ಮೂವರು ಕೇರಳೀಯರೂ ಸೇರಿ 38 ಅಪರಾಧಿಗಳಿಗೆ ನೀಡಿದ ಗಲ್ಲು ಶಿಕ್ಷೆ ಖಾಯಂಗೊಳಿಸಿ ಹೈಕೋರ್ಟ್ ತೀರ್ಪು 

ಅಹಮ್ಮದಾಬಾದ್: 2008ರಂದು ದೇಶವನ್ನೇ ನಡುಗಿಸಿದ ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕೇರಳದ ಮೂವರು ಸೇರಿ 38  ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ನೀಡಿದ ಮರಣದಂಡನೆ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್‌ನ ವಿಭಾಗೀಯ ಪೀಠ ಖಾಯಂಗೊಳಿಸಿ ತೀರ್ಪು ನೀಡಿದೆ. ಮಾತ್ರವಲ್ಲ ಈ ಪ್ರಕರಣದಲ್ಲಿ 11 ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ನೀಡಿದ ಜೀವಾವಧಿ ಸಜೆ ಮತ್ತು ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷರೂ.ನಂತೆ ಹಾಗೂ ಗಾಯಗೊಂ ಡವರಿಗೆ ತಲಾ 5 ಲಕ್ಷ ರೂ.ನಂತೆ  ನಷ್ಟ ಪರಿಹಾರ …

ವಯನಾಡ್ ಭೂಕುಸಿತ: ಐದು ಮಂದಿ ಇನ್ನೂ ನಾಪತ್ತೆ : ಕ್ರೈಂ ಬ್ರಾಂಚ್ ಸೇರಿದಂತೆ ಅವಳಿ ತನಿಖೆಗೆ ನಿರ್ದೇಶ

ಕಲ್ಪೆಟ್ಟ: ವಯನಾಡಿನ ಕಳ್ಳಾಡಿ ಪೊಯಿಲ್ ಸುರಂಗ ಮಾರ್ಗದಲ್ಲಿ ನಿನ್ನೆ ಉಂಟಾದ  ಭೂಕುಸಿತದಲ್ಲಿ ಇನ್ನೂ ಐದು ಮಂದಿ ನಾಪತ್ತೆಯಾಗಿದ್ದು ಇವರ ಪತ್ತೆಗಾ ಗಿರುವ ಶೋಧ ಕಾರ್ಯಾಚರಣೆ ಮುಂದುವರಿ ಯುತ್ತಿದೆ. ಭೂಕುಸಿತದಲ್ಲಿ ನಿರ್ಮಾಣ ಕಾರ್ಮಿಕರಾದ ಝಾರ್ಖಂಡ್ ನಿವಾಸಿ ಅಲ್‌ಮೇಲ್ ದೊಡಾದ್ ರಾಯ್, ಬಿಹಾರದ ಬಿಕಾಶ್ ಕುಮಾರ್ ಸಿಂಗ್ ಮತ್ತು ಆಪರೇಟರ್ ಮಧ್ಯಪ್ರದೇಶದ ಚಂದ್ರಪಾನ್ ಪಾಲ್ ಎಂಬವರು ಸಾವನ್ನಪ್ಪಿದ್ದು  9 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸುರಂಗ ಮಾರ್ಗ ನಿರ್ಮಾಣ ಕೆಲಸದಲ್ಲಿ ಒಟ್ಟು 19 ಮಂದಿ ಕಾರ್ಮಿಕರು ನಿರತರಾಗಿದ್ದರು.  ಇದg ಲ್ಲಿ …

