ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಆತ್ಮಹತ್ಯಾ ಯತ್ನ: ಇಲಿ ವಿಷ ಸೇವಿಸಿದ 16ರ ಬಾಲಕ ಆಸ್ಪತ್ರೆಯಲ್ಲಿ

ಬಂದಡ್ಕ: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಆತ್ಮಹತ್ಯಾ ಯತ್ನ ನಡೆದಿದೆ. ಉನ್ನತಿಯಲ್ಲಿ ವಾಸ ಮಾಡುತ್ತಿದ್ದ 16ರ ಹರೆಯದ ಬಾಲಕ ಇಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷ ಸೇವಿಸಿದ್ದಾನೆಂಬ ಮಾಹಿತಿ ತಿಳಿದ ಕೂಡಲೇ ನಿನ್ನೆ ಬೆಳಿಗ್ಗೆ ಬಾಲಕನನ್ನು ಬೇಡಡ್ಕ ತಾಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಡಾಕ್ಟರ್ ನಡೆಸಿದ ತಪಾಸಣೆಯಲ್ಲಿ ಇಲಿ ವಿಷ ಹೊಟ್ಟೆಯೊಳಗೆ ಸೇರಿರುವುದನ್ನು  ಖಚಿತಪಡಿಸಲಾಯಿತು. ಆ ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬೇಡಗಂ ತೋರೋತ್ ನಿವಾಸಿ ಟಿ. …

ನಿರಶನ ಕೊನೆಗೊಳಿಸಿದ ಸೋನಂ ವಾಂಕ್ಚುಕ್: ಪ್ರಶ್ನೆ ಪತ್ರಿಕೆಗಳ ಸೋರಿಕೆ ತಡೆಗೆ ಮಸೂದೆ ರೂಪು

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳು ದಾಗಿ ನಿನ್ನೆ ತಡರಾತ್ರಿ ಸುಮಾರು 3 ನಿಮಿಷಗಳ ಇನ್‌ಸ್ಟಾಗ್ರಾಂ ವೀಡಿಯೋ ಸಂದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ದಾರೆ.  ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಜಿರಳೆ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರ ಪ್ರತಿಭಟನೆ ಇನ್ನೂ  ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ಮಹತ್ವದ ಘೋಷಣೆ ಹೊರಡಿಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿ ಯಾಗಿರುವವರ ವಿರುದ್ಧ  ಕಠಿಣ ಕ್ರಮ ಕೈಗೊಳ್ಳಲು …

ಚೇರಂಗೈಯಲ್ಲಿ ತೀವ್ರ ಕಡಲ್ಕೊರೆತ: ಸಮುದ್ರಪಾಲಾದ ರಸ್ತೆ

ಕಾಸರಗೋಡು: ಕಾಸರಗೋಡು ಬಳಿಯ ಚೇರಂಗೈಯಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದು ಇದರಿಂದ ಸಮೀಪದ ರಸ್ತೆ ಸಮುದ್ರಪಾಲಾಗಿದೆ. ಮಾತ್ರವಲ್ಲದೆ ಈ ಪರಿಸರದ ಹಲವು ತೆಂಗಿನ ಮರಗಳೂ ಬುಡಸಹಿತ ಮಗುಚಿ ಬಿದ್ದಿವೆ. ಸಿಪಿಸಿಆರ್‌ಐ  ಪಕ್ಕದ ಸಮುದ್ರ ಕಿನಾರೆಯ  ರಸ್ತೆಯನ್ನೂ  ಸಮುದ್ರ ಭಾಗಶಃ ನುಂಗಿದೆ. ಈ ಪ್ರದೇಶದ ಹಲವು ತೆಂಗಿನ ಮರಗಳೂ ಮಗುಚಿಬಿದ್ದಿವೆ. ಕಡಲ್ಕೊರೆತ ಇನ್ನೂ ಮುಂದುವರಿ ಯುತ್ತಿದ್ದು ಇದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಮೂರು ವರ್ಷಗಳ ಹಿಂದೆಯೂ ಚೇರಂಗೈಯಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿತ್ತು. ಆ ವೇಳೆ  ಹಲವು ಮನೆಗಳು ಹಾಗೂ …

