ಅಡುಗೆ ಅನಿಲ ಕ್ಷಾಮ: ಕುಂಬಳೆಯಲ್ಲಿ 10ರಷ್ಟು ಹೋಟೆಲ್‌ಗಳು ಮುಚ್ಚುಗಡೆ

ಕುಂಬಳೆ: ಅಡುಗೆ ಅನಿಲ ಕ್ಷಾಮ ತೀವ್ರಗೊಂಡಿದ್ದು, ಇದರಿಂದ  ಕುಂಬಳೆಯಲ್ಲಿ 10ರಷ್ಟು ಹೋಟೆಲ್ ಗಳನ್ನು ಮುಚ್ಚುಗಡೆಗೊಳಿಸಲಾಗಿದೆ.  ಕುಂಬಳೆ ಪೇಟೆಯಲ್ಲಿರುವ ಹೋಟೆಲ್ ತಾಜ್, ಗೋಕುಲ್ ರೆಸ್ಟೋರೆಂಟ್, ಮುಬಾರಕ್, ಮಿರ್ಚಿ ಮಸಾಲ,  ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಬಳಿಯ ಕ್ಯಾಂಟೀನ್ ಸಹಿತ 10ರಷ್ಟು ಹೋಟೆಲ್‌ಗಳು ಇಂದು ತೆರೆಯಲಿಲ್ಲ. ಇತ್ತೀಚೆಗಿನಿಂದ ಅಡುಗೆ ಅನಿಲ ಸಿಲಿಂಡರ್ ವಿತರಣೆ ಮೊಟಕುಗೊಂಡಿ ರುವುದೇ ಇದಕ್ಕೆ ಕಾರಣವಾಗಿದೆ. ಅಡುಗೆ ಅನಿಲ ಲಭ್ಯವಾಗದಿದ್ದಲ್ಲಿ ಇನ್ನೂ ಹಲವು ಹೋಟೆಲ್‌ಗಳು ಮುಚ್ಚುಗಡೆಗೊಳ್ಳುವ ಸಾಧ್ಯತೆ ಯಿದೆಯೆಂದು ಹೇಳಲಾಗುತ್ತಿದೆ. ಇದೇ ವೇಳೆ ಹೋಟೆಲ್‌ಗಳು ಮುಚ್ಚು ಗಡೆಗೊಂಡಿರುವುದರಿಂದ …

ಎರಡು ಉದ್ಘಾಟನೆ ನಡೆದರೂ ರಾಷ್ಟ್ರೀಯ ಹೆದ್ದಾರಿ ಟೋಲ್‌ಗೇಟ್ ಬೋರ್ಡ್‌ಗಳ ತೆರವಿಗೆ ಕ್ರಮವಿಲ್ಲ: ವಾಹನ ಚಾಲಕರಿಗೆ ಗೊಂದಲ

ಕುಂಬಳೆ: ದೂರವ್ಯಾಪ್ತಿಯನ್ನು ಉಲ್ಲಂಘಿಸಿ ಸ್ಥಾಪಿಸಿದ ಕುಂಬಳೆ ಆರಿಕ್ಕಾಡಿ  ಟೋಲ್‌ಗೇಟ್ ಮುಚ್ಚುಗಡೆಗೊಳಿಸಿದರೂ ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆ  ಸ್ಥಾಪಿಸಿದ ಟೋಲ್‌ಗೇಟ್ ಸೂಚನಾ ಫಲಕಗಳು ಅದೇ ರೀತಿ ಉಳಿದುಕೊಂಡಿವೆ.  ಆರಿಕ್ಕಾಡಿಯಲ್ಲಿ ಹಾಗೂ ಕುಂಬಳೆ ಬದರ್ ಸುಮಾ ಮಸೀದಿ ಸಮೀಪ ಟೋಲ್‌ಗೇಟ್‌ನ ಸೂಚನಾ ಫಲಕಗಳನ್ನು ಸ್ಥಾಪಿಸಲಾಗಿದೆ. ಟೋಲ್ ಬೂತ್ ರದ್ದುಗೊಳ್ಳುವುದರೊಂದಿಗೆ ಫಲಕಗಳನ್ನು ತೆರವುಗೊಳಿಸಬೇಕಾಗಿತ್ತು. ಆದರೆ ಅಧಿಕಾರಿಗಳು ಅದಕ್ಕೆ ಸಿದ್ಧವಾಗದಿರುವುದು ವಾಹನ ಚಾಲಕರಿಗೆ ಗೊಂದಲ ಸೃಷ್ಟಿಸುತ್ತಿದೆ. ಕಳೆದ ವಾರ ಕಾಮಗಾರಿ ಪೂರ್ತಿಗೊಳಿಸಿದ ತಲಪಾಡಿ -ಚೆಂಗಳ ರೀಚ್ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಕೊಚ್ಚಿಯಲ್ಲಿ …