ದೈತೋಟದಲ್ಲಿ ಗುಡ್ಡೆ ಕುಸಿತ : ವಾಹನ ಸಂಚಾರಕ್ಕೆ ಭೀತಿ

ಉಪ್ಪಳ: ಇತ್ತೀಚೆಗೆ ಸುರಿದ ಮಳೆಗೆ ರಸ್ತೆ ಬದಿಯ ಗುಡ್ಡೆ ಕುಸಿದಿದ್ದು ಇದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಸಜಂಕಿಲ-ಆವಳ-ಚೇವಾರು ಸಂಪರ್ಕ ರಸ್ತೆಯ ದೈತೋಟ ಎಂಬಲ್ಲಿ ಗುಡ್ಡೆ  ಕುಸಿದುಬಿದ್ದಿದೆ. ಇದರಿಂದ  ಈ ರಸ್ತೆಯಲ್ಲಿ ಸಂಚರಿಸುವ ವಾಹನ ಪ್ರಯಾಣಿಕರಿಗೆ ಆತಂಕ ಉಂಟುಮಾಡಿದೆ. ಇದೇ ಸ್ಥಳದಲ್ಲಿ ಕಳೆದ ವರ್ಷ ಮಳೆಗಾಲ ಕೂಡಾ  ಗುಡ್ಡೆ ಕುಸಿದಿತ್ತು. ಈ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಗುಡ್ಡೆ ಕುಸಿತ ತಡೆಯಲಿರುವ ಕ್ರಮ ಕೈಗೊಂಡಿಲ್ಲ. ಈ ವರ್ಷವೂ ಮಳೆ ಸುರಿಯುತ್ತಿದ್ದಂತೆ  ಗುಡ್ಡೆ ಕುಸಿದಿದ್ದು, ಇದೇ ಸ್ಥಿತಿ ಮುಂದುವರಿದರೆ …

ಪುನರ್ವಸತಿ ಕೇಂದ್ರದಲ್ಲಿದ್ದ  ಕಾಸರಗೋಡು ನಿವಾಸಿ ಮೃತ್ಯು:  ಸಂಬಂಧಿಕರಿಗಾಗಿ ಹುಡುಕಾಟ

 ಕಾಸರಗೋಡು: ಪಯ್ಯನ್ನೂರು ಬಳಿಯ ಪಿಲಾತ್ತರ ಹೋಪ್ ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿದ್ದ ಕಾಸರಗೋಡು ನಿವಾಸಿ ಮೃತಪಟ್ಟಿದ್ದಾರೆ. ಗೋಕುಲ್‌ದಾಸ್ (೬೨) ಎಂಬವರು ಮೃತ ವ್ಯಕ್ತಿ ಯೆಂದು ತಿಳಿಸಲಾಗಿದೆ. ಪರಿಯಾರಂ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಯಾರೂ ಇಲ್ಲದುದರಿಂದ ಮೂರು ವರ್ಷಗಳ ಹಿಂದೆ ಕಾಸರಗೋಡು ನಗರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರ ನಿರ್ದೇಶ ಪ್ರಕಾರ ವ್ಯಕ್ತಿಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು.  ಅಸೌಖ್ಯ ಬಾಧಿಸಿ ಹಾಸಿಗೆ ಹಿಡಿದಿದ್ದ ಇವರು ನಿನ್ನೆ ಮಧ್ಯಾಹ್ನ ವೇಳೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಪಯ್ಯನ್ನೂರು …

ಸ್ವರ್ಗ ಸೇತುವೆ ಬಳಿ ರಸ್ತೆ ಬದಿಯ ಹೊಂಡಕ್ಕಿಳಿದ ಲಾರಿ: ಎಕ್ಸಿಲ್ ತುಂಡಾಗಿ ಸಂಚಾರ ಮೊಟಕು

ಪೆರ್ಲ: ಪೆರ್ಲ- ಸ್ವರ್ಗ ರಸ್ತೆಯಲ್ಲಿ ನಿನ್ನೆ ಮಧ್ಯಾಹ್ನ ಲಾರಿಯೊಂದರ ಎಕ್ಸಿಲ್ ತುಂಡಾಗಿ ಅರ್ಧ ಗಂಟೆ ಕಾಲ ಬಸ್ ಸಹಿತ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಸ್ವರ್ಗ ಸೇತುವೆ ಬಳಿ ಸಂಭವಿಸಿದೆ. ಪಾಣಾಜೆ ಭಾಗದಿಂದ ಗೆರಟೆ ಹೇರಿಕೊಂಡು ಬರುತ್ತಿದ್ದ ಲಾರಿಗೆ ಸ್ವರ್ಗ ಸೇತುವೆಯ ಮುಂದಿನ ತಿರುವಿನಲ್ಲಿ ಪೆರ್ಲ ಕಡೆಯಿಂದ ಬಂದ ವಾಹನವೊಂದು ಎದುರಾಗಿದೆ. ಈ ವಾಹನಕ್ಕೆ ಸಂಚರಿಸಲು ಸ್ಥಳ ಬಿಟ್ಟುಕೊಡುವ ಅವಸರದಲ್ಲಿ ಲಾರಿ ಚಾಲಕ ವಾಹನವನ್ನು ರಸ್ತೆಯಿಂದ ಕೆಳಗಿಳಿಸಿರುವುದಾಗಿ ಶಂಕಿಸಲಾಗಿದೆ. ಈ ವೇಳೆ ಲಾರಿಯ ಎಕ್ಸಿಲ್ ತುಂಡಾಗಿ …

