ಕುಂಞಂಬು ನಾಯರ್  ನಿಧನ

ಮುಳ್ಳೇರಿಯ: ನಾರಂತಟ್ಟ ಕುಂಞಂಬು ನಾಯರ್ (94) ನಿಧನ ಹೊಂದಿದರು. ಕಾಸರಗೋಡು ಟ್ಯುಟೋ ರಿಯಲ್ ಕಾಲೇಜಿನಲ್ಲಿ ಸುಮಾರು ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ಕೋಡೋತ್ ಮೀನಾಕ್ಷಿ ಅಮ್ಮ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಭಾಗ್ಯಲತ ಉದುಮ, ಚಿತ್ರಲೇಖ ಕಾಸರಗೋಡು, ಜ್ಯೋತಿ ಕರಿಪ್ಪೊಡಿ, ಶ್ರೀಕುಮಾರ್ ಕರಿಪ್ಪೊಡಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಲೀಲಾ ಶೆಟ್ಟಿ ನಿಧನ

ಮಧೂರು: ಬೈನಡ್ಕ ನಿವಾಸಿ ಲೀಲಾ ಶೆಟ್ಟಿ (68) ನಿಧನ ಹೊಂದಿದರು. ಮೃತರು ಮಕ್ಕಳಾದ ಪ್ರವೀಣ್ ಕುಮಾರ್ ಶೆಟ್ಟಿ (ಆಟೋ ಚಾಲಕ), ದಿವ್ಯ ಶೆಟ್ಟಿ, ಪುಷ್ಪಲತ, ಅಳಿಯ ಕಿರಣ್, ಸಹೋದರ ಬಾಲಕೃಷ್ಣ ಶೆಟ್ಟಿ, ಸಹೋದರಿ ಕುಮಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮಾನ್ಯ ವಿಷ್ಣುಮೂರ್ತಿ ನಗರದಲ್ಲಿ  ಪ್ರಾಚೀನ ದೇವಾಲಯ ಕುರುಹು ಪತ್ತೆ

ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ವಿಷ್ಣುಮೂರ್ತಿ ನಗರದಲ್ಲಿ ನೂರಾರು ವರ್ಷಗಳಷ್ಟು ಪ್ರಾಚೀನವೆನ್ನಲಾದ ದೇವಾಲಯದ ಕುರುಹು ಪತ್ತೆಯಾಗಿದೆ. ವಿಷ್ಣುಮೂರ್ತಿ ನಗರದ ವಿಶಾಲ ಬಯಲಲ್ಲಿ ಎರಡು ಮರಗಳ ಎಡೆಯಲ್ಲಿ ದೇವಾಲಯ ದ್ದೆನ್ನಲಾದ ಪಾಣಿಪೀಠದ ಭಾಗಗಳು ಮತ್ತು ಬಾವಿಯ ಕುರುಹುಗಳು ಕಂಡುಬAದಿದೆ. ಈ ಪರಿಸರದಲ್ಲಿ ವಿಷ್ಣುಮೂರ್ತಿ ದೈವದ ಆರಾಧನೆ ನಡೆದುಬರುತ್ತಿದ್ದು, ಅದೇ ಪರಿಸರದಲ್ಲಿ ದೇವಾಲಯದ ಕುರುಹುಗಳು ಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.ಈಗ ದೇವಾಲಯದ ಪುನರುತ್ಥಾನಕ್ಕೆ ಸಂಬAಧಿಸಿ ದೈವಜ್ಞರ ಮೂಲಕ ಪ್ರಶ್ನಾಚಿಂತನೆ ಕೈಗೆತ್ತಿಕೊಳ್ಳಲಾಗಿದೆ. ದೈವಜ್ಞರಾದ ಮಹಾಲಿಂಗೇಶ್ವರ ಶರ್ಮ ಕೊಳಚ್ಚಪ್ಪೆ, ಉಣ್ಣಿಕೃಷ್ಣನ್ ನಂಬೀಶ ಸಹಕಾರದಲ್ಲಿ ಚಿಂತನೆ …

ಕಾರಿನಲ್ಲಿ ಸಾಗಿಸುತ್ತಿದ್ದ 31ಕಿಲೋ ಗಾಂಜಾ ವಶ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

ಕಾಸರಗೋಡು: ಹೋಂಡಾ ಸಿಟಿ ಕಾರಿನಲ್ಲಿ ಸಾಗಿಸುತ್ತಿದ್ದ 31 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರ ಣದಲ್ಲಿ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಾಞಂಗಾಡ್ ಅಧಿಂಞ್ಞಾಲ್ ತೆಕ್ಕೇಪುರದ ಟಿ.ಎಂ. ಶಮೀರ್ (40), ನೀಲೇಶ್ವರ ಬಂಗಳಂ ಸೆಂಚುರಿ ಹೌಸ್‌ನ ಟಿ. ಶಂಸೀರ್ (32) ಎಂಬಿವರನ್ನು ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ ಜೋಸ್ ನೇತೃತ್ವದಲ್ಲಿ  ಬಂಧಿಸಲಾಗಿದೆ. ಗಾಂಜಾ ಸಾಗಾಟ ಪ್ರಕರಣದಲ್ಲಿ ಮುಖ್ಯ ಆರೋಪಿಗಳಾದ ಬೇಕಲ ಪಳ್ಳಿಕ್ಕೆರೆ ಬಿಲಾಲ್‌ನಗರ ಸಮೀರ ಮಂಜಿಲ್‌ನ ಕಬೀರ್ ಯಾನೆ ಲಾಲಾ ಕಬೀರ್ (40), ಕಾಞಂಗಾಡ್ ಕೊವ್ವಲ್  ಆವಿಕ್ಕರದ ಸಜಿನಾ …

