ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ ಕಳವು: ಆರೋಪಿಗಳ ಪೈಕಿ ಓರ್ವ ಬಂಧನ ; ಇತರ ಮೂವರಿಗಾಗಿ ಶೋಧ, ಬ್ಯಾಟರಿ ಕಾಣೆಯಾದದ್ದು 9 ಲಾರಿಗಳಿಂದ

ಕುಂಬಳೆ: ನಿಲ್ಲಿಸಿದ್ದ ಲಾರಿ ಗಳಿಂದ ಬ್ಯಾಟರಿ ಕಳವು ನಡೆಸಿದ ಪ್ರಕರಣದಲ್ಲಿ ಓರ್ವ ಆರೋಪಿ ಯನ್ನು ಕುಂಬಳೆ ಪೊಲೀಸರು ನಡೆಸಿದ  ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಇತರ ಮೂವರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ಆಲಂಪಾಡಿ ತೈವಳಪ್ಪು ನಿವಾಸಿಯಾದ ಶಮೀರ್ ಯಾನೆ ತೈವಳಪ್ಪು ಶಮೀರ್ (50) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಇತರ ಆರೋಪಿಗಳಾದ ಚೆರ್ಕಳ ಮಜೀದ್, ಪವಾಸ್, ಫಾರೂಕ್ ಎಂಬಿವರಿಗಾಗಿ ಶೋಧ ನಡೆಸುತ್ತಿರುವುದಾಗಿ ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್ ತಿಳಿಸಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಕುಂಬಳೆ ಪೊಲೀಸ್ ಠಾಣೆ …

ಮುಖ್ಯಮಂತ್ರಿ, ಕುಟುಂಬಕ್ಕೆ ಕೊಲೆ ಬೆದರಿಕೆ:  ಓರ್ವ ಸೆರೆ ; ಸಮಗ್ರ ವಿಚಾರಣೆ

ತಿರುವನಂತಪುರ: ಮುಖ್ಯಮಂತ್ರಿ ವಿ.ಡಿ. ಸತೀಶನ್ ಮತ್ತು ಕುಟುಂಬಕ್ಕೆ  ಫೋನ್ ಮೂಲಕ ಕೊಲೆ ಬೆದರಿಕೆಯೊಡ್ಡಲಾಗಿದೆ. ತಿರುವನಂತಪುರ ಸಿಟಿ ಪೊಲೀಸ್ ಕಮಾಂಡಿಂಗ್ ಸೆಂಟರಿನ ಅಧಿಕೃತ  ಫೋನ್ ಸೆಂಟರಿಗೆ ಈ ಬೆದರಿಕೆ ಫೋನ್ ಕರೆ ಮಾಡಲಾಗಿದೆ. ಆ ಫೋನ್ ನಂಬರಿನ ಜಾಡು ಹಿಡಿದು ಪೊಲೀಸರು ತಕ್ಷಣ ನಡೆಸಿದ ಕಾರ್ಯಾಚರಣೆಯಲ್ಲಿ ಫೋನ್ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಿರುವನಂತಪುರದಲ್ಲಿ  ಚಿರಯಿಲ್‌ಕೀಳ್ ನಿವಾಸಿ ಟೋನಿ ಎಂಬಾತ ಬಂಧಿತ ವ್ಯಕ್ತಿ. ಈತ ಸಿಟಿ ಪೊಲೀಸ್ ಕಮಾಂಡಿಂಗ್ ಸೆಂಟರಿಗೆ ನಿನ್ನೆ ಸಂಜೆ ಹಲವು ಬಾರಿ …

ಪೆರ್ಮುದೆಯಲ್ಲಿ ಆಟೋ ರಿಕ್ಷಾ-ಕಾರು ಢಿಕ್ಕಿ: ಆಟೋ ಚಾಲಕ, ಮೂವರು ಪ್ರಯಾಣಿಕರಿಗೆ ಗಾಯ

ಕುಂಬಳೆ:  ಪೆರ್ಮುದೆಯಲ್ಲಿ ನಿನ್ನೆ ಸಂಜೆ ಆಟೋ ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ  ಆಟೋ ಚಾಲಕ ಹಾಗೂ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಆಟೋ ಚಾಲಕ ಕಯ್ಯಾರು ದೊಡ್ಡಮೂಲೆಯ ಉದಯ ಕುಮಾರ್ (45), ಪ್ರಯಾಣಿಕರಾದ ಈಶ್ವರ, ಶೋಭಿಕ, ವಸಂತಿ ಎಂಬಿವರು ಗಾಯಗೊಂಡಿದ್ದಾರೆ. ಈ ಪೈಕಿ ಉದಯ ಕುಮಾರ್‌ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇತರರು ಚಿಕಿತ್ಸೆ ಪಡೆದು ಮುರಳಿದ್ದಾರೆ. ನಿನ್ನೆ ಸಂಜೆ ಕಯ್ಯಾರಿನಿಂದ ಪೆರ್ಮುದೆಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಟೋ ರಿಕ್ಷಾ ಪೆರ್ಮುದೆ ಪೇಟೆಗೆ ತಲುಪುತ್ತಿದ್ದಂತೆ ಕಾರು …

