ಬೀರಮೂಲೆಯಲ್ಲಿ ಕಾಟಿಗಳ ಹಿಂಡು ರೈತರಿಗೆ ಆತಂಕದ ದಿನಗಳು

ಬೆಳ್ಳೂರು: ಬೆಳ್ಳೂರು ಪಂಚಾಯತ್ ವ್ಯಾಪ್ತಿಯ ಕುಳದಪಾರೆ ಬೀರಮೂಲೆ ಯಲ್ಲಿ ಕಾಟಿಗಳ ಹಿಂಡು ಸ್ಥಳೀಯ ಕೃಷಿಕರ ನಿದ್ದೆಗೆಡಿಸುತ್ತಿದೆ. ಬೀರಮೂಲೆ ಯ ಕೃಷಿಕ ಸೂರ್ಯನಾರಾಯಣ ಭಟ್‌ರ ತೆಂಗಿನ ತೋಟದಲ್ಲಿ ಕಾಟಿಗಳ ದೊಡ್ಡ ಹಿಂಡು ಕಂಡುಬಂದಿದೆ. ಕುಳದಪಾರೆ, ಈಂದುಮೂಲೆ ಗಡಿ ಪ್ರದೇಶದಲ್ಲಿ ಆಗಾಗ ಕಾಟಿಗಳು ಕಾಣಿಸಿಕೊಳ್ಳುತ್ತಿದ್ದರೂ ಸುಮಾರು ೧೦ರಷ್ಟು ಸಂಖ್ಯೆಯಲ್ಲಿ ಕಂಡುಬಂದಿ ರುವುದು ಇದೇ ಮೊದಲೆಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಇದುವರೆಗೂ ಎಲ್ಲೂ ಕೃಷಿಗೆ ಹಾನಿಗೊಳಿಸಿದ ವರದಿಯಾಗದಿದ್ದರೂ  ಕೃಷಿಕರ ಭೀತಿ ತೊಲಗಲಿಲ್ಲ. ಅರಣ್ಯ ಗಡಿ ಪ್ರದೇಶಗಳಿಂದ ಕೃಷಿ ಭೂಮಿಗೆ ಕಾಡುಪ್ರಾಣಿಗಳು ನುಗ್ಗುವುದನ್ನು …

ಆರಿಕ್ಕಾಡಿ ಟೋಲ್ ಗೇಟ್ ತೆರವುಗೊಂಡರೂ ರಸ್ತೆಯ ಹಂಪ್ ತೆರವಿಗೆ ಕ್ರಮವಿಲ್ಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತ

ಕುಂಬಳೆ: ಆರಿಕ್ಕಾಡಿಯಲ್ಲಿದ್ದ ಟೋಲ್‌ಗೇಟ್ ತೆರವುಗೊಳಿಸಿ ನಾಲ್ಕು ತಿಂಗಳು ಕಳೆದರೂ ಇಲ್ಲಿ ವಾಹನಗಳ ವೇಗ ನಿಯಂತ್ರಣಕ್ಕಾಗಿ  ನಿರ್ಮಿಸಿದ ಹಂಪ್ ಹಾಗೆಯೇ ಉಳಿದುಕೊಂಡಿದೆ. ಇದು ಇಲ್ಲಿ ಪದೇ ಪದೇ ವಾಹನ ಅಪಘಾತಗಳಿಗೆ ಕಾರಣವಾಗುತ್ತಿದೆ. ನಿನ್ನೆ ಸಂಜೆ ಸಂಭವಿಸಿದ ಅಪಘಾತದಲ್ಲಿ ೪ ಮಂದಿ ಗಾಯಗೊಂಡಿದ್ದಾರೆ. ತಲಪಾಡಿ ಭಾಗದಿಂದ ಕುಂಬಳೆ ಯತ್ತ ಸಂಚರಿಸುತ್ತಿದ್ದ ಓಮ್ನಿ ವ್ಯಾನ್ ಹಂಪ್‌ನ ಸಮೀಪಕ್ಕೇ ತಲುಪಿದಾಗ ವೇಗ ಕಡಿಮೆ ಮಾಡಿದ್ದು, ಈ ವೇಳೆ ಹಿಂಬದಿಯಲ್ಲಿದ್ದ ಕಾರು ವ್ಯಾನ್‌ನ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಆರಿಕ್ಕಾಡಿಯಲ್ಲಿ ಟೋಲ್ ಗೇಟ್ ಇಲ್ಲವೆಂದು ತಿಳಿದ …

