ಮಲಿನ ಜಲ ತೋಡಿಗೆ ಹರಿಯಬಿಟ್ಟ ಟ್ಯಾಂಕರ್ ಲಾರಿ ಚಾಲಕ ಸೆರೆ

ಕಾಸರಗೋಡು: ತೆಕ್ಕಿಲ್ ರಾಷ್ಟ್ರೀಯ ಹೆದ್ದಾರಿ ಬದಿಯ ತೋಡಿಗೆ ಮಲಿನ ಜಲವನ್ನು ಹರಿಸಲು ತಲುಪಿದ ಟ್ಯಾಂಕರ್ ಲಾರಿ ಚಾಲಕನನ್ನು ಮೇಲ್ಪರಂಬ ಪೊಲೀಸರು ಸೆರೆ ಹಿಡಿದರು. ಮಲಿನ ಜಲ ಸಹಿತ ತಲುಪಿದ ಲಾರಿಯನ್ನು ಕಸ್ಟಡಿಗೆ ತೆಗೆದಿದ್ದಾರೆ. ಉಪ್ಪಳ ಮುಳಿಂಜ ನಿವಾಸಿ  ಅಬ್ದುಲ್ ರಹ್ಮಾನ್ (34)ನನ್ನು ಸೆರೆ ಹಿಡಿಯಲಾಗಿದೆ. ಆದಿತ್ಯ ವಾರ ರಾತ್ರಿ 11 ಗಂಟೆಗೆ ಲಾರಿ ಯಿಂದ ಮಲಿನ ಜಲವನ್ನು ಉಪೇಕ್ಷಿಸುವುದನ್ನು ಕಂಡ ಸ್ಥಳೀ ಯರಲ್ಲಿ ಓರ್ವ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಇನ್ಸ್‌ಪೆಕ್ಟರ್ ಎನ್.ಪಿ. ರಾಘವನ್‌ರ ನೇತೃತ್ವದಲ್ಲಿ ಮೇಲ್ಪ …

ಬಟ್ಯಪದವಿನಲ್ಲಿ ವ್ಯಾಪಾರಿಯನ್ನು ಗುಂಡು ಹಾರಿಸಿ ಕೊಲೆಗೈಯ್ಯಲೆತ್ನ: ಆರೋಪಿಗಳಿಗಾಗಿ ವ್ಯಾಪಕ ಶೋಧ

ಮಂಜೇಶ್ವರ:  ಮೀಂಜ ಬಟ್ಯಪದವಿ ನಲ್ಲಿ  ಗುಂಡು ಹಾರಿಸಿ  ವ್ಯಾಪಾರಿಯನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ  ಆರೋ ಪಿಗಳಿಗಾಗಿ  ಪೊಲೀಸರು ತನಿಖೆ ತೀವ್ರಗೊ ಳಿಸಿದ್ದಾರೆ. ಖಾದರ್ ಮದನಕ್ಕಲ್, ಮೀಯಪದವು ರಹೀಂ, ಅಬೂಬಕ್ಕರ್ ಸಿದ್ದಿಕ್ ಹಾಗೂ ಕಂಡರೆ ಪತ್ತೆಹಚ್ಚಬಹು ದಾದ ಇನ್ನೋರ್ವನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.  ಆರೋಪಿಗಳು ಕರ್ನಾಟಕಕ್ಕೆ ಪರಾರಿ ಯಾದ ಬಗ್ಗೆ ಮಾಹಿತಿ ಲಭಿಸಿ ದ್ದು, ಈ ಹಿನ್ನೆಲೆಯಲ್ಲಿ ತನಿಖೆಯನ್ನು ಅತ್ತ ವಿಸ್ತರಿಸಲಾಗಿದೆಯೆಂದು  ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಮಧ್ಯಾಹ್ನ 12 ಗಂಟೆ ವೇಳೆ  ಬಟ್ಯಪದವಿನಲ್ಲಿ ಗುಂಡು ಹಾರಾಟ  …

