ಅಕ್ರಮ ಹಣ ವರ್ಗಾವಣೆ ಪ್ರಕರಣ: ಪಿಣರಾಯಿ ವಿಜಯನ್,ಅಳಿಯನ ನಿವಾಸಗಳು ಸಹಿತ 10 ಸ್ಥಳಗಳಲ್ಲಿ ಇ.ಡಿ ಶೋಧ; ರಾಜ್ಯಾದ್ಯಂತ ಪ್ರತಿಭಟನೆಗಳೊಂದಿಗೆ ಬೀದಿಗಿಳಿದ ಸಿಪಿಎಂ

ತಿರುವನಂತಪುರ: ವಿವಾದಿತ ಗಣಿ ಕಂಪೆನಿ  ಕೊಚ್ಚಿನ್ ಮಿನರಲ್ಸ್ ಆಂಡ್ ರೂಟೈಲ್ಸ್ ಲಿಮಿಟೆಡ್  (ಸಿ.ಎಂ.ಆರ್.ಎಲ್) ಹಾಗೂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಪುತ್ರಿ ವೀಣಾ  ವಿಜ ಯನ್ ಅವರ ಬೆಂಗಳೂರು  ಮೂಲದ ಐ.ಟಿ ಸಂಸ್ಥೆ ಎಕ್ಸಾಲಾಜಿಕ್ ಸೊಲ್ಯೂಶನ್ ನಡುವೆ ನಡೆದಿದೆ ಎನ್ನಲಾದ 1.72 ಕೋಟಿ ರೂ.ಗಳ  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಇ.ಡಿ  (ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್) ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಅಳಿಯ ಮಾಜಿ ಸಚಿವ ಮೊಹಮ್ಮದ್ ರಿಯಾಸ್‌ರ ನಿವಾಸಗಳೂ ಸೇರಿದಂತೆ …

ಎಂಡಿಎಂಎ, 50 ಸಾವಿರ ರೂ. ಸಹಿತ ಯುವಕ ಸೆರೆ

ಉಪ್ಪಳ: ಎಂಡಿಎಂಎ ಸಹಿತ ಓರ್ವ ಯುವಕನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ಬಳಿಯ  ಬಿಸ್ಮಿಲ್ಲಾ ಮಂಜಿಲ್‌ನ ಮೊಹಮ್ಮದ್ ಸಮೀರ್ ಪಿ.ಎ (30) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಈತನ ಕೈಯಿಂದ 5.080 ಗ್ರಾಂ ಎಂಡಿಎಂಎ ಹಾಗೂ 55,860 ರೂಪಾಯಿಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ 7.10ರ ವೇಳೆ ಎಸ್.ಐ ವೈಷ್ಣವ್ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ  ಎಂಡಿಎಂಎ ಸಹಿತ ಯುವಕನನ್ನು ಬಂಧಿಸಲಾಗಿದೆ.  ಮಾದಕವಸ್ತು ಸಾಗಾಟ ಬಗ್ಗೆ   ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ  ಬಪ್ಪಾಯಿತೊಟ್ಟಿಯಲ್ಲಿದ್ದ …

ಗರ್ಭಿಣಿ ಹಸುವನ್ನು ಕಳವುಗೈದು ಕಾರಿನಲ್ಲಿ ಸಾಗಾಟ

ಮುಳ್ಳೇರಿಯ: ಹಟ್ಟಿಯ ಸಮೀಪ ಕಟ್ಟಿ ಹಾಕಿದ್ದ ಗರ್ಭಿಣಿ ಹಸುವನ್ನು ಕಳವುಗೈದು ಕಾರಿನಲ್ಲಿ ಸಾಗಿಸಿರುವುದಾಗಿ ದೂರಲಾಗಿದೆ. ಮಲ್ಲ ನಿವಾಸಿ ಎಂ. ವಿಜಯಲಕ್ಷ್ಮಿ ಎಂಬವರ ಹಸುವನ್ನು ಕಳವುಗೈಯ್ಯಲಾ ಗಿದೆ. ಮೊನ್ನೆ ಮುಂಜಾನೆ ಕಾರಿನಲ್ಲಿ ತಲುಪಿದ ಇಬ್ಬರು ಹಸುವನ್ನು ಕಳವುಗೈದಿರು ವುದಾಗಿ ಆರೋಪಿಸಲಾಗಿದೆ.  ಕಾರಿನ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆದರೆ ಕಾರಿನ ನಂಬ್ರಪ್ಲೇಟ್ ನಕಲಿಯಾಗಿದ್ದು, ಇದರಿಂದ ಕಳ್ಳರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ತನಿಖೆ ಮುಂದುವರಿಯುತ್ತಿದೆಯೆಂದು ಆದೂರು ಪೊಲೀಸರು ತಿಳಿಸಿದ್ದಾರೆ.  ವಿಧವೆಯಾದ ವಿಜಯಲಕ್ಷ್ಮಿ ಹಸು ಸಾಕಿ ಲಭಿಸುವ ಅತ್ಯಲ್ಪ ಆದಾಯದಿಂದ  ಪುತ್ರಿ …

