ಆನೆಬಾಗಿಲು ವಲಿಯವೀಡು ತರವಾಡು ಶ್ರೀ ವಯನಾಟುಕುಲವನ್ ಆಡಳಿತ ಸಮಿತಿ ಮಹಾಸಭೆ

ಕಾಸರಗೋಡು: ಆನೆಬಾಗಿಲು ವಲಿಯವೀಡು ತರವಾಡು ಶ್ರೀ ವಯನಾಟುಕುಲವನ್ ಧರ್ಮದೈವ ಆಡಳಿತ ಸಮಿತಿ ಮಹಾಸಭೆ ಇತ್ತೀಚೆಗೆ ತರವಾಡು ಮನೆಯಲ್ಲಿ ಜರಗಿತು. ಸಮಿತಿ ಅಧ್ಯಕ್ಷ ಕುಮಾರನ್ ತಿರುವಕ್ಕೋಳಿ ಅಧ್ಯಕ್ಷತೆ ವಹಿಸಿದರು. ಕಾರ್ನವರ್ ದಾಸನ್ ಕಂಡತ್ತಿಲ್ ಉದ್ಘಾಟಿಸಿದರು. ಕಾರ್ಯದರ್ಶಿ ಸುಕುಮಾರ್ ಕುದ್ರೆಪ್ಪಾಡಿ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ವಿನಯನ್ ಕೇಳುಗುಡ್ಡೆ ಲೆಕ್ಕಪತ್ರ ಮಂಡಿಸಿದರು. ತರವಾಡಿನಲ್ಲಿ ಮುಂದೆ ನಡೆಯಲಿರುವ ಕ್ಷೇತ್ರ ನವೀಕರಣ ಪುನರ್‌ಪ್ರತಿಷ್ಠೆಯ ಬಗ್ಗೆ ಚರ್ಚೆ ನಡೆಸಲಾಯಿತು. ಕೆಎಸ್‌ಇಬಿಯಲ್ಲಿ 36 ವರ್ಷ ಓವರ್‌ಸಿಯರ್ ಆಗಿದ್ದು ನಿವೃತ್ತರಾದ ತರವಾಡು ಆಡಳಿತ ಸಮಿತಿ ಉಪಾಧ್ಯಕ್ಷ ಅರವಿಂದಾಕ್ಷನ್ …

ತಲೆ ಹಾಗೂ ಕುತ್ತಿಗೆ ಓಂಕಾಲಜಿ ವಿಭಾಗ ಕಾಸರಗೋಡು ಆಸ್ಟರ್ ಮಿಮ್ಸ್‌ನಲ್ಲಿ ಆರಂಭ

ಕಾಸರಗೋಡು: ತಲೆ ಹಾಗೂ ಕುತ್ತಿಗೆಯ ಕ್ಯಾನ್ಸರ್ ಬಾಧಿತರಿಗೆ ಕಾಸರಗೋಡು ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ತಜ್ಞ ಚಿಕಿತ್ಸೆಗೆ ಅತ್ಯಾಧುನಿಕ ಓಂಕಾಲಜಿ ವಿಭಾಗ ಆರಂಭಗೊಂಡಿದೆ. ಡಿಪಾರ್ಟ್‌ಮೆಂಟ್ ಮುಖ್ಯಸ್ಥ ಡಾ| ಶೋನ್ ಟಿ. ಜೋಸೆಫ್ ಉದ್ಘಾಟಿಸಿದರು. ಚೀಫ್ ಆಪರೇಟಿಂಗ್ ಅಧಿಕಾರಿ ಸುಧೀರ್ ಬಾಸುರಿ, ಕ್ರಿಟಿಕಲ್ ಕೇರ್ ಮೇಧಾವಿ ಡಾ| ಸಾಜಿದ್ ಸಲಾಹುದ್ದೀನ್, ಸರ್ಜಿಕಲ್ ಓಂಕಾಲಜಿ ಆಸೋಸಿಯೇಟ್ ಕನ್ಸಲ್‌ಟೆಂಟ್ ಡಾ| ಅರವಿಂದ್ ಎನ್., ಹೆಡ್ ಆಂಡ್ ನೆಕ್ ಓಂಕಾಲಜಿ ಅಸೋಸಿಯೇಟ್ ಕನ್ಸಲ್‌ಟೆಂಟ್ ಡಾ| ಸೌರಭ್ ಪದ್ಮನಾಭನ್ ಭಾಗವಹಿಸಿದರು. ಅಂತಾರಾಷ್ಟ್ರ ಗುಣಮಟ್ಟವಿರುವ ರೋಗ ನಿರ್ಣಯದಿಂದ …