ಒಂದುವಾರ ಹಿಂದೆ ಮನೆಯಿಂದ ಹೋದ ವ್ಯಕ್ತಿ ನಾಪತ್ತೆ

ಉಪ್ಪಳ: ಒಂದು ವಾರದ ಹಿಂದೆ ಮನೆಯಿಂದ ತೆರಳಿದ ವ್ಯಕ್ತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ವರ್ಕಾಡಿ ದೇವಂದಪಡ್ಪು ನಿವಾಸಿ ಕಿಶನ್ ಕುಮಾರ್ ಶೆಟ್ಟಿ (32) ನಾಪತ್ತೆಯಾದ ವ್ಯಕ್ತಿ. ಇವರು ದೇವಂದಪಡ್ಪಿನಲ್ಲಿ  ಕೆಂಪು ಕಲ್ಲು ಕ್ವಾರೆಯ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ತಿಂಗಳ 16ರಂದು ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೊರಗೆ ತೆರಳಿದ್ದ್ದಾರೆನ್ನ ಲಾಗಿದೆ. ಅನಂತರ ಮರಳಿ ಬಂದಿಲ್ಲ. ವಿವಿಧೆಡೆ ಹುಡುಕಾಡಿದರೂ ಪತ್ತೆಹಚ್ಚಲಾಗಿಲ್ಲ.  ಅಲ್ಲದೆ ಕಿಶನ್ ಕುಮಾರ್‌ರ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ಅದು ಸ್ವಿಚ್‌ಆಫ್ ಆಗಿರುವುದಾಗಿ ತಿಳಿದುಬರುತ್ತದೆ. …

ಎಂಡಿಎಂಎ ಸಹಿತ ಇಬ್ಬರ ಬಂಧನ: ಕಾರು ವಶ

  ಕುಂಬಳೆ: ಜಿಲ್ಲೆಗೆ ಮಾದಕ ವಸ್ತುಗಳ ಸಾಗಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಬಿಗುಗೊಳಿಸಿದ್ದು, ಈ ವೇಳೆ ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿ ಎಂಎ ಪತ್ತೆಯಾಗಿದೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಲ್ಪಾಡಿ ಪಚ್ಚಂಬಳ ದೀನಾರ್‌ನಗರದ ಮೊಯ್ದೀನ್ ಕುಂಞಿ (41), ಜೋಡುಕಲ್ಲಿನ ಫಾರೂಕ್ ಮೊಹಮ್ಮದ್ (44) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಇವರ ಕೈಯಿಂದ 112.170 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ.  ಮಾದಕವಸ್ತು ಸಾಗಿಸುತ್ತಿದ್ದ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ಮಾದಕವಸ್ತು ಸಾಗಾಟ ಬಗ್ಗೆ ಲಭಿಸಿದ ಮಾಹಿತಿಯ ಮೇರೆಗೆ ಮಂಜೇಶ್ವರ ಎಸ್‌ಐ …