ತಿರುವನಂತಪುರ ಶ್ರೀ ಪದ್ಮನಾಭ ಕ್ಷೇತ್ರದಿಂದ ಅಮೂಲ್ಯ ವಸ್ತುಗಳು ನಾಪತ್ತೆ

ತಿರುವನಂತಪುರ: ಇಲ್ಲಿನ ಶ್ರೀ ಪದ್ಮನಾಭ ಸ್ವಾಮಿ ಕ್ಷೇತ್ರದಿಂದ ಅಮೂಲ್ಯ ವಸ್ತುಗಳು ಕಾಣೆಯಾದ ಬಗ್ಗೆ ವರದಿಯಾಗಿದೆ. ಕಾಣಿಕೆಯಾಗಿ ಲಭಿಸಿದ ಸುಮಾರು 78 ಗ್ರಾಂ ಚಿನ್ನದ ನಾಣ್ಯಗಳು ಕಾಣೆಯಾಗಿವೆ. ದುರಸ್ತಿಗೆಂದು ಕೊಂಡೊಯ್ದ ಚಿನ್ನದ ದೀಪವನ್ನು ಮರಳಿ ತಲುಪಿಸಲಿಲ್ಲ. ಇದರ ಬದಲಾಗಿ ಅಧಿಕೃತ ದಾಖಲೆಗಳಲ್ಲಿಲ್ಲದ ಬೆಳ್ಳಿಯ ದೀಪ ಇರಿಸಲಾಗಿದೆ. ‘ವೈರನಮ’ ಎಂಬ ಆಭರಣ ಆರು ತಿಂಗಳಿಂದ ನಾಪತ್ತೆಯಾಗಿರುವುದಾಗಿಯೂ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಅಡಿಶನಲ್ ಚೀಫ್ ಸೆಕ್ರೆಟರಿಗೆ ನೀಡಿದ ಪತ್ರದಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಪಿಣರಾಯಿ ವಿಜಯನ್‌ರ ಗನ್‌ಮ್ಯಾನ್ ಸಹಿತ 5 ಮಂದಿ ಪೊಲೀಸರ ಅಮಾನತು

ತಿರುವನಂತಪುರ: ನವಕೇರಳ ಯಾತ್ರೆ ಮಧ್ಯೆ ಪ್ರತಿಭಟಿಸಿದ ಕೆಎಸ್‌ಯು, ಯೂತ್ ಕಾಂಗ್ರೆಸ್ ಕಾರ್ಯಕರ್ತರಿಗೆ ಹಲ್ಲೆಗೈದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಗನ್‌ಮ್ಯಾನ್ ಸಹಿತ ಐದು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಪೊಲೀಸ್ ಕೇಂದ್ರದಿಂದ ಆದೇಶ ಹೊರಡಿಸಲಾಗಿದೆ. ಗನ್‌ಮ್ಯಾನ್ ಆಗಿದ್ದ ಅನಿಲ್ ಕುಮಾರ್, ಎಸ್ಕೋರ್ಟ್ ಪೊಲೀಸರಾದ ಸಂದೀಪ್, ಅರುಣ್, ವಿಪಿನ್, ಶೈಜು ಎಂಬಿವರನ್ನು ಅಮಾನತುಗೊಳಿಸಲಾಗಿದೆ. ಅನಿಲ್ ಕುಮಾರ್  ೨೫ ವರ್ಷದಿಂದ ಪಿಣರಾಯಿ ವಿಜಯನ್‌ರ ಗನ್‌ಮ್ಯಾನ್ ಆಗಿದ್ದಾನೆ. ಡಿಸೆಂಬರ್ ೫ರಂದು ನವಕೇರಳ ಕಾರ್ಯಕ್ರಮಕ್ಕೆ ತಲುಪಿದ ಮುಖ್ಯಮಂತ್ರಿಯ ಬಸ್‌ನ ಮುಂಭಾಗದಲ್ಲಿ ಆಲಪ್ಪುಳ …