ಸ್ಮೋಕ್ ಹೌಸ್‌ನಲ್ಲಿರಿಸಿದ್ದ ರಬ್ಬರ್ ಶೀಟ್ ಕಳವು: 2 ತಿಂಗಳೊಳಗೆ ಎರಡನೇ ಬಾರಿ ಕಳ್ಳರ ದಾಳಿ

ಮುಳ್ಳೇರಿಯ: ಸ್ಮೋಕ್ ಹೌಸ್‌ದಲ್ಲಿರಿಸಿದ್ದ ರಬ್ಬರ್ ಶೀಟ್ ಗಳನ್ನು ಕಳವು ನಡೆಸಲಾಗಿದೆ. ಕಿನ್ನಿಂ ಗಾರು ಬಳಿಯ ಕೊಚ್ಚಿ ಎಂಬಲ್ಲಿನ ಮೋಹನಕೃಷ್ಣ ಭಟ್ ಎಂಬವರ ರಬ್ಬರ್ ಶೀಟ್ ಕಳವಿಗೀಡಾಗಿದೆ.   ಮನೆಯ ಅಲ್ಪ ದೂರದಲ್ಲೇ ಸ್ಮೋಕ್ ಹೌಸ್ ಇದ್ದು ಇಂದು ಬೆಳಿಗ್ಗೆ ಮೋಹನಕೃಷ್ಣ   ಭಟ್ ಅಲ್ಲಿಗೆ ಹೋದಾಗಲೇ ರಬ್ಬರ್ ಶೀಟ್ ಕಳವು ನಡೆದ ಬಗ್ಗೆ ಅರಿವಿಗೆ ಬಂದಿದೆ. ಸ್ಮೋಕ್ ಹೌಸ್‌ನ ಬಾಗಿಲಿನ ಬೀಗ ಮುರಿದ ಸ್ಥಿತಿಯಲ್ಲಿದೆ. ಅಲ್ಲದೆ ದಾರಿಯಲ್ಲಿ  10ರಷ್ಟು ಶೀಟ್‌ಗಳು ಬಿದ್ದುಕೊಂಡಿರುವುದು ಕಂಡುಬಂದಿದೆ. ಕಳ್ಳರು ರಬ್ಬರ್ ಶೀಟ್ ಕದ್ದೊಯ್ಯುತ್ತಿದ್ದ ವೇಳೆ …

ಶಾಲೆಗೆ ತೆರಳುತ್ತಿದ್ದ ಬಾಲಕಿಗೆ ಕಿರುಕುಳ ಯತ್ನ: ಆರೋಪಿ ಪತ್ತೆಗೆ  ಶೋಧ ಆರಂಭಿಸಿದ ಬದಿಯಡ್ಕ ಪೊಲೀಸ್

ಬದಿಯಡ್ಕ: ಶಾಲೆಗೆ ತೆರಳುತ್ತಿದ್ದ 13ರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಬಗ್ಗೆ ದೂರಲಾಗಿದೆ.  ಕಳೆದ ದಿನ ಬೆಳಿಗ್ಗೆ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಾಲಕಿ  ಒಬ್ಬಳೇ ನಡೆದು ಶಾಲೆಗೆ ತೆರಳುತ್ತಿದ್ದ ವೇಳೆ   ದಾರಿಮಧ್ಯೆ ವ್ಯಕ್ತಿಯೋರ್ವ   ಬಾಲಕಿಯ ದೇಹವನ್ನು ಸ್ಪರ್ಶಿಸಿದ್ದಾನೆನ್ನಲಾಗಿದೆ. ಈ ವೇಳೆ ಬಾಲಕಿ  ಬೊಬ್ಬೆ ಹಾಕಿದ್ದು ಅಷ್ಟರಲ್ಲಿ ವ್ಯಕ್ತಿ ಓಡಿ ಪರಾರಿಯಾಗಿದ್ದಾನೆ. ಬಾಲಕಿ ಶಾಲೆಗೆ ತಲುಪಿ ಸಹಪಾಠಿಗಳಲ್ಲಿ  ವಿಷಯ ತಿಳಿಸಿದ್ದು, ಅನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಇದರಂತೆ ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡ ಬದಿಯಡ್ಕ …

ಟ್ಯಾಬ್ ಖರೀದಿಸಿ ಹಣ ನೀಡದೆ ಅಪ್ರತ್ಯಕ್ಷಗೊಂಡ ಹತ್ತರಷ್ಟು ವಂಚನೆ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ಟ್ಯಾಬ್ ಖರೀದಿಸಿದ ಬಳಿಕ ಅದರ ಹಣ ನೀಡದೆ ದಿಢೀರ್ ಆಗಿ ಅಪ್ರತ್ಯಕ್ಷಗೊಂಡ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿ ಇಡಪಳ್ಳಿ ನಿವಾಸಿ ಕಿಶೋರ್ ಶಂಕರ್ (41) ಬಂಧಿತ ಆರೋಪಿ. ನಂತರ ಆತನನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕಳೆದ ಜುಲೈ ೨೦ರಂದು ಆರೋಪಿ ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿಯ ಮೊಬೈಲ್ ಅಂಗಡಿಯೊಂದಕ್ಕೆ ಬಂದು ಅಲ್ಲಿಂದ  ಸ್ಯಾಮ್‌ಸಂಗ್ ಎಸ್-೯ ಮೋಡೆಲ್‌ನ ಟ್ಯಾಬ್ ಖರೀದಿಸಿದ್ದನು. ಡಿಸ್ಕೌಂಟ್ ಕಳೆದ ಬಾಕಿ 32,492 ರೂ.ವನ್ನು ಬ್ಯಾಂಕ್ ಆಪ್‌ನ …

