ಮದುವೆ ನಿಶ್ಚಿತಾರ್ಥ ನಡೆದ ಯುವಕ ಬೈಕ್ ಅಪಘಾತದಲ್ಲಿ ಮೃತ್ಯು: ಯುವತಿ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮದುವೆ ನಿಶ್ಚಿತಾರ್ಥ ನಡೆದ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆಯಿಂದ ಮನನೊಂದಿದ್ದ ಯುವತಿ ಮನೆಯೊಳಗೆ ಫ್ಯಾನ್‌ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಿದೂರು ಕುಂಟಂಗೇರಡ್ಕದ ಬಿ. ಜಯಾನಂದರ ಪುತ್ರಿ ಪ್ರಪುಲ್ಲ (26) ಸಾವಿಗೀಡಾದ ಯುವತಿ ಯಾಗಿದ್ದಾಳೆ. ನಿನ್ನೆ ಸಂಜೆ ವೇಳೆ ಈಕೆಯ ಮೃತದೇಹ  ಮನೆ ಯೊಳಗೆ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ವೇಳೆ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಮನೆಯವರು ಜಯ ನಂದರ ಸಹೋದರಿಯ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. …

ಫಲಿತಾಂಶ ಬಂದು ಒಂದು ವಾರವಾದರೂ ಮುಖ್ಯಮಂತ್ರಿ ಆಯ್ಕೆ ಇನ್ನೂ ಕಗ್ಗಂಟು

ತಿರುವನಂತಪುರ: ಕೇರಳ ವಿಧಾನ ಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ಇಂದಿಗೆ ಒಂದು ವಾರವಾದರೂ ನೂತನ ಮುಖ್ಯಮಂತ್ರಿ ಯಾರು ಎಂಬುದು  ಪ್ರಶ್ನೆಯಾಗಿಯೇ ಮುಂದುವರಿ ಯುತ್ತಿದೆ. ಚುನಾವಣೆಯಲ್ಲಿ ಯುಡಿಎಫ್‌ಗೆ 102 ಸ್ಥಾನಗಳೊಂದಿಗೆ ಪ್ರಚಂಡ ಬಹುಮತ ಲಭಿಸಿದ್ದರೂ ನೂತನ ಮುಖ್ಯಮಂತ್ರಿಯನ್ನು ನಿರ್ಧರಿಸುವಲ್ಲಿ ಸಂದಿಗ್ಧತೆ ಮುಂದುವರಿಯುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ವಿ.ಡಿ. ಸತೀಶನ್, ರಮೇಶ್ ಚೆನ್ನಿತ್ತಲ ಹಾಗೂ ಕೆ.ಸಿ. ವೇಣುಗೋಪಾಲ್ ಎಂಬಿವರ ಮಧ್ಯೆ   ಪೈಪೋಟಿ ಮುಂದುವರಿಯುತ್ತಿದೆ. ಇದೇ ವೇಳೆ ಈ ಮೂವರು ನೇತಾರರನ್ನು ದಿಲ್ಲಿಗೆ ಕರೆಸಿ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಪ್ರತ್ಯೇಕ ಪ್ರತ್ಯೇಕವಾಗಿ  …

ಮಾಡ ಕ್ಷೇತ್ರದ ನಿವೃತ್ತ ಮೈಕ್ ಆಪರೇಟರ್ ನಿಧನ

ಮಂಜೇಶ್ವರ: ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಕ್ಷೇತ್ರದ ನಿವೃತ್ತ ಮೈಕ್ ಆಪರೇಟರ್ ಜನಾರ್ದನ ಯು. (70) ನಿಧನ ಹೊಂದಿದರು. ಮಂಜಪ್ಪ- ಪೂವಮ್ಮ ದಂಪತಿ ಪುತ್ರನಾಗಿದ್ದಾರೆ. ಎಸ್‌ಎನ್‌ಡಿಪಿ, ಮಾಡ ತೀಯಾ ಸಮಾಜದ ಮುಖಂ ಡರಾಗಿದ್ದರು. ಮಾಡ ಕ್ಷೇತ್ರದಲ್ಲಿ ಕಳೆದ ೩೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಇಂದು ಮುಂಜಾನೆ ೩ ಗಂಟೆಗೆ ನಿಧನ ಸಂಭವಿಸಿದೆ. ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ನಿತಿನ್, ದೀಪಿಕ, ಅಳಿಯ ಶಿವಪ್ರಸಾದ್ ಕೊಲ್ಯ, ಸೊಸೆ ಶ್ರದ್ಧಾ, ಸಹೋದರಿಯರಾದ ಸೇಸಮ್ಮ, ಕೃಷ್ಣಮ್ಮ, ಯಮುನ ಹಾಗೂ ಅಪಾರ …

