳಿಯ ವಿವಿಧೆಡೆಗಳ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾ ಗುತ್ತಿದೆ. ಈ ಪ್ರಕರಣದಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾ ರೆಯೇ ಎಂದು ತಿಳಿಯಲು ತನಿಖೆ ಮುಂದುವರಿಸಲಾಗಿದೆಯೆಂದು  ಪೊಲೀಸರು ತಿಳಿಸಿದ್ದಾರೆ. …

ಕೋಟೆಕಾರಿನಲ್ಲಿ ಯುವಕನ ಮೃತದೇಹ ಪತ್ತೆ: ತಲೆಯ ರಕ್ತಸ್ರಾವ ಸಾವಿಗೆ ಕಾರಣವೆಂದು ಮರಣೋತ್ತರ ವರದಿ

ಕುಂಬಳೆ: ಕೋಟೆಕಾರಿನಲ್ಲಿ ಕಾಂಗ್ರೆಸ್ ಮಂಡಲ ಅಧ್ಯಕ್ಷ ರವಿ ಪೂಜಾರಿಯವರ ಸಹೋದರ ಮೈದಾನ ಸಮೀಪ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿರುವುದು ತಲೆಯ ರಕ್ತಸ್ರಾವದ ಹಿನ್ನೆಲೆಯಲ್ಲಿ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಸಾವಿನಲ್ಲಿನ ನಿಗೂಢತೆ  ಇಲ್ಲದಾಗಿದೆ ಎಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಬೆಳಿಗ್ಗೆ ಕೋಟೆಕಾರಿನ ಸುನಿಲ್ ಕುಮಾರ್ (40)ರನ್ನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಪೈಂಟಿಂಗ್ ಕಾರ್ಮಿಕನಾದ ಸುನಿಲ್ ಕುಮಾರ್ ಮಂಗಳವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ತಲುಪಿರಲಿಲ್ಲ. ಈ ಮಧ್ಯೆ ಮೃತದೇಹದ ಮೂಗಿನಿಂದ ರಕ್ತ ಹರಿಯುತ್ತಿದ್ದ …

ಹತ್ತನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ: ಸಹಪಾಠಿ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಹತ್ತನೇ ತರಗತಿ ವಿದ್ಯಾರ್ಥಿನಿಯೋರ್ವೆ ಗರ್ಭಿಣಿಯಾಗಿದ್ದು, ಈ ಸಂಬಂಧ ಬಾಲಕಿಯ ಸಹಪಾಠಿಯಾದ 16ರ  ಹರೆಯದ ಬಾಲಕನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಹೊಸದುರ್ಗ ಪೊಲೀಸ್ ಸಬ್ ಡಿವಿಶನ್ ವ್ಯಾಪ್ತಿಯ ನಿವಾಸಿಯಾದ ಬಾಲಕಿ ಗರ್ಭಿಣಿಯಾಗಿರುವುದಾಗಿ ಹೇಳಲಾಗುತ್ತಿದೆ.  ಅಸ್ವಸ್ಥತೆ ಕಂಡುಬಂದ ಹಿನ್ನೆಲೆಯಲ್ಲಿ ಬಾಲಕಿಯನ್ನು ವೈದ್ಯರ ಬಳಿಗೆ ಕರೆದೊಯ್ಯಲಾಗಿತ್ತು. ವೈದ್ಯರು ತಪಾಸಣೆ ನಡೆಸಿದಾಗ ಬಾಲಕಿ ಗರ್ಭಿಣಿಯಾಗಿದ್ದಾಳೆಂದು ತಿಳಿದುಬಂದಿದೆ. ಈ ಬಗ್ಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಇದರಂತೆ ಪೊಲೀಸರು ತನಿಖೆ ನಡೆಸಿ ಸಹಪಾಠಿ ವಿರುದ್ಧ ಕೇಸು ದಾಖಲಿಸಿದ್ದಾರೆ.