ಪತ್ವಾಡಿಯ ಮನೆಯಿಂದ ಮೂರೂವರೆ ಕಿಲೋ ಎಂಡಿಎಂಎ, 642 ಗ್ರಾಂ ಗಾಂಜಾ ವಶ ಪ್ರಕರಣ: ಗಲ್ಫ್‌ಗೆ ಪರಾರಿಯಾಗಿದ್ದ ಆರೋಪಿ ಬಂಧನ

ಕುಂಬಳೆ:  ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ಪತ್ವಾಡಿಯಲ್ಲಿರುವ ಮನೆಯಿಂದ  ಮೂರೂವರೆ ಕಿಲೋ ಎಂಡಿಎಂಎ ಹಾಗೂ 642 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ  ಇನ್ನೋರ್ವ ಆರೋಪಿ ಸೆರೆಗೀಡಾ ಗಿದ್ದಾನೆ. ಉಪ್ಪಳ ಮೊಗರು ನಿವಾಸಿ ಸುಹೈಲ್ ಎಂಬಾತನನ್ನು  ಹೊಸದಿ ಲ್ಲಿಯ ವಿಮಾನ ನಿಲ್ದಾಣದಿಂದ  ಸೆರೆಹಿಡಿಯಲಾಗಿದೆ.   ಮಾದಕವಸ್ತು ವಶ ಪ್ರಕರಣದಲ್ಲಿ ಆರೋಪಿಯಾದ  ಸುಹೈಲ್  ಗಲ್ಫ್‌ಗೆ  ಪರಾರಿಯಾಗಿದ್ದನು. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣ ಗಳಿಗೂ  ಪೊಲೀಸರು ಲುಕೌಟ್ ನೋಟೀಸು ಕಳುಹಿಸಿದ್ದರು. ಗಲ್ಫ್‌ನಲ್ಲಿ ಬೇರೊಂದು ಪ್ರಕರಣದಲ್ಲಿ ಸೆರೆಗೀ ಡಾದ  ಸುಹೈಲ್‌ನನ್ನು …

ಬೈಕ್‌ನಲ್ಲಿ ಎಂಡಿಎಂಎ ಸಾಗಿಸಿದ ಪ್ರಕರಣ ಆರೋಪಿಗೆ 10 ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಬೈಕ್‌ನಲ್ಲಿ ಮಾದಕದ್ರವ್ಯವಾದ 51 ಗ್ರಾಂ ಎಂಡಿಎಂಎ ಸಾಗಿಸಿದ ಪ್ರಕರಣದ ಆರೋಪಿ ಕಾಸರಗೋಡು ಹೆಚ್ಚುವರಿಗೆ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ರಾಮು ರಮೇಶ್‌ಚಂದ್ರ ಬಾನು ಅವರು ೧೦ ವರ್ಷ ಕಠಿಣ ಸಜೆ ಹಾಗೂ 1 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಮಂಜೇಶ್ವರ ಕುಬಣೂರು ಕಾನಾ ವೀಟಿಲ್‌ನ ಮೊಹಮ್ಮದ್ ಸಮೀರ್  (43) ಶಿಕ್ಷೆಗೊಳಗಾದ ಆರೋಪಿ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ  ೬ ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ೨೦೨೧ ಅಕ್ಟೋಬರ್ ೪ರಂದು …

ಹೃದಯಾಘಾತದಿಂದ ನಿಧನ

ಬದಿಯಡ್ಕ: ಅಸೌಖ್ಯ ಬಾಧಿಸಿ ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟರು. ಬಾಂಜತ್ತಡ್ಕ ನಿವಾಸಿ  ಸಂಜೀವ ಬಿ (57) ಎಂಬವರು ಮೃತಪಟ್ಟ ವ್ಯಕ್ತಿ. ಎದೆನೋವು  ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಇವರನ್ನು ಪರಿಯಾರಂನ ಆಸ್ಪತ್ರೆಯಲ್ಲಿ  ದಾಖಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ ಹೃದಯಾಘಾತವುಂಟಾಗಿ ನಿಧನ ಸಂಭವಿಸಿದೆ. ದಿವಂಗತರಾದ ಐತ್ತ-ಚನಿಯಾರು ದಂಪತಿಯ ಪುತ್ರನಾದ ಮೃತರು ಪತ್ನಿ ಸರೋಜಿನಿ, ಮಕ್ಕಳಾದ ಓಂಪ್ರಕಾಶ್, ಋತಿಕೇಶ್, ಮಂಗಳಾ ದೇವಿ, ಭಾಗ್ಯಶ್ರೀ, ಸಹೋದರಿಯರಾದ ಸುಶೀಲ, ರಾಜೀವಿ, ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಕಮಲಾಕ್ಷ …