ಹೊಳೆಯಿಂದ ಅನಧಿಕೃತ ಮರಳು ಸಾಗಾಟ: ಲಾರಿ ಸಹಿತ ಚಾಲಕ ಸೆರೆ

ಮಂಜೇಶ್ವರ : ಹೊಳೆಯಿಂದ ಅನಧಿಕೃತವಾಗಿ ಮರಳು ಸಾಗಾಟ ನಡೆಸುತ್ತಿದ್ದ ಲಾರಿಯನ್ನು ಮಂಜೇಶ್ವರ ಪೊಲೀಸರು  ವಶಪಡಿಸಿ ಚಾಲಕನನ್ನು ಸೆರೆ ಹಿಡಿದಿದ್ದಾರೆ. ಲಾರಿ ಚಾಲಕ ಮಂಗಳೂರು ಪನೆಲ್  ಪಜೀರ್   ವಂಟೆ ಮಜಲ್ ನಿವಾಸಿ ರಸಾದ್ (18)  ಸೆರೆಗೀಡಾದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಬೆಳಿಗ್ಗೆ ವರ್ಕಾಡಿ ಗ್ರಾಮದ ಕೋಣಿಬಯಲು ಎಂಬಲ್ಲಿ ಮಂಜೇಶ್ವರ ಠಾಣೆಯ ಎಸ್.ಐ  ರತೀಶ್ ಹಾಗೂ ಉಪ್ಪಳ ಕಂಟ್ರೋಲ್ ರೂಮ್ ನ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ  ಮರಳು ಹೇರಿದ  ಲಾರಿ ಆಗಮಿಸಿದೆ. ತಪಾಸಣೆ  …

ಅವಯವ ವ್ಯಾಪಾರಕ್ಕಾಗಿ ನಕಲಿ ದಾಖಲುಪತ್ರ ಸೃಷ್ಟಿ: ಪ್ರಧಾನ ಆರೋಪಿ ಕಾಸರಗೋಡು ನಿವಾಸಿ ಉತ್ತರಪ್ರದೇಶದಲ್ಲಿ ಸೆರೆ

ಕಾಸರಗೋಡು: ನಕಲಿ ದಾಖಲು ಪತ್ರಗಳನ್ನು ಸೃಷ್ಟಿಸಿ ಅವಯವ ದಾನ ನಡೆಸುತ್ತಿದ್ದ ಪ್ರಕರಣದ ಪ್ರಧಾನ ಆರೋಪಿಯನ್ನು ಸೆರೆಹಿಡಿಯುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ. ಕಳನಾಡು ಆಲ್ ನಿಹಾಮತ್ ಮಂಜಿಲ್ ನಿವಾಸಿ ಮುಹಮ್ಮದ್ ನಜೀಬ್ ಕಲ್ಲಟ್ರ (53) ಬಂಧಿತ ಪ್ರಧಾನ ಆರೋಪಿ. ಎರ್ನಾಕುಳಂ ಗ್ರಾಮೀಣ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಕೆ.ಎಸ್. ಸುದರ್ಶನ್ ನೇತೃತ್ವದ ವಿಶೇಷ ಪೊಲೀಸರ ತಂಡ ಉತ್ತರಪ್ರದೇಶದ ಗಾಸಿಯಾಬಾದ್ ನಿಂದ ಈತನನ್ನು ಸೆರೆಹಿಡಿದಿದೆ. ತನ್ನನ್ನು ಪೊಲೀಸರು ಹುಡುಕಾಡುತ್ತಿ ರುವುದು  ಮನಗಂಡ ಆರೋಪಿ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್‌ಮಾಡಿ …