ಧರ್ಮತ್ತಡ್ಕ- ಬಾಯಾರು ರಸ್ತೆ ಬದಿ ಹೊಂಡಗಳು: ವಾಹನ ಪ್ರಯಾಣಿಕರಲ್ಲಿ ಭೀತಿ

ಪೈವಳಿಕೆ: ಧರ್ಮತ್ತಡ್ಕ- ಸಜಂಕಿಲ- ಬಾಯಾರು ಲೋಕೋಪಯೋಗಿ ನೂತನ ರಸ್ತೆಯ ಬದಿ ವಿವಿಧೆಡೆ ಹೊಂಡಗಳಿದ್ದು, ಇದು ವಾಹನ ಪ್ರಯಾಣಿಕರಿಗೆ ಭೀತಿಯೊಡ್ಡುತ್ತಿದೆ. ಪ್ರತೀದಿನ ಬಸ್ ಸಹಿತ ನೂರಾರು ವಾಹನಗಳು ಸಂಚರಿಸುವ ಪ್ರಧಾನ ರಸ್ತೆ ಇದಾಗಿದೆ. ರಸ್ತೆ ನಿರ್ಮಾಣ ವೇಳೆ ಅಪಾಯಕಾರಿ ರಸ್ತೆಯ ಬದಿ ಹೊಂಡವಿರುವಲ್ಲಿ ತಡೆಬೇಲಿ ನಿರ್ಮಿಸದಿರುವುದು ಅಪಾಯಭೀತಿಗೆ ಕಾರಣವಾಗಿದೆ.  ಸಜಂಕಿಲ, ಸರ್ಕುತ್ತಿ ಸಹಿತ ವಿವಿಧೆಡೆ ರಸ್ತೆ ಬದಿ ಹೊಂಡಗಳಿದ್ದು, ಇದು ವಾಹನ ಪ್ರಯಾಣಿಕರಲ್ಲಿ ಆತಂಕ ಮೂಡಿಸುತ್ತಿದೆ. ಸಂಬಂಧಪಟ್ಟ ಗುತ್ತಿಗೆದಾರ ಕೂಡಲೇ ರಸ್ತೆ ಬದಿ ಸಮತಟ್ಟುಗೊಳಿಸಬೇಕು ಅಥವಾ ತಡೆಬೇಲಿ ನಿರ್ಮಿಸಿ …