ಅಸಿಸ್ಟೆಂಟ್ ಮೆನೇಜರ್ ಹುದ್ದೆ ಕೊಡಿಸುವುದಾಗಿ ನಂಬಿಸಿ 13 ಲಕ್ಷ ಪಡೆದು ವಂಚನೆ: ಕೇಸು

ಬದಿಯಡ್ಕ: ಕೇರಳ ಪ್ರವಾಸೋದ್ಯಮ ಇಲಾಖೆಯಲ್ಲಿ  ಅಸಿಸ್ಟೆಂಟ್ ಮೆನೇಜರ್ ಹುದ್ದೆ ನೇಮಕಾತಿಗೊಳಿಸುವುದಾಗಿ ನಂಬಿಸಿ 13 ಲಕ್ಷ ರೂ. ಪಡೆದು ನಂತರ ಉದ್ಯೋಗ ಕೊಡಿಸದೆ  ಹಾಗೂ ನೀಡಿದ ಹಣವನ್ನು ಹಿಂತಿರುಗಿಸದ ಬಗ್ಗೆ ನೀಡಲಾದ ದೂರಿನಂತೆ ಬದಿಯಡ್ಕ ಪೊಲೀಸರು ಓರ್ವನ ವಿರುದ್ಧ ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಬೇಳ ಬಿರ್ಮಿನಡ್ಕ ಜಬಾಲ್ ನೂರ್ ಮಂಜಿಲ್‌ನ ಅಲಿ ಬಿ.ಕೆ (25) ಎಂಬವರು ಈ ಬಗ್ಗೆ ದೂರು ನೀಡಿದ್ದು ಅದರಂತೆ ತಿರುವನಂತಪುರ ವಟ್ಟಪ್ಪಾರ ಅಂದಿಯೂರುಕೊನ್ನಂ ಮೋಹನಪುರಂ ನಿವಾಸಿ ಮೊಹಮ್ಮದ್ ಹುಸೈನ್ ಎಂ ಎಂಬಾತನ ವಿರುದ್ಧ ಬದಿಯಡ್ಕ …

ಆಪರೇಶನ್ ತೂಫಾನ್ : 400 ಕಿಲೋ ನಿಷೇಧಿತ ತಂಬಾಕು ಉತ್ಪನ್ನ ವಶ;ಗಾಳಿಮುಖ ನಿವಾಸಿ ಕಸ್ಟಡಿಗೆ

ಕಾಸರಗೋಡು: ಮಾದಕದ್ರವ್ಯದ ವಿರುದ್ಧ ಪೊಲೀಸ್ ಇಲಾಖೆ ಆರಂಭಿ ಸಿರುವ ಆಪರೇಷನ್ ತೂಫಾನ್ ಕಾರ್ಯಾಚರಣೆಯಂತೆ  ಕಲ್ಲಿಕೋಟೆ ಪಂದಿರಾಂಕಾವಿನಲ್ಲಿ  ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಕೇರಳದಲ್ಲಿ ನಿಷೇಧಿಸಲ್ಪಟ್ಟ ೪೦೦ಕಿಲೋ ತಂಬಾಕು ಉತ್ಪನ್ನವನ್ನು   ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ಗಾಳಿಮುಖ ನಿವಾಸಿ ಅಬ್ದುಲ್ ಸಾಕೀರ್ (28) ಎಂಬಾತನನ್ನು ಸೆರೆಹಿಡಿದು ಪ್ರಕರಣ ದಾಖಲಿಸಲಾಗಿದೆ. ವಶಪಡಿಸಲಾದ ತಂಬಾಕು ಉತ್ಪನ್ನಗಳಿಗೆ ಹೆಚ್ಚುಕಡಿಮೆ 10 ಲಕ್ಷ ರೂ. ಮೌಲ್ಯವಿದೆ. 16 ಗೋಣಿ ಚೀಲಗಳಲ್ಲಾಗಿ ಇದನ್ನು ಸ್ವಿಫ್ಟ್ ಕಾರಿನಲ್ಲಿ ಬಚ್ಚಿಡಲಾಗಿತ್ತು. ಇದರಲ್ಲಿ ೫೦೦೦ಕ್ಕಿಂತಲೂ ಹೆಚ್ಚು ತಂಬಾಕು …