ಕೊಲೆಯತ್ನ ಪ್ರಕರಣ: ಆರೋಪಿಗೆ 12 ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ರಾಮು ರಮೇಶ್ ಚಂದ್ರಭಾನು ಅವರು ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು 12 ವರ್ಷ ಕಠಿಣ ಸಜೆ ಮತ್ತು ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಪಾಡಿ ಗ್ರಾಮದ ಎದುರ್ತೋಡು ನಿವಾಸಿ ಇ. ರಂಜಿತ್ ಅಲಿಯಾಸ್ ಬಂಗನ್ (29) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ೯ ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. …

ಮನೆಯೊಳಗೆ ಪತ್ತೆಯಾದ ಹಾವಿನ ದೇಹದಲ್ಲಿ ಚಿನ್ನದ ಉಂಗುರ

ಮುಳ್ಳೇರಿಯ: ಮನೆಯೊಳಗೆ ಪತ್ತೆಯಾದ  ಹಾವಿನ ದೇಹದಲ್ಲಿ ಚಿನ್ನದ ಉಂಗುರ ಕಂಡುಬಂದಿದ್ದು ಇದು ಆಶ್ಚರ್ಯಕ್ಕೆ ಕಾರಣವಾಗಿದೆ. ಅಡೂರು ಪದಿಕ್ಕಾಲ್ ನಿವಾಸಿ ರವಿ ಎಂಬವರ ಮನೆಯೊಳಗೆ ನಿನ್ನೆ ಬೆಳಿಗ್ಗೆ ಹಾವು ಕಂಡುಬಂದಿತ್ತು.  ಮರದಿಂದ ತಯಾರಿಸಿದ ಮೇಜಿನೊಳಗೆ ಹಾವು ಅವಿತುಕೊಂಡಿತ್ತೆನ್ನ ಲಾಗಿದೆ. ಮಕ್ಕಳು ಮೇಜು ತೆರೆಯಲೆತ್ನಿಸಿದಾಗ  ಹಾವು ಕಂಡುಬಂದಿದ್ದು, ಈ ಬಗ್ಗೆ ಮಕ್ಕಳು ಹಿರಿಯರಿಗೆ ತಿಳಿಸಿದ್ದಾರೆ. ಅದು ನಾಗರಹಾವಾಗಿ ರಬಹುದೇ ಎಂದು ಭಯಗೊಂಡ  ಮನೆಯವರು ಕೂಡಲೇ  ಫಾರೆಸ್ಟರ್ ಕೃಷ್ಣನ್ ಎಂಬವರಿಗೆ ವಿಷಯ ತಿಳಿಸಿದ್ದಾರೆ.  ಕೃಷ್ಣನ್ ಸ್ಥಳಕ್ಕೆ ತಲುಪಿ ಪರಿಶೀಲಿಸಿದಾಗ ಹಾವು ಕಂಡುಬಂದಿದ್ದು,  …

ಪೈವಳಿಕೆ: ಎಂ.ಎಂ. ಟೈಲರ್ ನಿಧನ

ಪೈವಳಿಕೆ: ಹಲವು ವರ್ಷ ಗಳಿಂದ ಟೈಲರ್ ಆಗಿ ದುಡಿಯುತ್ತಿದ್ದ ಎಂ.ಎಂ. ಟೈಲರ್ ಎಂದೇ ಕರೆಸಿಕೊಂಡಿದ್ದ ಮಳಿವ್ ಮುಂಡಪ್ಪ ಟೈಲರ್ (68) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ವಿಜಯ, ಮಕ್ಕಳಾದ ಮಹೇಶ್, ಸುಸ್ಮಿತಾ, ಅಳಿಯ ಗುರುರಾಜ್, ಸಹೋದರ ನಾರಾಯಣ, ಸಹೋದರಿ ಯರಾದ ಲಕ್ಷ್ಮೀ, ಲೀಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ ಕಾರ್ಯದರ್ಶಿ ಚಂದ್ರ ನಾಕ್ ಮಾನಿಪ್ಪಾಡಿ, ರಾಮ ಏದಾರ್, ನಬೀಸ, ರಫೀಕ್ ಬಾಯಿಕಟ್ಟೆ, ಬಾಬು ವಾದ್ಯಪಡ್ಪು, …

