ನೈತಿಕ ಗೂಂಡಾಗಿರಿ ಬೆದರಿಕೆ: ನಗ-ನಗದು ಎಗರಿಸಿದ ಪ್ರಕರಣ; ಐವರ ಸೆರೆ
ಕಾಸರಗೋಡು: ನೈತಿಕ ಗೂಂಡಾಗಿರಿ ಬೆದರಿಕೆಯೊಡ್ಡಿ ಯುವತಿ ಹಾಗೂ ಆಕೆಯ ಸ್ನೇಹಿತನ ನಗ-ನಗದು ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ೫ ಮಂದಿಯನ್ನು ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ಪಿ. ಪ್ರಮೋದ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಮುಳಿಯಾರು ಪೊವ್ವಲ್ನ ಬಿ. ಶರೀಫ್ (೪೨), ಚೆರ್ಕಳ ಸಂತೋಷ್ನಗರದ ಮುಹಮ್ಮದ್ ಸಾಲೀಖ್ (22), ಆಲಂಪಾಡಿಯ ಅಬ್ದುಲ್ ರಶೀದ್ (36), ಚೆಂಗಳ ನಾಲ್ಕನೇ ಮೈಲು ನಿವಾಸಿಗಳಾದ ಉಮ್ಮರ್ ಮುಕ್ತಾರ್ (18), ಮುಹಮ್ಮದಲಿ ಶಿಹಾನ್ (20) ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿ ರಿಸಲಾಗಿದೆ. …
Read more “ನೈತಿಕ ಗೂಂಡಾಗಿರಿ ಬೆದರಿಕೆ: ನಗ-ನಗದು ಎಗರಿಸಿದ ಪ್ರಕರಣ; ಐವರ ಸೆರೆ”