ಶಬರಿಮಲೆ ದೇಗುಲದಿಂದ ಚಿನ್ನ ಕಳವು ಪ್ರಕರಣದ ಆರೋಪಿ, ಮಾಜಿ ಆಡಳಿತಾಧಿಕಾರಿ  ಮುರಾರಿಬಾಬು ನಿಧನ

ಕೋಟ್ಟಯಂ: ಇಡೀ ದೇಶದ ಗಮನಸೆಳೆದಿರುವ ಶಬರಿಮಲೆ ದೇಗುಲ ದಲ್ಲಿ ನಡೆದ ಚಿನ್ನ ಕಳವು ಪ್ರಕರಣದ ಆರೋಪಿಗಳಲ್ಲೋರ್ವ ರಾದ ತಿರುವಿ ದಾಂಕೂರು ಮುಜರಾಯಿ ಮಂಡಳಿಯ ಮಾಜಿ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಮುರಾರಿಬಾಬು (54) ನಿನ್ನೆ ರಾತ್ರಿ  12.45ರ ವೇಳೆಗೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು. ಅರ್ಬುದ ರೋಗದಿಂದ ಬಳಲುತ್ತಿದ್ದ ಇವರು ಕಳೆದ ಮೂರು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತದೇಹದ ಅಂತ್ಯಕ್ರಿಯೆ ಇಂದು ಸಂಜೆ ಹುಟ್ಟೂರಾದ ಪೆರುಕುನ್ನಿನಲ್ಲಿರುವ  ಮನೆಹಿತ್ತಿಲಲ್ಲಿ ನಡೆಯಲಿದೆ. ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕಣದಲ್ಲಿ ಆರೋಪಿ ಯಾಗಿರುವ …

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೋಮವಾರದಿಂದ: ಕಾಸರಗೋಡು ಡಿಪ್ಪೋದಲ್ಲಿ 75 ಆರ್ಡಿನರಿ ಬಸ್‌ಗಳು

ಕಾಸರಗೋಡು: ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಆರ್ಡಿನರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ‘ಪ್ರಿಯದರ್ಶಿನಿ’ ಯೋಜನೆ ಜೂನ್ ೧೫ರಂದು ಆರಂಭಗೊಳ್ಳಲಿದೆ. ಅಂದು ಬೆಳಿಗ್ಗೆ 8.30ಕ್ಕೆ ಮುಖ್ಯಮಂತ್ರಿ ವಿ.ಡಿ. ಸತೀಶನ್ ತಿರುವನಂತಪುರ ತಂಬಾನೂರ್ ಬಸ್ ಟರ್ಮಿನಲ್‌ನಲ್ಲಿ ಮೊದಲ ಉಚಿತ ಪ್ರಯಾಣವನ್ನು ಉದ್ಘಾಟಿಸುವರು. ಉದ್ಘಾಟನಾ ಸಂಚಾರ ವೇಳೆ ಬಸ್‌ನಲ್ಲಿ ಚಾಲಕ, ನಿರ್ವಾಹಕ ಹಾಗೂ ಮಹಿಳೆಯರು ಮಾತ್ರವೇ ಇರುವರು.  ಈ ಬಸ್‌ನಲ್ಲಿ ಮುಖ್ಯಮಂತ್ರಿ ಅಲ್ಪ ದೂರ ಪ್ರಯಾಣಿಸಲಿದ್ದಾರೆ. ಅಂದು ಬೆಳಿಗ್ಗೆ 9 ಗಂಟೆಗೆ ರಾಜ್ಯದ ಎಲ್ಲಾ ಡಿಪ್ಪೋಗಳಲ್ಲೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಇದರ ಉದ್ಘಾಟನೆ …

