ಶಬರಿಮಲೆ ಚಿನ್ನ ಕಳವು ಪ್ರಕರಣದ ಕಾವು: ಸ್ಪೀಕರ್ ಪೀಠದ ಮೇಲೇರಲು ಯತ್ನಿಸಿದ ವಿಪಕ್ಷೀಯ ಶಾಸಕರು; ವಿಧಾನಸಭೆಯಲ್ಲಿ ಸಂಘರ್ಷದ ವಾತಾವರಣ ಸೃಷ್ಟಿ
ತಿರುವನಂತಪುರ: ಶಬರಿಮಲೆ ಚಿನ್ನ ಕಳವು ವಿಷಯದಲ್ಲಿ ಆಡಳಿತ ಮತ್ತು ವಿಪಕ್ಷೀಯರ ಮಧ್ಯೆ ತೀವ್ರ ವಾಗ್ವಾದ ಉಂಟಾಗಿ ಅದು ವಿಧಾನಸಭೆಯಲ್ಲಿ ಸಂಘರ್ಷಭರಿತ ವಾತಾವರಣ ಸೃಷ್ಟಿಸಿದ ನಾಟಕೀಯ ಬೆಳವಣಿಗೆ ಇಂದು ಬೆಳಿಗ್ಗೆ ನಡೆಯಿತು. ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್, ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖೆಯನ್ನು ಸರಕಾರ ಬುಡಮೇಲುಗೊಳಿಸಲೆತ್ನಿಸುತ್ತಿದೆಯೆಂದೂ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ಸಹಜವಾದ ರೀತಿಯ ಜಾಮೀನು ಲಭಿಸುವಂತೆ ಮಾಡಲು ಮುಖ್ಯಮಂತ್ರಿಯವರ ಕಚೇರಿಗೆ ಸಹಾಯ ಲಭಿಸುತ್ತಿದೆಯೆಂದು ಆರೋಪಿಸಿದ್ದರು. ಮಾತ್ರವಲ್ಲ …