ಬೆಂಗಳೂರಿನಲ್ಲಿ ಸೆರೆಯಾದ ಗಾಂಜಾ ಪ್ರಕರಣದ ಆರೋಪಿ  ಇಂದು ನ್ಯಾಯಾಲಯಕ್ಕೆ

ಕಾಸರಗೋಡು: ಬೆಂಗಳೂರಿನಲ್ಲಿ ಮಂಜೇಶ್ವರ ಪೊಲೀಸರು ಸೆರೆಹಿಡಿದ, ಕಾರಿನಲ್ಲಿ ಸಾಗಿಸಿದ ೧೪೨ ಕಿಲೋ ಗಾಂಜಾ ಹಾಗೂ 27.5 ಗ್ರಾಂ ಎಂಡಿಎಂಎ ವಶಪಡಿಸಿದ ಪ್ರಕರಣದ ಪ್ರಧಾನ ಆರೋಪಿಯನ್ನು ಇಂದು ಮಂಜೇಶ್ವರಕ್ಕೆ ಕರೆತಂದು ನ್ಯಾಯಾ ಲಯದಲ್ಲಿ ಹಾಜರುಪಡಿಸಲಾಗುವುದು. ಕೊಡ್ಲಮೊಗರು ಗುವೆದ ಪಡ್ಪು ನಿವಾಸಿ ಅಬ್ದುಲ್ ನೌಫಲ್ (25)ನನ್ನು ಬೆಂಗಳೂರಿನಲ್ಲಿ ಸೆರೆಹಿಡಿಯಲಾಗಿತ್ತು. ಮಂಜೇಶ್ವರ ಪೊಲೀಸರು ದಾಖಲಿಸಿದ ಪ್ರಕರಣದ ವಾರಂಟ್ ಆರೋಪಿಯಾಗಿ ದ್ದಾನೆ ಈತ. ಪ್ರಸ್ತು ತ ಪ್ರಕರಣದಲ್ಲಿ ಜಾಮೀನಿನಲ್ಲಿ ಹೊರಬಂದು ತಲೆಮರೆಸಿಕೊಂಡಿದ್ದ ಈತನನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಸೆರೆಹಿಡಿಯಲಾಗಿದೆ. 2021 ಮಾರ್ಚ್ 26ರಂದು …

ಬಜೆಟ್‌ನಲ್ಲಿ ಜಿಲ್ಲೆಗೆ ಘೋಷಿಸಲಾಗಿರುವ ಯೋಜನೆಗಳು: ಕಾಸರಗೋಡಿನಲ್ಲಿ ಐಟಿ ಪಾರ್ಕ್ ; ಚಂದ್ರಗಿರಿ ಕೋಟೆ ಹೆರಿಟೇಜ್ ಪ್ರವಾಸಿ  ಕೇಂದ್ರವಾಗಿ ಭಡ್ತಿ , ಕಾಸರಗೋಡು ಟೌನ್ ಹಾಲ್ ಪುನರ್ ನಿರ್ಮಾಣ