ಗಡಿನಾಡ ವಿದ್ಯಾರ್ಥಿಗಳಿಗೂ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ

ಕಾಸರಗೋಡು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಗಡಿ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಕರ್ನಾಟಕ ಸರಕಾರ ಅವಕಾಶ ನೀಡಿದೆ. ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕದೊಳಗೆ ಉಚಿತ ಪ್ರಯಾಣ ಈ ಮೊದಲು ಘೋಷಿಸಲಾಗಿತ್ತು.ಈ ಹಿನ್ನೆಲೆಯಲ್ಲಿ ಈ ಸೌಲಭ್ಯವನ್ನು ಗಡಿಭಾಗದ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕೆಂದು ವಿವಿಧ ಕನ್ನಡಪರ ಸಂಘ-ಸಂಸ್ಥೆಗಳು ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಈಗ ಕರ್ನಾಟಕದಲ್ಲಿ ವಾಸವಿದ್ದು ಕೇರಳಕ್ಕೆ ಆಗಮಿಸುವ ವಿದ್ಯಾರ್ಥಿ ಗಳಿಗೂ ಕೇರಳದಲ್ಲಿ ವಾಸವಿದ್ದು ಕರ್ನಾಟಕಕ್ಕೆ  ಶಿಕ್ಷಣಕ್ಕಾಗಿ ತೆರಳುವ ವಿದ್ಯಾರ್ಥಿಗ ಳಿಗೂ ಈ ಸೇವೆಯನ್ನು ವಿಸ್ತರಿಸಲಾಗಿದೆ.

ಅಕ್ಕಸಾಲಿಗ ನಿಧನ

ಕಾಸರಗೋಡು: ಅಕ್ಕಸಾಲಿಗರಾಗಿದ್ದ ಮೂಲತಃ ಬೋವಿಕ್ಕಾನ ನಿವಾಸಿ ಚಂದ್ರಶೇಖರ ಆಚಾರ್ಯ (71) ನಿಧನ ಹೊಂದಿದರು. ಇವರು ಈಗ ಹಳೆ ಸೂರ್ಲು ಬಳಿ ವಾಸವಾಗಿದ್ದರು. ಮೃತರು ಪತ್ನಿ ಚಂಚಲಾಕ್ಷಿ, ಮಕ್ಕಳಾದ ಶೀತಲ್ ಕುಮಾರ್, ಮಿಥುಲ್ ಕುಮಾರ್, ಸೊಸೆ ಸರಿತ, ಸಹೋದರರಾದ ವಾಮನ ಆಚಾರ್ಯ ಬೋವಿಕ್ಕಾನ, ಉಮೇಶ್ ಆಚಾರ್ಯ, ಸಹೋದರಿ ಜಲಜಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವೆ ಸಹೋದರಿ ಲಲಿತ ಈ ಹಿಂದೆ ನಿಧನ ಹೊಂದಿದ್ದಾರೆ. ನಿಧನಕ್ಕೆ ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾಸಂಘ, ಶ್ರೀ ವಿಶ್ವಕರ್ಮ ಯುವಕ ಸಂಘ, ಶ್ರೀ …

ಅನಿಲ್ ಕುಮಾರ್ ಗೋಸಾಡರಿಗೆ ವಿಶಿಷ್ಟ ರೈಲು ಸೇವಾ ಪುರಸ್ಕಾರ ಪ್ರದಾನ

ಕಾಸರಗೋಡು: ಸುಮಾರು ೧೫ ವರ್ಷಗಳಿಂದ ದಕ್ಷಿಣ ರೈಲ್ವೇಯಲ್ಲಿ ಸೇವೆಗೈಯುತ್ತಿರುವ ಕುಂಬ್ಡಾಜೆ ಗೋಸಾಡ ನಿವಾಸಿ ಅನಿಲ್ ಕುಮಾರ್ ರಿಗೆ ದಕ್ಷಿಣ ರೈಲ್ವೇಯ ಪ್ರತಿಷ್ಠಿತ ಪ್ರಶಸ್ತಿ ವಿಶಿಷ್ಟ ರೈಲು ಸೇವಾ ಪುರಸ್ಕಾರ ಲಭಿಸಿದೆ. ದಕ್ಷಿಣ ರೈಲ್ವೇಯ ಸೀನಿ ಯರ್ ಸೆಕ್ಷನ್ ಇಂಜಿನಿಯರ್ ಆಗಿ ಇವರು ಪ್ರಸ್ತುತ ಕಾರ್ಯ ನಿರ್ವಹಿಸು ತ್ತಿದ್ದು, ಸುರತ್ಕಲ್‌ನಿಂದ ಕುಂಬಳೆ ವರೆಗಿನ ರೈಲ್ವೇ ಹೊಣೆಯನ್ನು ಇವರಿಗೆ ವಹಿಸಲಾಗಿದೆ. ಇತ್ತೀಚೆಗೆ ಪಾಲಕ್ಕಾಡ್ ಡಿವಿಷನ್ ಕಚೇರಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ದಕ್ಷಿಣ ರೈಲ್ವೇಯ ಜನರಲ್ ಮೆನೇಜರ್ ಈ ಪ್ರಶಸ್ತಿಯನ್ನು ಇವರಿಗೆ ಪ್ರದಾನ …