ವರ್ಕಾಡಿಯಲ್ಲಿ ಕೋಳಿ  ಅಂಕ: 5ಮಂದಿ ಸೆರೆ

ಉಪ್ಪಳ:  ವರ್ಕಾಡಿಯಲ್ಲಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಐದು ಮಂದಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿ ೧೪ ಸಾವಿರ ರೂಪಾಯಿ ಹಾಗೂ ಒಂದು ಕೋಳಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಿನ್ನೆ ಮಧ್ಯಾಹ್ನ 12.30ರ ವೇಳೆ ವರ್ಕಾಡಿ ಬಾಲಿಗುರಿ ಬೋಳ ಸೈಂಟ್ ಲೋರೆನ್ಸ್ ಚರ್ಚ್ ಸಮೀಪದ ಖಾಲಿ ಹಿತ್ತಿಲಲ್ಲಿ ಜನರು ಗುಂಪುಗೂಡಿರುವುದನ್ನು ಕಂಡು ಪೊಲೀಸರು ಅಲ್ಲಿಗೆ ತಲುಪಿದ್ದರು. ಈ ವೇಳೆ ಅಲ್ಲಿಂದ ಹಲವರು ಓಡಿ ಪರಾರಿಯಾಗಿದ್ದಾರೆ. ಸ್ಥಳದಿಂದ ತಲಪ್ಪಾಡಿ ದೇವಿಪುರದ ಮಹೇಶ್ ಶೆಟ್ಟಿ (4೦), ಮಂಜೇಶ್ವರ ಕಡಂಬಾರ್‌ನ ಮನೋಜ್ (45), ಬಂಟ್ವಾಳದ ವಿನ್ಸೆಂಟ್ …

ಸಂಚಾರ ರದ್ದುಪಡಿಸಲು 15 ಖಾಸಗಿ ಬಸ್‌ಗಳು ಸಿದ್ಧ

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿರುವು ದರಿಂದಾಗಿ ಭಾರೀ ಆದಾಯ ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಬಸ್‌ಗಳ ಸಂಚಾರ ರದ್ದುಪಡಿಸಲು ಜಿಲ್ಲೆಯ 15 ಖಾಸಗಿ ಬಸ್‌ಗಳು ಮೋಟಾರು ವಾಹನ ಇಲಾಖೆಗೆ ಜಿ.ಫಾಂ ಸಲ್ಲಿಸಿದೆ. ಕೋವಿಡ್ ಮಹಾಮಾರಿಯ ಮೊದಲು ಜಿಲ್ಲೆಯಲ್ಲಿ 5೦೦ರಷ್ಟು ಖಾಸಗಿ ಬಸ್‌ಗಳು ಸಂಚಾರ ನಡೆಸುತ್ತಿದ್ದವು. ಕೋವಿಡ್ ಬಳಿಕ ಆ ಸಂಖ್ಯೆ ೩೫೦ಕ್ಕಿಳಿದಿದೆ. ಕೆಎಸ್‌ಆರ್‌ಟಿಸಿಯಲ್ಲಿ ಮಹಿಳೆಯರಿಗೆ  ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿದ ಬಳಿಕ ಜಿಲ್ಲೆಯಲ್ಲಿ ೫೦ರಷ್ಟು ಖಾಸಗಿ ಬಸ್‌ಗಳು ತಮ್ಮ ಬಸ್ ಸರ್ವೀಸ್‌ಗಳ …