ಕಾಸರಗೋಡು: ಮುಖ್ಯಮಂತ್ರಿ ವಿ.ಡಿ. ಸತೀಶನ್ ವಿಧಾನಸಭೆಯಲ್ಲಿ ನಿನ್ನೆ ಮಂಡಿಸಿದ ಯುಡಿಎಫ್ ಸರಕಾರದ ಚೊಚ್ಚಲ ಬಜೆಟ್‌ನಲ್ಲಿ ಕಾಸರಗೋಡು ಜಿಲ್ಲೆಗಾಗಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಕಾಸರಗೋಡಿನಲ್ಲಿ ಐಟಿ ಪಾರ್ಕ್ ಸ್ಥಾಪಿಸಲಾಗುವುದು, ಚಂದ್ರಗಿರಿ ಕೋಟೆ ಮತ್ತು  ಪರಿಸರ  ಪ್ರದೇಶವನ್ನು ಹೆರಿಟೇಜ್  (ಪರಂಪರಾಗತ) ಪ್ರವಾಸಿ ಕೇಂದ್ರವನ್ನಾಗಿ  ಭಡ್ತಿಗೊಳಿಸಲಾಗುವುದು. ಇದು 20 ಕೋಟಿ ರೂ. ವೆಚ್ಚ ನಿರೀಕ್ಷೆಯ ಯೋಜನೆಯಾಗಿದೆ. ಚೀಮೇನಿಯ ಕಿನ್‌ಫ್ರಾ ಪಾರ್ಕ್‌ಗೆ ಸೇರಿರುವ ಸ್ಥಳದಲ್ಲ್ಲಿ ಲಾಜಿಸ್ಟಿಕ್ ಹೈಟೆಕ್ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಲಾಗು ವುದು. ಆ ಯೋಜನೆಗಳಿಗೆ ಬಜೆಟ್‌ನಲ್ಲಿ 10 ಕೋಟಿ ರೂ.ಗಳ ಟೋಕನ್ …

ಬೈಕ್ ಢಿಕ್ಕಿ ಹೊಡೆದು ಗಾಯಗೊಂಡಿದ್ದ ಮುಸ್ಲಿಂ ಲೀಗ್ ಕಾರ್ಯಕರ್ತ ನಿಧನ

ಕಾಸರಗೋಡು: ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮುಸ್ಲಿಂ ಲೀಗ್‌ನ ಸಕ್ರಿಯ ಕಾರ್ಯಕರ್ತ ಮೃತಪಟ್ಟರು. ಮೊಗ್ರಾಲ್ ಪಖ್ವನಗರದ ಕೆ.ವಿ. ಹೌಸ್‌ನ ಕೆ.ವಿ. ಅಬ್ದುಲ್ ಖಾದರ್ (78) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಮೊಗ್ರಾಲ್‌ನಲ್ಲಿ ಅಪಘಾತ ಸಂಭವಿಸಿತ್ತು. ಅಬ್ದುಲ್ ಖಾದರ್ ರಸ್ತೆ ಬದಿ ನಡೆದು ಹೋಗುತ್ತಿದ್ದ ವೇಳೆ ಅಪರಿಮಿತ ವೇಗದಲ್ಲಿ ಬಂದ ಬೈಕ್ ಢಿಕ್ಕಿ ಹೊಡೆದಿತ್ತೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ …

ನಿರ್ಮಾಣ ನಡೆಯುತ್ತಿದ್ದ ಕಟ್ಟಡದಿಂದ  ಬಿದ್ದು ಕಾರ್ಮಿಕ ಮೃತ್ಯು

ಯುಸೀತಾಂಗೋಳಿ: ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ.ಬೇಳ ವಳಾಂಬ ಹೌಸ್‌ನ ಫ್ರಾನ್ಸಿಸ್ ಪ್ರವೀಣ್ ಡಿ’ಸೋಜಾ (47) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಸಂಜೆ 6ಗಂಟೆಗೆ ಮುಜುಂಗಾವಿನಲ್ಲಿ  ಈ ದುರ್ಘಟನೆ ಸಂಭವಿಸಿದೆ. ಇಲ್ಲಿ ಮನೆಯೊಂದರ ನಿರ್ಮಾಣ ಕೆಲಸ ನಡೆಯುತ್ತಿದ್ದು, ಫ್ರಾನ್ಸಿಸ್ ಪ್ರವೀಣ್ ಡಿ’ಸೋಜಾ ಮೇಸ್ತ್ರಿಯ ಸಹಾಯಕನಾಗಿ  ಕೆಲಸ ನಿರ್ವಹಿಸುತ್ತಿದ್ದರು. ಕೆಲಸ ವೇಳೆ ಆಯತಪ್ಪಿಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಫ್ರಾನ್ಸಿಸ್ ಪ್ರವೀಣ್ ಡಿ’ಸೋಜಾರನ್ನು ಇತರ ಕಾರ್ಮಿಕರು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ  ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು …

ಪುತ್ರ ಚಲಾಯಿಸಿದ ಸ್ಕೂಟರ್‌ನಿಂದ ರಸ್ತೆಗೆ ಬಿದ್ದು ತಾಯಿ ಮೃತ್ಯು

ಕುಂಬಳೆ: ಪುತ್ರ ಚಲಾಯಿಸುತ್ತಿದ್ದ ಸ್ಕೂಟರ್‌ನಿಂದ ರಸ್ತೆಗೆಸೆಯಲ್ಪಟ್ಟು ತಾಯಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕುಂಬಳೆ ಸುನಾಮಿ ಕಾಲನಿಯ ಮೊಯ್ದೀನ್ ಕುಂಞಿಯವರ ಪತ್ನಿ ಹಾತಿಕ (48) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಸ್ಕೂಟರ್ ಚಲಾಯಿಸುತ್ತಿದ್ದ ಪುತ್ರ ಮುಬಾರಕ್ (19) ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ೭.೩೦ರ ವೇಳೆ ಕುಂಬಳೆ ರಾಷ್ಟ್ರೀಯ ಹೆದ್ದಾರಿಯ ದೇವಿನಗರ ಸರ್ವೀಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಇದರಿಂದ ಗಂಭೀರ ಗಾಯಗೊಂಡ  ಹಾತಿಕರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ …

ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದರೆ 500ರೂ. ದಂಡ

ಕಾಸರಗೋಡು: ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸು ವವರಿಗೆ ಹೇರಲಾಗುವ ಕನಿಷ್ಠ ದಂಡವನ್ನು 250 ರೂ.ನಿಂದ 5೦೦ ರೂಪಾಯಿಗೆ ಹೆಚ್ಚಿಸಲಾಗಿದೆ. ರೈಲು ಪ್ರಯಾಣ ವೇಳೆ ಟಿಕೆಟ್ ಇಲ್ಲದಿದ್ದಲ್ಲಿ ಲಾಸ್ಟ್ ಟಿಕೆಟ್ ಚೆಕ್ಕಿಂಗ್ ಪಾಯಿಂಟ್‌ನ ನಂತರದ ಮೊತ್ತ ಹಾಗೂ ಅದರೊಂದಿಗೆ 5೦೦ ರೂ. ದಂಡ ಪಾವತಿಸಬೇಕಾಗಿ ಬರಲಿದೆ. ದಂಡ ಪಾವತಿಸದಿದ್ದಲ್ಲಿ ಆರು ತಿಂಗಳವರೆಗೆ ಸಜೆ ಅಥವಾ ದಂಡ ಸಹಿತ ಸಜೆ ಅನುಭವಿಸಬೇಕಾಗಿ ಬರಲಿದೆ. ಜುಲೈ 1 ರಿಂದ ಈ ಕಾನೂನು ಜ್ಯಾರಿಗೆ ಬರಲಿದೆ. ಜನ್ ವಿಶ್ವಾಸ್ ಆಕ್ಟ್ ಪ್ರಕಾರ ಈ …