ಬಾಯಾರುಪದವಿನ ಮೊಹಮ್ಮದ್ ಆಸಿಫ್‌ರ ನಿಗೂಢ ಸಾವು:ಸಿಬಿಐ ತನಿಖೆಗೆ ಒತ್ತಾಯಿಸಿ ತಾಯಿಯಿಂದ ಅರ್ಜಿ; ಪೊಲೀಸ್‌ಗೆ ಹೈಕೋರ್ಟ್‌ನಿಂದ ನೋಟೀಸು

ಕುಂಬಳೆ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೈವಳಿಕೆ  ಬಾಯಾರುಪದವು ಕ್ಯಾಂಪ್ಕೋ ಸಮೀಪದ ಮುಹಮ್ಮದ್ ಆಸಿಫ್ (29) ನಿಗೂಢ ರೀತಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ  ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿಕೊಡುವ ಸಾಧ್ಯತೆ ಇದೆ. ಪ್ರಕರಣದ ತನಿಖೆಯನ್ನು  ಸಿಬಿಐಗೆ ಹಸ್ತಾಂತರಿಸಬೇಕೆಂಬ ಬೇಡಿಕೆಯನ್ನು ಯಾಕಾಗಿ  ಅಂಗೀಕರಿಸುತ್ತಿಲ್ಲವೆಂಬ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ತಿಳಿಸಿ ಪೊಲೀಸರಿಗೆ ಹೈಕೋರ್ಟ್ ನೋಟೀಸು ನೀಡಿದೆ. ಇದರೊಂದಿಗೆ ನಿಗೂಢತೆಗಳು ತುಂಬಿಕೊಂಡ ಪ್ರಕರಣ ಮತ್ತೆ ಚರ್ಚೆಯಾಗಿದೆ. ಮಗನ ಸಾವಿನ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿ ತಾಯಿ ಸಕೀನ ನ್ಯಾಯವಾದಿ ಆಸಿಫಲಿ ಮುಖಾಂತರ …

ಇಂಧನ ಬೆಲೆಯೇರಿಕೆ ವಿರುದ್ಧ ಕುಂಬಳೆಯಲ್ಲಿ ಮಂಡಲ ಕಾಂಗ್ರೆಸ್‌ನಿಂದ ಪ್ರತಿಭಟನೆ

ಕುಂಬಳೆ: ಕೇಂದ್ರ ಸರಕಾರ ದೇಶದಲ್ಲಿ ತೀವ್ರ ಇಂಧನ ಬೆಲೆ ಹೆಚ್ಚಳಕ್ಕೆ, ಆ ಮೂಲಕ ಅಗತ್ಯ ಸಾಮಗ್ರಿಗಳ ಬೆಲೆ ಹೆಚ್ಚಳಕ್ಕೆ, ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿರುವುದಾಗಿ  ಡಿಸಿಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಪ್ರಭು ಅಭಿಪ್ರಾಯಪಟ್ಟರು. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ವಿರುದ್ಧ ಕೆಪಿಸಿಸಿ ಆಹ್ವಾನ ಪ್ರಕಾರ ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕರ್ಷಕ ಕಾಂಗ್ರೆಸ್ ಬ್ಲೋಕ್ ಕಾರ್ಯದರ್ಶಿ ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ರವಿ ಪೂಜಾರಿ …