ಹಬ್‌ನಿಂದ ಸಂಸ್ಥೆಗೆ ತಿಳಿಯದೆ ಪಶು ಆಹಾರ ಮಾರಾಟಗೈದ ಆರೋಪ: ಮೆನೇಜರ್ ವಿರುದ್ಧ ಪ್ರಕರಣ ದಾಖಲು

ಕುಂಬಳೆ: ಸಂಸ್ಥೆಗೆ ತಿಳಿಯದೆ ಹಬ್‌ನಿಂದ ಪಶು ಆಹಾರ ಮಾರಾಟ ಮಾಡಿ ವಂಚನೆಗೈದಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಪ್ರಸ್ತುತ ಹಬ್‌ನ ಮಾರ್ಕೆಟಿಂಗ್ ಮೆನೇ ಜರ್ ವಿರುದ್ಧ ಕುಂಬಳೆ ಪೊಲೀಸರು ವಿಶ್ವಾಸಘಾತಕ ತೋರಿದ ಸೆಕ್ಷನ್ ಪ್ರಕಾರ ಪ್ರಕgಣ ದಾಖಲಿಸಿಕೊಂಡಿ ದ್ದಾರೆ. ಎಳಂಬಚ್ಚಿ ನಿವಾಸಿ ಬಿಜು ಪಿ.ಕೆ ಎಂಬಾತನ ವಿರುದ್ಧ ಪ್ರಕರಣ ದಾಖಲಿ ಸಲಾಗಿದೆ. ಕುಂಬಳೆ ಕೊಯಿಪ್ಪಾಡಿಯಲ್ಲಿ ಕಾರ್ಯವೆಸಗುತ್ತಿರುವ ಎಂಆರ್‌ಡಿಎಸ್  ಎಂಬ ಸಂಸ್ಥೆಯ ಹಬ್ ನಿಂದ ತಲಾ 25 ಕಿಲೋ ದ 1221 ಗೋಣಿ ಚೀಲದಷ್ಟು ಪಶು ಆಹಾರವನ್ನು 2025 ಅಗೋಸ್ತ್ …

ಬೇಳ ಗ್ರಾಮ ಕಚೇರಿಯಿಂದ ಕಳವಿಗೀಡಾದ ಲ್ಯಾಪ್‌ಟಾಪ್‌ಗಳು ಪತ್ತೆ

ಬದಿಯಡ್ಕ: ನೀರ್ಚಾಲಿನಲ್ಲಿರುವ ಬೇಳ ಗ್ರಾಮ ಕಚೇರಿಯಿಂದ ಕಳವಿಗೀಡಾದ ಲ್ಯಾಪ್‌ಟಾಪ್‌ಗಳು ಸಮೀಪದ ಪೊದೆಗಳೆಡೆಯಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ಸೋಮವಾರ ರಾತ್ರಿ ಗ್ರಾಮ ಕಚೇರಿಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಮೂರು ಲ್ಯಾಪ್‌ಟಾಪ್‌ಗಳನ್ನು ಕಳವು ನಡೆಸಿದ್ದರು. ಮಂಗಳವಾರ ಬೆಳಿಗ್ಗೆ ಕಚೇರಿಗೆ ನೌಕರರು ಆಗಮಿಸಿದಾಗ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ.  ಈ ಬಗ್ಗೆ ಗ್ರಾಮಾಧಿ ಕಾರಿ ಶಶಿಕುಮಾರ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ತಲುಪಿ ಪರಿಶೀಲನೆ ನಡೆಸಿದಾಗ  ಲ್ಯಾಪ್‌ಟಾಪ್‌ಗಳು ಕಳವಿಗೀಡಾದ ಬಗ್ಗೆ ತಿಳಿದುಬಂದಿದೆ. ಅನಂತರ ನಡೆಸಿದ ತಪಾಸಣೆ ವೇಳೆ …