ಹಾನಿಗೊಂಡ ಕೆಪಿಆರ್ ರಾವ್ ರಸ್ತೆ :ಮಳೆಗೆ ಮುಂಚಿತ ದುರಸ್ತಿಗೆ ಆಗ್ರಹ

ಕಾಸರಗೋಡು: ಕಳೆದ ವರ್ಷದ ತೀವ್ರ ಮಳೆಗೆ ರಸ್ತೆಯ ಒಂದು ಭಾಗವೇ ನಾಶವಾದ ಸ್ಥಿತಿಯಲ್ಲಿರುವ  ಕೆ.ಪಿ.ಆರ್ ರಾವ್ ರಸ್ತೆಯ ದುರವಸ್ಥೆಗೆ ಇನ್ನೂ ಪರಿಹಾರವಾಗಿಲ್ಲ. ಮಳೆಗೆ ಮುಂಚಿತವೇ ರಸ್ತೆ ಹಾನಿಯಾಗಲು ಆರಂಭಿಸಿದ್ದರೂ ಮಳೆಗೆ ಪೂರ್ಣ ನಾಶವಾಗಿದೆ. ಹಾನಿಗೊಂಡ ರಸ್ತೆಯ ಒಂದು ಬದಿ ವಾಹನಗಳನ್ನು ನಿಲ್ಲಿಸುವುದರಿಂದಾಗಿ ವ್ಯಾಪಾರಿಗಳ ಸಮಸ್ಯೆ ಹೆಚ್ಚಿದೆ. ಈ ಪ್ರದೇಶದಲ್ಲಿ ಟೆಲಿಕಾಂ ಕಚೇರಿ, ಸಿನಿಮಾ ಟಾಕೀಸ್ ಸಹಿತ ಹಲವು ಸಂಸ್ಥೆಗಳಿದ್ದು,ದಟ್ಟಣೆ ರಸ್ತೆ ಇದಾಗಿದೆ. ಮಳೆ ಆರಂಭಕ್ಕೂ ಮುಂಚಿತ ಈ ರಸ್ತೆಯ ಪ್ರಧಾನ ಅಂಚೆ ಕಚೇರಿಯಿಂದ ಕೆಎಸ್‌ಆರ್‌ಟಿಸಿ ನಿಲ್ದಾಣವರೆಗೆ ಕಾಂಕ್ರೀಟ್ …

ಹಿರಿಯ ವ್ಯಾಪಾರಿ ನಿಧನ

ನೀರ್ಚಾಲು:  ಹಿರಿಯ ವ್ಯಾಪಾರಿಯೂ, ಕುಂಬೋಲ್ ತರವಾಡು ಸದಸ್ಯನಾದ  ನೀರ್ಚಾಲು ಮೇಲಿನ ಪೇಟೆಯ ಮುಹಮ್ಮದ್ ಕುಂಞಿ ಹಾಜಿ (79) ನಿಧನಹೊಂದಿದರು. ಮೃತರು ಪತ್ನಿ ಮರಿಯಮ್ಮ, ಮಕ್ಕಳಾದ ಆಸ್ಯಮ್ಮ, ಸಕೀನ, ನಸೀಮ, ಸುಹರ, ಸಫಿಯಾ, ಸಾಜಿದ, ಅಳಿಯ-ಸೊಸೆಯಂದಿ ರಾದ ಮುಹಮ್ಮದ್ (ಉಳುವಾರು), ಅಬ್ದುರಹ್ಮಾನ್ (ಚೇರಾಲ್), ಮುಹಮ್ಮದ್ (ಪೂಕಟ್ಟೆ),ಸಮದ್, ಮುಸ್ತಫ (ಕುಂಬೋಲ್), ಸಹೋದರ-ಸಹೋದರಿಯರಾದ ಅಬ್ದುಲ್ಲ ಹಾಜಿ (ನೀರ್ಚಾಲು), ಬೀಫಾತಿಮ, ಮರಿಯಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಅಳಿಯ ಮುಹ ಮ್ಮದ್ ಕುಂಞಿ (ಆರಿಕ್ಕಾಡಿ), ಸಹೋದರ ಮೊಯ್ದೀನ್ ಕುಂಞಿ, ಸಹೋದರಿ ಖದೀಜ …