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ: ಚಟ್ಟಂಚಾಲ್- ಚೆರ್ಕಳ ರಸ್ತೆ 2 ವಾರಕ್ಕೆ ಮುಚ್ಚುಗಡೆ; ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ಚಟ್ಟಂಚಾಲ್- ಚೆರ್ಕಳ ರಸ್ತೆಯನ್ನು ಎರಡು ವಾರಕ್ಕೆ ಮುಚ್ಚುಗಡೆಗೊಳಿಸಲು ನಿರ್ಧರಿಸಲಾಗಿದೆ. ಇದರಂತೆ ನಾಳೆಯಿಂದ ಎರಡು ವಾರಕ್ಕೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಯಂತ್ರಣ ಹೇರಲಾಗುವುದು. ಆದರೆ ರಂಜಾನ್ ಪರಿಗಣಿಸಿ ಎರಡು ದಿನಕ್ಕೆ ನಿರ್ಧಾರವನ್ನು ಮುಂದೂಡಲು ಸಾಧ್ಯತೆ ಇದೆ ಎಂಬ ಸೂಚನೆಯಿದೆ. ಪ್ರಸ್ತುತ ಕೈಗೊಂಡ ತೀರ್ಮಾನ ಪ್ರಕಾರ ಕಣ್ಣೂರು ಭಾಗದಿಂದ ಬರುವ ವಾಹನಗಳು ಚಟ್ಟಂಚಾಲ್ ಮೇಲ್ಸೇತುವೆಗೆ ಪ್ರವೇಶಿಸದೆ ಸರ್ವೀಸ್ ರಸ್ತೆ ಮೂಲಕ ಚಟ್ಟಂಚಾಲ್- ಪರವನಡ್ಕ ರಸ್ತೆಯ ಮೂಲಕ ಸಂಚರಿಸಿ ಕೆಎಸ್‌ಟಿಪಿ ರಸ್ತೆಯಲ್ಲಿ ಕಾಸರಗೋಡಿಗೆ ತೆರಳಬೇಕು. …

ಮುಳ್ಳೇರಿಯ: ಡಾ| ಮನೋಹರ್ ದಂಪತಿಗೆ ಐಡಿಎ ಎಕ್ಸಲೆನ್ಸ್ ಅವಾರ್ಡ್

ಮುಳ್ಳೇರಿಯ: ಮುಳ್ಳೇರಿಯದ ಖ್ಯಾತ ದಂತ ವೈದ್ಯರಾದ ಡಾ|ಮನೋಹರ್ ಮುಳ್ಳಂಕೊಚ್ಚಿ ಮತ್ತು ಡಾ| ಅನುಪಮಾ ಮನೋಹರ್ ದಂಪತಿಗೆ ಭಾರತೀಯ ದಂತ ವೈದ್ಯಕೀಯ ಸಂಘ (ಐಡಿಎ)ದ ಕೇರಳ ರಾಜ್ಯ ಘಟಕ ನೀಡುವ ಪ್ರತಿಷ್ಠಿತ  ಐಡಿಎ ಎಕ್ಸಲೆನ್ಸ್  ಅವಾರ್ಡ್ 2026 ಪ್ರದಾನ ಮಾಡಲಾಯಿತು. ವೈದ್ಯಕೀಯ ರಂಗದಲ್ಲಿ ಈ ದಂಪತಿ ನಡೆಸುತ್ತಿರುವ ಸ್ತುತ್ಯರ್ಹ ಸೇವೆಯನ್ನು ಪರಿಗಣಿಸಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಕಲ್ಲಿಕೋಟೆಯ ಆಸ್ಟಿನ್  ಕೋರ್ಟ್ ಯಾರ್ಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ  ಹಿರಿಯ ಕ್ಯಾನ್ಸರ್ ತಜ್ಞ ಡಾ| ವಿ.ಪಿ. ಗಂಗಾಧರನ್ ಮತ್ತು …

ಬಜಕೂಡ್ಲು: ಕ್ಲಬ್ ಮಹಾಸಭೆ, ಜಾತ್ರೆ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿರ್ಧಾರ