ಸರಕಾರಿ ನೌಕರರಿಗೆ ನಿರಾಸೆ ಮೂಡಿಸಿದ ಐಕ್ಯರಂಗ ಸರಕಾರದ ಬಜೆಟ್ -ಎನ್‌ಜಿಒ ಸಂಘ್

ಕಾಸರಗೋಡು: ರಾಜ್ಯ ಸರಕಾರ ಸರಕಾರಿ ನೌಕರರಿಗೆ ವಿಸ್ಮಯ ಉಂಟುಮಾಡಲಿದೆ ಎಂದು ಆಸೆ ಹೊಂದಿದ್ದವರಿಗೆ ರಾಜ್ಯ ಬಜೆಟ್ ನಿರಾಶೆ ಉಂಟುಮಾಡಿದೆ ಎಂದು ಎನ್‌ಜಿಒ ಸಂಘ್ ಆರೋಪಿಸಿದೆ. ಹಣಕಾಸು ಸಚಿವ ಹಾಗೂ ಮುಖ್ಯಮಂತ್ರಿಯಾಗಿ ರುವ ವಿ.ಡಿ. ಸತೀಶನ್‌ರ ಬಜೆಟ್ ಘೋಷಣೆ ಕೇಳಿ ಸರಕಾರಿ ನೌಕರರು ನಿರಾಸೆ ಹೊಂದಿದ್ದಾರೆ. ಎಡರಂಗ ಸರಕಾರ ತಡೆಹಿಡಿದಿದ್ದ ನೌಕರರ ಸೌಲಭ್ಯಗಳು ಹಾಗೂ ಹಕ್ಕುಗಳನ್ನು ಘೋಷಿಸಬಹುದೆಂದು ನೌಕರರು ಆಶಾಭಾವನೆ ಹೊಂದಿದ್ದರು. ಆದರೆ ಅದು ಸಫಲವಾಗಲಿಲ್ಲ. ಎಡ ಕಾಲಿನಲ್ಲಿದ್ದ ರೋಗ ಬಲ ಕಾಲಿಗೆ ಬಂತು ಎಂಬ ಸ್ಥಿತಿಯಲ್ಲಿ ಈಗ …

ಬಜೆಟ್‌ನಲ್ಲಿ ಖಾಸಗಿ ಬಸ್ ಉದ್ಯಮಕ್ಕೆ ನಿರಾಶೆ ಮಾತ್ರ- ಬಸ್ ಆಪರೇಟರ್ಸ್ ಫೆಡರೇಶನ್

ಕಾಸರಗೋಡು: ರಾಜ್ಯದ ಐಕ್ಯರಂಗ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ಬಸ್ ಮಾಲಕರಿಗೆ ಯಾವುದೇ ಪ್ರಯೋಜನ ವಿಲ್ಲವೆಂದು  ಕಾಸರಗೋಡು ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಸಮಿತಿ ದೂರಿದೆ. ಜನಮುನ್ನಡೆ ಯಾತ್ರೆಯಲ್ಲಿ ಖಾಸಗಿ ಬಸ್‌ಗಳಿಗೆ ಸಹಾಯಕವಾದ ರೀತಿಯಲ್ಲಿ ಯೋಜನೆ ಹಾಕಲಾಗುವುದೆಂದು ಹಣಕಾಸು ಸಚಿವರಾಗಿರುವ ವಿ.ಡಿ. ಸತೀಶನ್ ಹೇಳಿಕೆ ನೀಡಿದ್ದರು. ಆದರೆ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಪ್ರಯಾಣ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಕೆಎಸ್ ಆರ್‌ಟಿಸಿ ಸಂಚರಿಸದ ಒಳಪ್ರದೇಶಗಳ ಪ್ರಯಾಣಿಕರು ಖಾಸಗಿ ಬಸ್‌ಗಳಲ್ಲಿ ಹೆದ್ದಾರಿವರೆಗೆ ತಲುಪಿ ಅಲ್ಲಿಂದ ಕೆಎಸ್‌ಆರ್‌ಟಿಸಿಯಲ್ಲಿ ಸಂಚರಿಸಲು ಆರಂಭಿಸಿದ್ದಾರೆ. ಇದರಿಂದ …