ಪಂಚಾಯತ್ ನಿವೃತ್ತ ಕಾರ್ಯದರ್ಶಿ ನಿಧನ

ಮಂಜೇಶ್ವರ: ಹೊಸಂಗಡಿ ಬಳಿಯ ಅಂಗಡಿಪದವು ನಿವಾಸಿ, ಮಂಜೇಶ್ವರ ಪಂಚಾಯತ್ ನಿವೃತ್ತ ಕಾರ್ಯದರ್ಶಿ ಮಹಾಬಲ ಭಟ್ (85) ಶನಿವಾರ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಬದಿಯಡ್ಕ, ಪುತ್ತಿಗೆ ಸಹಿತ ವಿವಿಧ ಪಂಚಾಯತ್‌ಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಮಂಜೇಶ್ವರ ಪಂಚಾಯತ್‌ನಲ್ಲಿ ನಿವೃತ್ತಿ ಹೊಂದಿದ್ದಾರೆ. ಕೆ.ಎಸ್.ಎಸ್.ಪಿ.ಯು ಮಂಜೇಶ್ವರ ಘಟಕದ ಸದಸ್ಯರಾಗಿದ್ದರು. ಮೃತರು ಪತ್ನಿ ರೇವತಿ, ಮಕ್ಕಳಾದ ಗಣೇಶ, ಪಾರ್ವತಿ, ಅಳಿಯ ನ್ಯಾಯವಾದಿ ಕೃಷ್ಣಮೂರ್ತಿ, ಸಹೋದರ ಸಹೋದರಿಯರಾದ ಸದಾಶಿವ ಭಟ್, ಲಕ್ಷಿ÷್ಮÃ, ಶಂಕರಿ, ಶಾರದಾ ಹಾಗೂ ಅಪಾರ ಬಂಧು ಬಳಗ ವನ್ನು …

ಕೂಲಿ ಕಾರ್ಮಿಕ ಅಸೌಖ್ಯದಿಂದ ನಿಧನ

ನೀರ್ಚಾಲು: ಕುಂಟಿಕ್ಕಾನ ಉರುಳಿತ್ತಡ್ಕ ನಿವಾಸಿ ದಿ| ಸುಂದರ ಎಂಬವರ ಪುತ್ರ ರಾಮ ಕೆ. (56) ನಿಧನ ಹೊಂದಿದರು. ಕೂಲಿ ಕಾರ್ಮಿಕ ನಾಗಿದ್ದ ಇವರು 3 ವರ್ಷಗಳಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಮೃತರು ತಾಯಿ ದೇವಕಿ, ಪತ್ನಿ ಗೀತ, ಮಕ್ಕಳಾದ ಚಂದ್ರಶೇಖರ, ವನಜ ಕುಮಾರಿ, ಸುರೇಶ್ ಕುಮಾರ್, ಅಳಿಯ ಗಂಗಾಧರ, ಸೊಸೆ ಶೀಬಾ ಮೋಳ್, ಸಹೋದರ ಸಹೋದರಿಯರಾದ ಸುಕುಮಾರ, ವೇಣುಗೋಪಾಲ, ಶೋಭಾ, ಜಾನಕಿ, ಶಾಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಾಡಿಗೆ ಮನೆಯಲ್ಲಿ ನಿಗೂಢ ರೀತಿಯಲ್ಲಿ ಯುವತಿಯ ಮೃತದೇಹ: ಪತಿ ಕಸ್ಟಡಿಗೆ

ಪಾಲಕ್ಕಾಡ್: 25ರ ಹರೆಯದ ಸೇಲಂ ನಿವಾಸಿ ಬಾಡಿಗೆ ಮನೆಯಲ್ಲಿ  ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಆತೂರು ಪೋತನಾಯಕನ್ ಪಾಳಯಂ ಪುದುಕೋತ್ತಂಪಡಿ ನಿವಾಸಿ ಕೃಷ್ಣವೇಣಿಯ ಮೃತದೇಹ ಈ ರೀತಿಯಲ್ಲಿ ಪತ್ತೆಯಾಗಿದೆ. ತೆನ್ನಾಡಿ ಬಜಾರ್ ವಿವೇಕಾನಂದ ರಸ್ತೆಯ ಬಾಡಿಗೆ ಮನೆಯಲ್ಲಿ ನಿನ್ನೆ ರಾತ್ರಿ ಕೃಷ್ಣವೇಣಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 10 ವರ್ಷಗಳಿಂದ ಒಟ್ಟೆಪ್ಪಾಲಂ ಹಾಗೂ ಪರಿಸರದಲ್ಲಿ ಇವರು ಬಾಡಿಗೆಗೆ ವಾಸಮಾಡುತ್ತಿದ್ದರು. ಪತಿ ಆತೂರು ನಿವಾಸಿ ಮಣಿಕಂಠನ್ ನಿರಂತರ ಮದ್ಯಪಾನ ಗೈದು ಮನೆಯಲ್ಲಿ ಗಲಾಟೆ ನಡೆಸುತ್ತಿದ್ದುದು ಸಾಮಾನ್ಯವಾಗಿತ್ತೆಂದು ನೆರೆಮನೆ ನಿವಾಸಿಗಳು …