ಬಿಜೆಪಿ ಕಾರ್ಯಕರ್ತ, ರೇಶನ್ ಅಂಗಡಿ ಮಾಲಕ ನಿಧನ

ಕುಂಬ್ಡಾಜೆ:  ಬಿಜೆಪಿಯ ಸಕ್ರಿಯ ಕಾರ್ಯಕರ್ತ, ಮಾರ್ಪನಡ್ಕ  ಜಯನಗರದಲ್ಲಿರುವ ರೇಶನ್ ಅಂಗಡಿ ಮಾಲಕನೂ ಆದ  ಗುಲುಗುಂಜಿ ನಿವಾಸಿ   ಅಶೋಕ್ ಭಟ್  (52) ನಿಧನ ಹೊಂ ದಿದರು. ಅಸೌಖ್ಯ ನಿಮಿತ್ತ ಇವರನ್ನು ಚೆಂಗಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ನಿನ್ನೆ ನಿಧನ ಸಂಭವಿಸಿದೆ. ಕುಂಬ್ಡಾಜೆ ಪಂಚಾಯತ್‌ನಲ್ಲಿ ಬಿಜೆಪಿಯ ಸಕ್ರಿಯ ಕಾರ್ಯಕರ್ತ ನಾಗಿದ್ದ ಇವರು ಸಮಾಜಸೇವಕನೂ ಆಗಿದ್ದರು. 1992 ರಲ್ಲಿ ನಡೆದ ಅಯೋಧ್ಯೆ ಕರಸೇವೆಯಲ್ಲಿ ಇವರು ಪಾಲ್ಗೊಂಡಿದ್ದರು. ಮೃತದೇಹವನ್ನು ನಿನ್ನೆ ಸಂಜೆ ಮಾರ್ಪನಡ್ಕದಲ್ಲಿರುವ  ಕುಂಬ್ಡಾಜೆ ಪಂಚಾಯತ್ ಕಚೇರಿ ಮುಂದೆ …

ಹಿರಿಯ ಬಸ್ ಮಾಲಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾಸರಗೋ ಡಿನ ಹಿರಿಯ ಬಸ್ ಮಾಲಕರ ಪೈಕಿ ಒಬ್ಬರಾದ ಗೋಡ್‌ಫ್ರೇ ಡಿ’ಸೋಜಾ (78) ವಾಸಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಚೆಂಗಳ ಸಂತೋಷ್‌ನಗರದ ಖಾದರ್ ಹಾಜಿ ಕ್ವಾರ್ಟರ್ಸ್‌ನಲ್ಲಿ ಇವರು ವಾಸಿಸುತ್ತಿದ್ದರು. ನಿನ್ನೆ ಸಂಜೆ ೬ ಗಂಟೆ ವೇಳೆ ಕ್ವಾರ್ಟರ್ಸ್‌ನ ಬೆಡ್‌ರೂಂನ  ಮಂಚದಲ್ಲಿ ಇವರು ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂ ದಿದ್ದರು. ಕೂಡಲೇ ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಹಲವು ವರ್ಷ ಗಳಿಂದ ಇವರು ಏಕಾಂಗಿಯಾಗಿ ವಾಸಿಸುತ್ತಿದ್ದರು. ಇವರ ಪತ್ನಿ ಪೌಲಿನ್ ಈ ಹಿಂದೆ ನಿಧನರಾಗಿ ದ್ದಾರೆ. ಪುತ್ರ …