ಪ್ರಿಯವಾದ ಪ್ರಿಯದರ್ಶಿನಿ ಉಚಿತ ಪ್ರಯಾಣ: ವಿವಿಧ ಕಡೆ ಪ್ರಯಾಣಿಕರಿಗೆ ಸಂಚಾರ ಸಮಸ್ಯೆ

ಕಾಸರಗೋಡು: ಕೆಎಸ್‌ಆರ್ ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿದ ನಂತರದ ೧೫ ದಿನ ಗಳಲ್ಲಾಗಿ ಜಿಲ್ಲೆಯಲ್ಲಿ 9.18 ಲಕ್ಷದಷ್ಟು ಮಹಿಳೆಯರು ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಅಂದರೆ ಇದರ ಟಿಕೆಟ್‌ಗಳ ಬೆಲೆ 2.44 ಕೋಟಿ ರೂ. ಆಗಿದೆ. ಇದು ಕೆಎಸ್‌ಆರ್‌ಟಿಸಿಗೆ ನಷ್ಟ ಉಂಟಾಗಿದೆ. ಕೆಎಸ್‌ಆರ್‌ಟಿಸಿಯ ಕಾಸರ ಗೋಡು ಮತ್ತು ಕಾಞಂಗಾಡ್ ಡಿಪ್ಪೋಗಳಲ್ಲಿ ಒಟ್ಟು 126 ಆರ್ಡಿ ನರಿ ಬಸ್‌ಗಳು ಸಂಚಾರ ನಡೆಸುತ್ತಿದ್ದು ಈ ಎಲ್ಲಾ ಬಸ್‌ಗಳಲ್ಲಿ ಮಹಿಳೆಯರು ಮಾತ್ರವಲ್ಲ ಮಂಗಳಮುಖಿಯರಿಗೂ ಉಚಿತವಾಗಿ ಪ್ರಯಾಣಿಸಬ ಹುದಾಗಿದೆ. …

ಕಾಸರಗೋಡು ಶ್ರೀಕೃಷ್ಣ ಜನ್ಮಾಷ್ಟಮಿ: ಮಹೋತ್ಸವ ಸಮಿತಿ ರಚನೆ

ಕಾಸರಗೋಡು: ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೆ. 4ರಂದು ಜರಗಲಿರುವ 46ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಸಮಿತಿ ರೂಪೀಕರಣ ಸಭೆ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಕಾಸರಗೋಡು ಗೋಕುಲ ಜಿಲ್ಲಾ ರಕ್ಷಾಧಿಕಾರಿ ಜಯರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.ನೂತನ ಉತ್ಸವ ಸಮಿತಿಯ ಅಧ್ಯಕ್ಷರಾಗಿ ವೇಣುಗೋಪಾಲ್ ಕೆ.ಎನ್, ಉಪಾಧ್ಯಕ್ಷರಾಗಿ ಮೋದಕ್ ರಾಜ್, ಶ್ರೀವಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಂದ್ರ ಕುಂಟಾರು, ಜತೆಕಾರ್ಯದರ್ಶಿಗಳಾಗಿ ವಸಂತ್ ಕೆರೆಮನೆ, ಪ್ರಶಾಂತಿ ನೆಲ್ಲಿಕುಂಜೆ, ಕೋಶಾಧಿಕಾರಿಯಾಗಿ ಮೋಹನ್ ರಾಜ್ ಕಾಳ್ಯಂಗಾಡ್, ಸ್ಥಾಯೀ ಸಮಿತಿ ಪದಾಧಿಕಾರಿಗಳಾದ ರವಿ ಕೇಸರಿ, ರಾಮಕೃಷ್ಣ …

ಟೈಲರ್ಸ್ ಅಸೋಸಿಯೇಶನ್ ಉಪ್ಪಳ ಯೂನಿಟ್ ಸಭೆ

ಉಪ್ಪಳ: ಕೇರಳ ಸ್ಟೇಟ್ ಟೈರ‍್ಸ್ ಅಸೋಶಿಯೇಶನ್ (ಕೆ.ಎಸ್ ಟಿ.ಎ) ಉಪ್ಪಳ ಯೂನಿಟ್ ಸಭೆ ಇತ್ತೀಚೆಗೆ ಉಪ್ಪಳದಲ್ಲಿ ಜರಗಿತು. ಯೂನಿಟ್ ಅಧ್ಯಕ್ಷ ದಯಾನಂದರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ರಾಜ್ಯ ಸಮಿತಿ ಮಾಜಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕರಿಪ್ವಾರ್‌ರಿಗೆ ನುಡಿನಮನ ಸಲ್ಲಿಸಲಾಯಿತು. ಸದಸ್ಯತನವನ್ನು ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಆಚಾರ್ಯ ವಿತರಿಸಿದರು. ತಾಲೂಕು ಉಪಾದ್ಯಾಕ್ಷ ಕೇಶವ ಮಯ್ಯ, ಸದಸ್ಯರಾದ ಕುಸುಮಾವತಿ, ಚಂದ್ರಶೇಖರ, ಹಾಗೂ ಯೂನಿಟ್ ಸದಸ್ಯರು ಭಾಗವಹಿಸಿದರು. ತಾಲೂಕು ಮಾಜಿ ಸದಸ್ಯ ಪುರುಷೆÆÃತ್ತಮ ವಂದಿಸಿದರು. ಕಾರ್ಯದರ್ಶಿ ಸುರೇಖ …