ಪೆರ್ಲ: ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್‌ನ ವಾರ್ಷಿಕ ಮಹಾಸಭೆ ಇತ್ತೀಚೆಗೆ ಜರಗಿತು. ಕ್ಲಬ್ ಅಧ್ಯಕ್ಷ ಚಂದ್ರಶೇಖರ ಅಮ್ಮೆಕ್ಕಳ ಅಧ್ಯಕ್ಷತೆ ವಹಿಸಿದ್ದರು. ಪಂ. ಸದಸ್ಯ ಕೃಷ್ಣಪ್ಪ ಬಜಕೂಡ್ಲು ಮುಖ್ಯ ಅತಿಥಿಯಾಗಿದ್ದರು. ಕ್ಲಬ್‌ನ ಗೌರವಾಧ್ಯಕ್ಷ ಪದ್ಮನಾಭ ಸುವರ್ಣ ಉಪಸ್ಥಿತರಿದ್ದರು.ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಸಂದರ್ಭ ಕ್ಲಬ್‌ನ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಯಿತು.ಈ ಸಂದರ್ಭ 2026-27ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು. ಪದಾದಿsಕಾರಿಗಳಾಗಿ ಪದ್ಮನಾಭ ಸುವರ್ಣ (ಗೌರವಾಧ್ಯಕ್ಷ), ಚಂದ್ರ ಅಮೆಕ್ಕಳ (ಅಧ್ಯಕ್ಷ), ಮಹೇಶ್ …

ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಜಾತ್ರೆ ನಾಳೆಯಿಂದ

ಕಾಸರಗೋಡು: ಕಾಸರಗೋಡು ನಗರದ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನಾಳೆಯಿಂದ 23ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.ನಾಳೆ ಬೆಳಿಗ್ಗೆ 5.30ಕ್ಕೆ ಗಣಪತಿ ಹೋಮ, 9ಕ್ಕೆ ಬಳ್ಳಪದವು ವೀಣಾ ವಾದಿನಿ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ, 10.45ರ ನಂತರದ ಮುಹೂರ್ತದಲ್ಲಿ ಪ್ರಾರ್ಥನೆ, ಧ್ವಜಾರೋಹಣ, ಮಧ್ಯಾಹ್ನ 12.05ರಿಂದ ಮಹಾಪೂಜೆ, ಉತ್ಸವ ಬಲಿ, ಅನ್ನಸಂತರ್ಪಣೆ, ಸಂಜೆ 5ಕ್ಕೆ ಭಜನೆ, 6ಕ್ಕೆ ತಾಯಂಬಕ, 6.30ರಿಂದ ಭರತನಾಟ್ಯ, ರಾತ್ರಿ 8.30ಕ್ಕೆ ಪೂಜೆ, ಉತ್ಸವಬಲಿ …

ಮನೆಯವರು ಉತ್ಸವಕ್ಕೆ ಹೋದ ಸಂದರ್ಭ 25 ಪವನ್ ಚಿನ್ನ ಕಳವು: ಇಬ್ಬರ ಬಂಧನ ; 22 ಪವನ್ ಚಿನ್ನ ಪತ್ತೆ

ಕಾಸರಗೋಡು: ಮನೆಯವರು  ಉತ್ಸವಕ್ಕೆ ಹೋದ ಸಂದರ್ಭದಲ್ಲಿ ೨೫ ಪವನ್ ಚಿನಾಭರಣ ಕಳವುಗೈದ ಕುಖ್ಯಾತ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯಾಟಡ್ಕ, ಚೆರುಂಬಾ ಅಹದ್ ಮಂಜಿಲ್‌ನ ಎ.ಎಚ್. ಹಾಶಿಂ (45), ಕಾಸರಗೋಡು ವಿದ್ಯಾನಗರದ ಮನೋಜ್ (49) ಎಂಬಿವರನ್ನು ಪಟ್ಟಾಂಬಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಶುಕ್ರವಾರ ಶೋರ್ನೂರು ಕುಟ್ಟನಾಡು ತೊಳುಕ್ಕಾಡ್  ಹರಿ ಭವನ್‌ನ ಸುಧೀರ್ ಎಂಬವರ ಮನೆಯಿಂದ ಚಿನ್ನಾಭರಣ ಕಳವು ನಡೆದಿದೆ.  ಸುಧೀರ್ ಹಾಗೂ ಕುಟುಂಬ ಆಮಕ್ಕಾವ್ ಕ್ಷೇತ್ರಕ್ಕೆ ಉತ್ಸವಕ್ಕೆಂದು ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯ …

ವ್ಯಕ್ತಿಪಲ್ಲಟ ನಡೆಸಿ ಪ್ಲಸ್‌ಟು ಪರೀಕ್ಷೆಗೆ ಹಾಜರಾದ ಯುವಕ ಬಂಧನ ; ವಿದ್ಯಾರ್ಥಿ ವಿರುದ್ಧವೂ ಕೇಸು ದಾಖಲು

ಕುಂಬಳೆ: ವ್ಯಕ್ತಿಪಲ್ಲಟ ನಡೆಸಿ ಯುವಕನೋರ್ವ ಪ್ಲಸ್‌ಟು ಪರೀಕ್ಷೆ ಬರೆದಿರುವುದಾಗಿ ದೂರಲಾಗಿದೆ. ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ವಿ.ಎಸ್. ಬಿನು ನೀಡಿದ ದೂರಿನಂತೆ  ಕೇಸು ದಾಖಲಿಸಿ ಕೊಂಡ ಕುಂಬಳೆ ಪೊಲೀಸರು ವ್ಯಕ್ತಿ ಪಲ್ಲಟ ನಡೆಸಿದಾತನನ್ನು ಬಂಧಿಸಿ ದ್ದಾರೆ. ಬಂಬ್ರಾಣ ಅಂಡಿತ್ತಡ್ಕದ ಮುಹಮ್ಮದ್ ಮುಕ್ತಾರ್ (20) ಎಂಬಾತನನ್ನು ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ. ಜೋಸ್, ಎಸ್.ಐ ಅನಂತಕೃಷ್ಣನ್ ಆರ್. ಮೆನೋನ್ ಎಂಬಿವರು ಸೇರಿ ಬಂಧಿಸಿದ್ದಾರೆ.  ಘಟನೆಗೆ ಸಂಬಂಧಿಸಿ ಪ್ಲಸ್‌ಟು  ವಿದ್ಯಾರ್ಥಿ ವಿರುದ್ಧವೂ ಕೇಸು ದಾಖಲಿಸಲಾಗಿದೆ. …

ಕೆಲಸ ಮುಗಿಸಿ ಮನೆಗೆ ನಡೆದು ಹೋಗುತ್ತಿದ್ದ ಯುವತಿ ಕುಸಿದುಬಿದ್ದು ಮೃತ್ಯು

ಕಾಸರಗೋಡು: ಕೆಲಸ ಮುಗಿಸಿ ಮನೆಗೆ ನಡೆದು ಹೋಗುತ್ತಿದ್ದ ಯುವತಿ ಕುಸಿದುಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುಂಬಳೆ ಬಂಬ್ರಾಣ ಕೊಟ್ಯದ ಮನೆ ನಿವಾಸಿಯೂ ಕಾಸರಗೋಡಿ ನಲ್ಲಿ ಲಾಟರಿ ಮಾರಾಟಗಾರನಾದ ಉದಯ ಪೂಜಾರಿಯವರ ಪತ್ನಿ ಆರ್. ವಿಜಯ (47) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಪ್ರಸ್ತುತ ಇವರು ಕಾಸರಗೋಡು ಉಮಾ ನರ್ಸಿಂಗ್ ಹೋಂ ಬಳಿಯ ಬಾಡಿಗೆ ಕ್ವಾರ್ಟರ್ಸ್ ನಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದಾರೆ. ಆರ್. ವಿಜಯ ಕಾಸರಗೋಡು ಕೋ-ಆಪರೇಟಿವ್ ಮಾರ್ಕೆಟಿಂಗ್ ಸೊಸೈಟಿಯ ಅಧೀನದಲ್ಲಿ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಸಮೀಪ ದಲ್ಲಿರುವ …