ಬಿಎಂಎಸ್ ರಾಷ್ಟ್ರೀಯ ಆಂದೋಲನದಂಗವಾಗಿ ಮೆರವಣಿಗೆ, ಸಾರ್ವಜನಿಕ ಸಭೆ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘ್‌ನ ರಾಷ್ಟ್ರೀಯ ಆಂದೋಲನದಂಗವಾಗಿ ಕಾಸರಗೋಡಿನಲ್ಲಿ ಮೆರವಣಿಗೆ ಹಾಗೂ ಸಾರ್ವಜನಿಕ ಸಮ್ಮೇಳನ ನಡೆಸಲಾಯಿತು. ಕರಂದಕ್ಕಾಡ್‌ನಿಂದ ಆರಂಭಿಸಿದ ಕಾರ್ಮಿಕರ ಮೆರವಣಿಗೆ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಸಮಾಪ್ತಿಗೊಂಡಿತು. ಸಾರ್ವಜನಿಕ ಸಮ್ಮೇಳನವನ್ನು ಬಿಎಂಎಸ್ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ ಅಧ್ಯಕ್ಷತೆ ವಹಿಸಿದರು. ೨೯ ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್‌ಗಳಾಗಿ ಲೇಬರ್ ಕೋಡ್ ಕೇಂದ್ರ ಸರಕಾರ ಕಾನೂನು ಮಾಡಿದಾಗ ಅದರ ಇಂಡಸ್ಟ್ರಿಯಲ್ ರಿಲೇಶನ್ಸ್ ಕೋಡ್, ಒಕ್ಯುಪೇಶನ್ ಸೇಫ್ಟಿ ಹೆಲ್ತ್ ವರ್ಕಿಂಗ್ …

ಜಿಲ್ಲಾ ಮಟ್ಟದ ಓಣಂ ಹಬ್ಬಾಚರಣೆ ಕಾರ್ಯಕ್ರಮಗಳ ಯಶಸ್ವಿಗೆ ಸ್ವಾಗತ ಸಮಿತಿ ರೂಪೀಕರಣ

ಕಾಸರಗೋಡು: ಜಿಲ್ಲಾ ಮಟ್ಟದ ಓಣಂ ಹಬ್ಬಾಚರಣೆ ಕಾರ್ಯಕ್ರಮಗಳನ್ನು ಕಾಸರಗೋಡು ನಗರದಲ್ಲಿ ವಿಪುಲವಾಗಿ ಆಚರಿಸಲು ಜಿಲ್ಲಾ ಮಟ್ಟದ ಸ್ವಾಗತ ಸಮಿತಿ ರೂಪೀಕರಣ ಸಭೆಯಲ್ಲಿ ತೀರ್ಮಾನಿಸಲಾಯಿತು. ಇದರ ಯಶಸ್ವಿಗಾಗಿ ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷರಾಗಿ, ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಸಂಚಾಲಕರಾಗಿರುವ ಸಮಿತಿ ರೂಪೀಕರಿಸಲಾಯಿತು. ಕಾಸರಗೋಡು ಸರಕಾರಿ ಅತಿಥಿ ಮಂದಿರದಲ್ಲಿ ಜರಗಿದ ಸಭೆಯಲ್ಲಿ ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಮರ್ಚೆಂಟ್ಸ್ ಅಸೋಸಿಯೇಶನ್‌ನೊಂದಿಗೆ ಸೇರಿಕೊಂಡು ಮೆಗಾ ಹೂರಂಗವಲ್ಲಿ ಸ್ಪರ್ಧೆ ನಡೆಸಲಾಗುವುದು. ಮಹಿಳೆಯರಿಗೂ, ಪುರುಷರಿಗೂ ಹಗ್ಗಜಗ್ಗಾಟ ಸ್ಪರ್ಧೆ, ಹುಲಿವೇಷ ಸ್ಪರ್ಧೆ, ತಿರುವಾದಿರ …