ಎಡ-ಐಕ್ಯರಂಗ ಯಾರೇ ಆಡಳಿತ ನಡೆಸಿದರೂ ಮೀನು ಕಾರ್ಮಿಕರಿಗೆ ಟ್ರೋಲಿಂಗ್ ಕಾಲದಲ್ಲಿ ಉಪವಾಸ- ಎಂ.ಎಲ್. ಅಶ್ವಿನಿ

ಕಾಸರಗೋಡು: ಎಡರಂಗ ಆಡಳಿತ ನಡೆಸಿದರೂ ಐಕ್ಯರಂಗ ಆಡಳಿತ ನಡೆಸಿದರೂ ಕೇರಳದ ಮೀನುಕಾರ್ಮಿಕರಿಗೆ ಟ್ರೋಲಿಂಗ್ ನಿಷೇಧವಿರುವ ತಿಂಗಳುಗಳು ಉಪವಾಸದ ದಿನಗಳಾಗಿವೆ, ಪೆನ್ಶನ್, ರೇಶನ್ ನೀಡುವುದು ವಿಳಂಬವಾಗುತ್ತಿರುವುದು ಸಾಮಾನ್ಯವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಆಯೋಜಿಸಿದ ಕಾಸರಗೋಡು ಫಿಶರೀಸ್ ಕಚೇರಿ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆಧುನಿಕ ವಿಜ್ಞಾನ ತಾಂತ್ರಿಕ ವಿದ್ಯೆಯ ಸಹಾಯದೊಂದಿಗೆ ನರೇಂದ್ರ ಮೋದಿ ಸರಕಾರ ಮೀನು ಕಾರ್ಮಿಕರ ಭದ್ರತೆ, ಕ್ಷೇಮವನ್ನು ಜ್ಯಾರಿಗೊಳಿಸುತ್ತಿರುವಾಗ ಅರ್ಹವಾದ ಸೌಲಭ್ಯ ಕೂಡಾ ಖಚಿತಪಡಿಸಲು ರಾಜ್ಯ …

ಬಳ್ಳೂರು- ಮರ್ಕತ್ತಡ್ಕ ಸೇತುವೆ ಸಂಪರ್ಕ ರಸ್ತೆ ಬಿರುಕು

ಪೈವಳಿಕೆ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬಿರುಕುಬಿಟ್ಟಿದ್ದು ಇದರಿಂದ ವಾಹನ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಪೈವಳಿಕೆ ಪಂಚಾಯತ್‌ನ ೭ನೇ ವಾರ್ಡ್ ಬಳ್ಳೂರು- ಮರ್ಕತ್ತಡ್ಕ ಸೇತುವೆಗೆ ಸಂಪರ್ಕಿಸುವಲ್ಲಿ ರಸ್ತೆ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಸೃಷ್ಟಿಸಿದೆ. 25 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ಇದಾಗಿದೆ. ಶಾಲಾ ವಾಹನಗಳ ಸಹಿತ ಹಲವಾರು ವಾಹನಗಳು ದಿನನಿತ್ಯ ಈ ರಸ್ತೆ ಮೂಲಕ ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ರಸ್ತೆ ಇನ್ನಷ್ಟು ಕುಸಿದರೆ ಈ ಮೂಲಕ ಸಂಚಾರಕ್ಕೆ …