ಮಧೂರು ಮಿತ್ರ ಕಲಾವೃಂದದಿಂದ ಬಹುಭಾಷಾ ಕವಿ ಸಂಗಮ ಮೇ 2ರಂದು

ಮಧೂರು:  ಮಿತ್ರ ಕಲಾವೃಂದ  ಮಧೂರು ಇದರ ಸುವರ್ಣ ಸಂಭ್ರಮ ದಂಗವಾಗಿ  ಬಹುಭಾಷಾ ಕವಿ ಸಂಗಮ ಮೇ 2ರಂದು ಬೆಳಿಗ್ಗೆ 10ರಿಂದ ಮಧೂರು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ. ಸಾಹಿತಿ ವಿಟ್ಲ ಅರಮನೆಯ ಸೀತಾಲಕ್ಷ್ಮಿ ವರ್ಮ ದೀಪ ಪ್ರಜ್ವಲನೆ ನಡೆಸುವರು.  ಹಿರಿಯ ಸಾವಿತಿ ವಿ.ಬಿ. ಕುಳಮರ್ವ ಅಧ್ಯಕ್ಷತೆ ವಹಿಸುವರು. ಕವಿ ರಾಧಾಕೃಷ್ಣ ಕೆ ಉಳಿಯಡತ್ತಡ್ಕ ಪ್ರಸ್ತಾವನೆ ನಡೆಸುವರು. ಚುಟುಕು ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷೆ ಅಶ್ವಿನಿ ಕೋಡಿಬೈಲು ಆಶಯ ನುಡಿಯುವರು. ಕ.ಸಾ.ಪ ಅಧ್ಯಕ್ಷ ಡಾ| …

ಅನಧಿಕೃತವಾಗಿ ವಾಸಿಸುತ್ತಿದ್ದ ಬಾಂಗ್ಲಾ ಯುವತಿಯರು ಸಹಿತ ೮ ಮಂದಿ ಸೆರೆ :ವೇಶ್ಯಾವಾಟಿಕೆ ದಂಧೆಯವರೆಂದು ಶಂಕೆ

ತಿರುವನಂತಪುರ: ಅನಧಿಕೃತ ವಾಗಿ ವಾಸ ಮಾಡುತ್ತಿದ್ದ ಇಬ್ಬರು ಬಾಂಗ್ಲಾ ಯುವತಿಯರ ಸಹಿತ ೮ ಮಂದಿಯನ್ನು ಕಳಕೂಟಂ ಕಾರ್ಯ ವಟ್ಟಂ ಮೇನಲ್ಲೂರ್‌ನ ದ್ವಿಮಹಡಿ ಮನೆಯಿಂದ ಕಳಕೂಟಂ ಪೊಲೀ ಸರು ಬಂಧಿಸಿದ್ದಾರೆ. ಬಾಂಗ್ಲಾ ನಿವಾಸಿ ಗಳಾದ ಸುಮಿ, ಇದ್ಕಾನೂನ್, ಕೊಲ್ಲಂ ನಿವಾಸಿ ಪುಷ್ಪಾ, ಕಾಟಕ್ಕಡದ ಸುದೀಪ್, ಕರ್ನಾಟಕದ ಡ್ಯಾನಿಯೇಲ್, ವರ್ಕಲ ನಿವಾಸಿ ನೌಫಿಯ, ಬೆಂಗಳೂರಿನ ಮಧುಮತಿ, ಪಶ್ಚಿಮ ಬಂಗಾಳದ ಮೌಸಮಿ ಬಸ್ವಾಳ್ ಎಂಬಿವರನ್ನು ವಶಕ್ಕೆ ಪಡೆಯಲಾಗಿದೆ. ಈ ತಂಡ ವೇಶ್ಯಾವಾಟಿಕೆ ದಂಧೆ ನಡೆಸುವವ ರಾಗಿದ್ದಾರೆಂದು ಶಂಕಿಸಲಾಗಿದೆ. ಬಾಡಿಗೆ ಮನೆಯಿಂದ ಎರಡು …