ಕೆಎಸ್‌ಯುನಿಂದ ದ್ವಿಚಕ್ರ ವಾಹನಗಳನ್ನು ದೂಡಿಕೊಂಡು ಪ್ರತಿಭಟನೆ

ಕಾಸರಗೋಡು: ಪೆಟ್ರೋಲ್- ಡೀಸೆಲ್ ಬೆಲೆ ನಿರಂತರ ಹೆಚ್ಚಿಸುತ್ತಿ ರುವುದನ್ನು ಪ್ರತಿಭಟಿಸಿ ಬೈಕ್‌ಗಳನ್ನು ದೂಡಿಕೊಂಡು ಕೆಎಸ್‌ಯು ಪ್ರತಿಭಟಿಸಿದೆ. ಕಾಸರಗೋಡು ಹೊಸ ಬಸ್ ನಿಲ್ದಾಣದಿಂದ ಪ್ರೆಸ್‌ಕ್ಲಬ್ ಜಂಕ್ಷನ್‌ನ ಪೆಟ್ರೋಲ್ ಬಂಕ್‌ವರೆಗೆ ಕೆಎಸ್‌ಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬೈಕ್, ಸ್ಕೂಟರ್‌ಗಳನ್ನು ದೂಡಿಕೊಂಡು ಪ್ರತಿಭಟಿಸಿದ್ದಾರೆ. ಮನಾಫ್ ನುಳ್ಳಿಪ್ಪಾಡಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಜವಾದ್ ಪುತ್ತೂರು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಆದರ್ಶ್ ಕೆ. ಸ್ವಾಗತಿಸಿ, ಅನ್ಸಾರಿ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಖಿಲ್ ಜೋನ್, ವಿಷ್ಣು ಇರಿಯಣ್ಣಿ, ಸುಜಿತ್ ಎಸ್. ವೈಷ್ಣವ್ ಕೋಳಿಚ್ಚಾಲ್, ಶಜಾಹ್ …

ರಸ್ತೆಯಲ್ಲಿ ಬಿದ್ದು ಸಿಕ್ಕಿದ ಚಿನ್ನಾಭರಣ ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಕೂಲಿ ಕಾರ್ಮಿಕ

ಬದಿಯಡ್ಕ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಬಿದ್ದು ಸಿಕ್ಕಿದ ಒಂದೂವರೆ ಪವನ್ ಚಿನ್ನದ ಸರವನ್ನು ವಾರಸುದಾರರಿಗೆ ಹಸ್ತಾಂತರಿಸಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಕಿಳಿಂಗಾರು ನಿಡುಗಳದ ಕೂಲಿ ಕಾರ್ಮಿಕನಾದ ಮಹಾಲಿಂಗ ಎಂಬವರಿಗೆ ಕಿಳಿಂಗಾರು ರಸ್ತೆಯಲ್ಲಿ ಚಿನ್ನದ ಸರ ಬಿದ್ದು ಸಿಕ್ಕಿತ್ತು. ಕೂಡಲೇ ಅದರ ವಾರಸುದಾರರನ್ನು ಹುಡುಕಿದರೂ ಪತ್ತೆಹಚ್ಚಲಾಗಿಲ್ಲ. ಈ ಹಿನ್ನೆಲೆಯಲ್ಲಿ ಚಿನ್ನಾಭರಣವನ್ನು ಮಹಾಲಿಂಗ ಬದಿಯಡ್ಕ ಪೊಲೀಸರಿಗೆ ಒಪ್ಪಿಸಿದ್ದರು. ಈ ಮಧ್ಯೆ ಚಿನ್ನಾಭರಣ ಕಳೆದುಹೋದ ಪೆರಿಯಡ್ಕದ ಮಹೇಶ್ ವಿವಿಧೆಡೆ ಹುಡುಕಿದರೂ ಪತ್ತೆಯಾU ದುದರಿಂದ ಈ ಬಗ್ಗೆ ದೂರು ನೀಡಲು ಬದಿಯಡ್ಕ …

ಎ.ಎ. ಅಬ್ಬಾಸ್ ನಿಧನ

 ಕಾಸರಗೋಡು: ಅಡ್ಕತ್ತಬೈಲು ನಿವಾಸಿ ಎ.ಎ. ಅಬ್ಬಾಸ್ (73) ನಿಧನ ಹೊಂದಿದರು. ಮೃತರು ಪತ್ನಿ ಬಲ್ಕೀಸ್ ಚಟ್ಟಂಚಾಲ್, ಮಕ್ಕಳಾದ ಜಹನಾರ, ಆಶಿಫ್ ಫರ್ವೀಸ್, ಶುಹೈಬ್, ಸಜ್ವಾನ, ಅಳಿಯಂದಿರಾದ ಮುಹಮ್ಮದ್, ಸಜ್ಜಾದ್, ಸೊಸೆಯಂದಿರಾದ ಅಸೀಮ, ನಾಫಿಯ, ಸಹೋದರರಾದ ಎ. ಅಬ್ದುಲ್ಲ, ಎ. ಮೊಹಮ್ಮದ್ ಕುಂಞಿ, ಎ.ಕೆ. ಶಾಫಿ, ಎ. ಅಬ್ದುಲ್ ಗಫೂರ್, ಎ.ಎ. ರಫೀಕ್, ಸಹೋದರಿಯರಾದ ರಾಬಿಯ, ಖೈರುನ್ನಿಸ, ಬೀವಿ, ನಫೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.