ರಾಮ ಕೆ.ಎನ್ ನಿಧನ

  ಕಳತ್ತೂರು: ಕಿದೂರು ನಿವಾಸಿ ರಾಮ ಕೆ.ಎನ್ (50) ನಿನ್ನೆ ನಿಧನಹೊಂದಿದರು. ಮೃತರು ಪತ್ನಿ ಜಯಂತಿ, ಮಕ್ಕಳಾದ ಶಾನು, ಯಶಸ್ವಿನಿ, ಸುರಕ್ಷಿತ್, ಸಹೋದರ-ಸಹೋದರಿಯರಾದ ಕೇಶವ, ನಾರಾಯಣ, ಚಂದ್ರಹಾಸ, ಜಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹಾಜಿ ಚೆರ್ಕಳ ಮೊಹಮ್ಮದ್ ನಿಧನ

ಚೆರ್ಕಳ: ಸುನ್ನಿ ಮುಖಂಡ ಹಾಜಿ ಚೆರ್ಕಳ ಮೊಹಮ್ಮದ್ (66) ನಿಧನ ಹೊಂದಿದರು. ಚೆರ್ಕಳ ಮುಹಿಯಿ ದ್ದೀನ್ ಜಮಾಯತ್ ಮಸೀದಿ ಸಮಿತಿ ಅಧ್ಯಕ್ಷ, ಸುನ್ನಿ ಮಹಲ್ ಫೆಡರೇಶನ್ ಮಂಡಲ ಸಮಿತಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ಅಬ್ದುಲ್ಲ, ಫಾಸಿಲ್ ಫಿರೋಸ್, ಶಾಸಿನ್ ಶಾಹಿದ್, ರಿಸ್ವಾನ ತಸ್ನೀಂ,  ಅಳಿಯಂದಿ ರಾದ ಶೆರೀನ್, ಶೆರೀಫ್, ಸೊಸೆ ಫಸ್ನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇಬ್ರಾಹಿಂ ನಿಧನ

ನೀರ್ಚಾಲು: ನೀರ್ಚಾಲು ಮೇಲಿನ ಪೇಟೆಯಲ್ಲಿ ವಾಸಿಸುವ ಇಬ್ರಾಹಿಂ (64) ನಿಧನಹೊಂ ದಿದರು. ಇವರು ಅಡುಗೆ ಕಾರ್ಮಿಕ ನಾಗಿದ್ದರು. ಮೃತರು ಪತ್ನಿ ನಬೀಸ, ಮಕ್ಕಳಾದ ರಂಸೀನ, ಮರಿಯಮ್ಮ, ಸಫೀರ, ರಶೀದ, ನೌಫಲ್, ಅಳಿಯ-ಸೊಸೆಯಂದಿರಾದ ಅಶ್ರಫ್, ಶರೀಫ್, ಸಿದ್ದಿಕ್, ಶಾನಿಬ, ಸಹೋದರ-ಸಹೋದರಿಯರಾದ ಅಬ್ಬಾಸ್ ಕಲ್ಲಕಟ್ಟ, ಅಬ್ದುಲ್ಲ ಆಲಂಪಾಡಿ, ಮುಹಮ್ಮದ್ ಉರ್ಮಿ, ಫಾತಿಮ, ಮೈಮೂನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇಂಜಿನಿಯರ್ ಪಾಂಡ್ಯಾಲ ಶರೀಫ್ ನಿಧನ

ಕುಂಬಳೆ: ಶಿರಿಯ ಮುಟ್ಟಂ ನಿವಾಸಿ ಇಂಜಿನಿಯರ್ ಶರೀಫ್ ಯಾನೆ ಪಾಂಡ್ಯಾಲ ಶರೀಫ್ (58) ನಿಧನ ಹೊಂದಿದರು.  ಕರ್ನಾಟಕ ಪೊಲೀಸ್‌ನ ನಿವೃತ್ತ ಡಿವೈಎಸ್ಪಿ ಮುಹಮ್ಮದ್ ಕುಂಞಿಯವರ ಪುತ್ರನಾಗಿದ್ದಾರೆ. ಅಸೌಖ್ಯ ಬಾಧಿಸಿದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಧ್ಯೆ ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಮೃತರು ಪತ್ನಿ  ಕುಂಬಳೆಯ ಉದ್ಯಮಿ ಮೊಹಮ್ಮದ್ ಅರಬಿಯವರ ಮಗಳಾದ ಶಕೀಲ, ಮಕ್ಕಳಾದ ರುಮ, ರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಜಿಲ್ಲೆಯಲ್ಲಿ ಖಾಸಗಿ ಬಸ್ ಮುಷ್ಕರ ಪೂರ್ಣ: ಬಸ್ ಮಾಲಕರು, ಕಾರ್ಮಿಕರು, ಕುಟುಂಬದವರಿಂದ ಕಲೆಕ್ಟರೇಟ್‌ಗೆ ಮಾರ್ಚ್, ಧರಣಿ ಮುಷ್ಕರ 