ಕುಂಬಳೆಯ ಟೂರಿಸ್ಟ್ ಹೋಟೆಲ್ ಮಾಲಕ ನಿಧನ

ಕುಂಬಳೆ:  ಕುಂಬಳೆಯ ಟೂರಿಸ್ಟ್ ಹೋಟೆಲ್ ಮಾಲಕನೂ ರೈಲ್ವೇ ನಿಲ್ದಾಣ ಸಮೀಪ ನಿವಾಸಿಯಾದ ಅಬ್ಬಾಸ್ ನಡುತ್ತೋಪ್ (74) ನಿಧನ ಹೊಂದಿ ದರು. ಅಸೌಖ್ಯ ಬಾಧಿಸಿದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ರಾತ್ರಿ 8 ಗಂಟೆ ವೇಳೆ ಕಾಸರಗೋಡಿನ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಮೃತರು ಪತ್ನಿ ಬದರುನ್ನೀಸ, ಮಕ್ಕಳಾದ ಸಬಾನ, ಸಬೀನ, ಶಫೀಕ್, ಸವಾದ್, ಸೈದಿ, ಮಾಹಿನ್ ಶಾದು, ಅಳಿಯ -ಸೊಸೆಯಂದಿರಾದ  ಅಮೀರ್, ಸಮೀರ್, ಸಾಹಿದ, ಸಹೋದರ-ಸಹೋದರಿಯರಾದ ಅಲೀಮ, ಸೈನುದ್ದೀನ್, ಹಮೀದ್, ಖಾಲಿದ್, ರಹೀಂ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪೈಕ ನಿವಾಸಿ ಬೆಂಗಳೂರಿನಲ್ಲಿ ಕುಸಿದುಬಿದ್ದು ಮೃತ್ಯು

ಕಾಸರಗೋಡು: ಪೈಕ ಬಳಿಯ ಬಾಲಡ್ಕದ ಬಿ.ಟಿ. ಜ್ಯೋತಿಷ್ (26) ಬೆಂಗಳೂರಿನಲ್ಲಿ ಕುಸಿದುಬಿದ್ದು ಮೃತ ಪಟ್ಟರು. ಬುಧವಾರ ಬೆಳಿಗ್ಗೆ ಕೆಲಸಕ್ಕೆ ತೆರಳಲು ಸಿದ್ಧತೆಯಲ್ಲಿದ್ದಾಗ ಇವರು ಕುಸಿದುಬಿದ್ದಿದ್ದರು. ಕೂಡಲೇ ಸಹೋ ದ್ಯೋಗಿಗಳು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕಳೆದ ಐದು ವರ್ಷಗಳಿಂದ ಬೆಂಗಳೂರಿನ  ಖಾಸಗಿ ಕಂಪೆನಿಯೊಂದರಲ್ಲಿ ಜ್ಯೋತಿಷ್ ಕೆಲಸ ನಿರ್ವಹಿಸುತ್ತಿದ್ದರು. ತಾಯತ್ತ್‌ವಳಪ್ಪಿಲ್ ಬಾಲಕೃಷ್ಣನ್-ಮಲ್ಲಿಕಾ ದಂಪತಿಯ ಪುತ್ರನಾದ ಮೃತರು ಸಹೋದರ-ಸಹೋದರಿಯರಾದ ಮನೀಶ, ಕಾವ್ಯ, ದಿವ್ಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಹಿರಿಯ ಕೃಷಿಕ ನಿಧನ

ಉಪ್ಪಳ: ಕುಬಣೂರು ಪಂಜ ನಿವಾಸಿ ಹಿರಿಯ ಕೃಷಿಕ ಬಾಬು ಶೆಟ್ಟಿ (67) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಈ ಹಿಂದೆ ಸುಮಾರು 25 ವರ್ಷಗಳ ಕಾಲ ದುಬೈಯಲ್ಲಿ ಟೈಲರ್ ಆಗಿದ್ದರು. ಮೃತರು ಮಕ್ಕಳಾದ ಪ್ರಿಯಾಂಕ, ವಿನಯರಾಜ್, ಅಳಿಯ, ಸೊಸೆ, ಸಹೋದರ ಸಂಜೀವ ಶೆಟ್ಟಿ ಮುಂಬಯಿ, ಸಹೋದರಿಯರಾದ ಪದ್ಮಾವತಿ, ಸುಮತಿ, ಲಲಿತ, ವಸಂತಿ, ವಿಶಾಲ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ವಿಶಾಲ ಈ ಹಿಂದೆ ನಿಧನ ಹೊಂದಿದ್ದಾರೆ.