ಮುಹಿಮ್ಮಾತ್ ವಾರ್ಷಿಕ ಕೌನ್ಸಿಲ್ ಸಮಾರೋಪ: ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತಿಗೆ: ಮುಹಿಮ್ಮಾತುಲ್ ಇಸ್ಲಾಮಿನ್ ಎಜ್ಯುಕೇಶನ್ ಸೆಂಟರ್‌ನ ವಾರ್ಷಿಕ ಕೌನ್ಸಿಲ್ ಸಮಾಪ್ತಿಗೊಂಡಿತು. ಕಲ್ಲಿಕೋಟೆ ಮರ್ಕ್ಸಿಲ್ ಅಧ್ಯಕ್ಷ ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದು, ಮರ್ಕ್ಸ್ ಡೈರೆಕ್ಟರ್ ಜನರಲ್ ಸಿ. ಮುಹಮ್ಮದ್ ಫೈಸಿ ಉದ್ಘಾಟಿಸಿದರು. ಬಿ.ಎಸ್. ಅಬ್ದುಲ್ಲ ಕುಂಞಿ ಫೈಸಿ ಪ್ರಸ್ತಾಪಿಸಿದರು. ಹಸನುಲ್ ಅಹ್ದಲ್ ತಂಙಳ್ ಚರ್ಚೆಗಳಿಗೆ ನೇತೃತ್ವ ನೀಡಿದರು. ಮೂಸ ಸಖಾಫಿ ಕಳತ್ತೂರು ವರದಿ, ಉಮ್ಮರ್ ಸಖಾಫಿ ಕರ್ನೂರು ಆರ್ಥಿಕ ವರದಿ ಮಂಡಿಸಿದರು. ಹಲವಾರು ಗಣ್ಯರು ಮಾತನಾಡಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾಂತಾಪುರಂ ಎ.ಪಿ ಅಬೂಬಕ್ಕರ್ …

ಅಡ್ವಕೇಟ್ ಕ್ಲರ್ಕ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನ

ಕಾಸರಗೋಡು: ಕೇರಳ ಅಡ್ವಕೇಟ್ ಕ್ಲರ್ಕ್ಸ್ ಜಿಲ್ಲಾ ಸಮ್ಮೇಳನ ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ರಾಜ್ಯಾಧ್ಯಕ್ಷ ವಿ. ರವೀಂದ್ರನ್ ಪೇರಾಂಬ್ರ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಎ. ರಘುನಾಥ್ ಅಧ್ಯಕ್ಷತೆ ವಹಿಸಿದರು. ಕೆಎಸಿಎ ರಾಜ್ಯ ಕಾರ್ಯದರ್ಶಿ ಪಿ. ರಾಜ್‌ಮೋಹನ್, ಮುಖಂಡರಾದ ಶ್ರೀಕುಮಾರ್ ಕುನ್ನಮಂಗಲಂ, ವಿ.ಎಂ. ಜಯದೇವನ್, ಸಿ. ರವಿ, ಜಯರಾಮ್ ಶೆಟ್ಟಿ, ವಿ.ವಿ. ಬಾಲನ್ ಮಾತನಾಡಿದರು. ನಿವೃತ್ತರಾಗುವ ಹಿರಿಯ ಸದಸ್ಯ ಸೂರ್ಯನಾರಾಯಣ ಮಯ್ಯರನ್ನು  ಈ ವೇಳೆ ಗೌರವಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ವಿ. ಬಾಬು ಸ್ವಾಗತಿಸಿ, ಜಿಲ್ಲಾ ಜೊತೆ ಕಾರ್ಯ ದರ್ಶಿ …