ಕಾಸರಗೋಡು: ಪ್ರಿಯ ದರ್ಶಿನಿ ಯೋಜನೆಯಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿದ ರಾಜ್ಯ ಸರಕಾರದ ಕ್ರಮ ಖಾಸಗಿ ಬಸ್‌ಗಳ ಆದಾಯದ ಮೇಲೆ ತೀವ್ರ ಪರಿಣಾಮ ಬೀರಿರುವುದನ್ನು ಪ್ರತಿಭಟಿಸಿ ಜಿಲ್ಲೆಯಲ್ಲಿ ಇಂದು  ಖಾಸಗಿ ಬಸ್ ಮುಷ್ಕರ ನಡೆಯುತ್ತಿದೆ. ಇಂದು ಬೆಳಿಗ್ಗೆ ಆರಂಭ ಗೊಂಡ ಮುಷ್ಕರ ನಿರೀಕ್ಷೆಗೂ ಮೀರಿ ಯಶಸ್ವಿ ಕಂಡಿದೆ. ಮುಷ್ಕರ ನಿರತ ಬಸ್ ಮಾಲಕರು, ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು ಇಂದು ಬೆಳಿಗ್ಗೆ ಕಾಸರಗೋಡು ಕಲೆಕ್ಟರೇಟ್‌ಗೆ ಮಾರ್ಚ್ ನಡೆಸಿ ಧರಣಿ ಮುಷ್ಕರ ಹೂಡಿದರು. …

ವಿವಿಧ ಬೇಡಿಕೆ ಮುಂದಿರಿಸಿ ಕುಂಬಳೆ ವ್ಯಾಪಾರಿಗಳಿಂದ ಪಂಚಾಯತ್ ಕಚೇರಿಗೆ ಮಾರ್ಚ್, ಹರತಾಳ

ಕುಂಬಳೆ: ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಘಟಕ, ಮರ್ಚೆಂಟ್ಸ್ ಯೂತ್ ವಿಂಗ್ ನೇತೃತ್ವದಲ್ಲಿ ಕುಂಬಳೆ ವ್ಯಾಪಾರಿಗಳು ಇಂದು ಬೆಳಿಗ್ಗೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕುಂಬಳೆ ಪಂಚಾಯತ್ ಕಚೇರಿಗೆ ಮಾರ್ಚ್  ನಡೆಸಿದರು. ಕುಂಬಳೆ ವ್ಯಾಪಾರಿ ಭವನದಿಂದ ಆರಂಭಗೊಂಡ  ವ್ಯಾಪಾರಿಗಳ ಮೆರವಣಿಗೆ ಪೇಟೆ ಸುತ್ತಿ ಪೊಲೀಸ್ ಠಾಣೆ ಮುಂದೆ ಸಮಾಪ್ತಿಗೊಂಡಿತು. ಕುಂಬಳೆ ಪೇಟೆಯ ಎಲ್ಲಾ ವ್ಯಾಪಾರಿಗಳು  ಮಾರ್ಚ್‌ನಲ್ಲಿ ಪಾಲ್ಗೊಂಡಿದ್ದಾರೆ.  ಬದಿಯಡ್ಕ ಭಾಗದಿಂದ ಕುಂಬಳೆಗೆ ತಲುಪುವ ಬಸ್ ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸುವ  ಕ್ರಮವನ್ನು ನಿಲ್ಲಿಸಬೇಕು, ಹಳೆಯ ಬಸ್ ನಿಲ್ದಾಣವನ್ನು ಪ್ರಯಾ …