ಮನೆಯಿಂದ ಕಾಣೆಯಾದ ಐದು ಪವನ್ ಚಿನ್ನಾಭರಣ: ಪೊಲೀಸರ ತಪಾಸಣೆ ವೇಳೆ ಮನೆ ಪರಿಸರದಲ್ಲೇ ಪತ್ತೆ

ಕುಂಬಳೆ:  ಕಯ್ಯಾರಿನ ಮನೆಯಿಂದ ಕಾಣೆಯಾದ ಚಿನ್ನಾಭರಣ ಮನೆ ಸಮೀಪವೇ ಪತ್ತೆಯಾಗಿದೆ.  ಪಾಲಕ್ಕಾಡ್‌ನಲ್ಲಿ ಹೋಟೆಲ್ ವ್ಯಾಪಾರಿಯಾಗಿರುವ ಕಯ್ಯಾರಿನ ಯೂಸಫ್ ಎಂಬವರ ಮನೆಯಿಂದ ಆದಿತ್ಯವಾರ ರಾತ್ರಿ 5 ಪವನ್ ಚಿನ್ನಾಭರಣ ಕಳವಿಗೀಡಾಗಿ ರುವುದಾಗಿ ದೂರಲಾಗಿತ್ತು. ಯೂಸಫ್‌ರ ಪತ್ನಿ ಹಾಗೂ ಮೂವರು ಮಕ್ಕಳು ಮಾತ್ರವೇ ಮನೆಯಲ್ಲಿ ವಾಸಿಸುತ್ತಿ ದ್ದಾರೆ. ಇವರು  ಆದಿತ್ಯವಾರ ರಾತ್ರಿ ಕಯ್ಯಾರು ಮಸೀದಿಗೆ ಸ್ವಲಾತ್‌ಗಾಗಿ ತೆರಳಿದ್ದರು. ರಾತ್ರಿ 8.30ರ ವೇಳೆ ಮರಳಿ ಬಂದಾಗ  ಮನೆಗೆ ಕಳ್ಳರು ನುಗ್ಗಿರುವುದು ಅರಿವಿಗೆ ಬಂದಿತ್ತು. ಬೆಡ್‌ರೂಂನ ಕಪಾಟು ತೆರೆದಿಟ್ಟ ಸ್ಥಿತಿಯಲ್ಲಿದ್ದು, ಅದನ್ನು ಪರಿಶೀಲಿಸಿ …

ಯುವತಿಯ ಮೃತದೇಹ ಮನೆಯಲ್ಲಿ ಪತ್ತೆ:  ಗೆಳೆಯ ಕಸ್ಟಡಿಯಲ್ಲಿ

ಪತ್ತನಂತಿಟ್ಟ: ಯುವತಿ ಮನೆಯೊ ಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿ ಯಲ್ಲಿ ಪತ್ತೆಯಾಗಿದ್ದಾಳೆ. ಅಡೂರು ಕೋಟಮುಗಲ್ ನಿವಾಸಿ ಶೆಹನ (31) ಮೃತಪಟ್ಟ ಯುವತಿ. ಈಕೆ ಆತ್ಮಹತ್ಯೆ ನಡೆಸುವ ವೇಳೆ ಮನೆಯಲ್ಲಿ ಈಕೆಯ ಗೆಳೆಯ ಏಳಾಂಕುಳಂ ನಿವಾಸಿಯೋರ್ವ ನಿದ್ದು, ಈತನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಪತಿಯೊಂದಿಗೆ ವಿರಸಗೊಂಡು ಏಕಾಂಗಿಯಾಗಿ ಯುವತಿ ವಾಸವಾಗಿದ್ದಳು. ನಿನ್ನೆ ರಾತ್ರಿ 7 ಗಂಟೆಗೆ ಘಟನೆ ನಡೆದಿದೆ. ಶೆಹನಳ ಮನೆಯಿಂದ ಬೊಬ್ಬೆ ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಕೌನ್ಸಿಲರ್‌ಗೆ ಮಾಹಿತಿ ತಿಳಿಸಿದ್ದು, ಅವರು ಮನೆಗೆ ಬಂದು ನೋಡಿದಾಗ …

ಸಮಾಜದ್ರೋಹಿಗಳ ಅಟ್ಟಹಾಸ: ಕೊಡ್ಯಮ್ಮೆ ಶಾಲೆಯ ಕಿಟಿಕಿ ಗಾಜುಗಳು ನಾಶ

ಕುಂಬಳೆ: ಕೊಡ್ಯಮ್ಮೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಭಾಗವಾಗಿರುವ ಯುಪಿ ಶಾಲೆಯಲ್ಲಿ ಸಮಾಜದ್ರೋಹಿಗಳು ಅಟ್ಟಹಾಸ ಮೆರೆದಿದ್ದಾರೆ.  ಶಾಲೆಯ ಕಿಟಿಕಿ ಗಾಜು ಗಳನ್ನು ಕಲ್ಲೆಸೆದು ಪುಡಿಗೈಯ್ಯಲಾಗಿದೆ. ಯು.ಪಿ ವಿಭಾಗ  ತರಗತಿ ಕೊಠಡಿಗಳ ಕಿಟಿಕಿ ಗಾಜುಗಳನ್ನು ಸಮಾಜದ್ರೋ ಹಿಗಳು ಹಾನಿಗೊಳಿಸಿದ್ದು ಅಲ್ಲದೆ ಕೊಠಡಿಯಲ್ಲಿ   ಸಂಗ್ರಹಿಸಿಟ್ಟಿದ್ದ ಹಳೆಯ ವಸ್ತುಗಳನ್ನು ನಾಶಗೊಳಿಸಿದ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿದೆ. ಮೊನ್ನೆ ರಾತ್ರಿ ಸಮಾಜದ್ರೋಹಿಗಳು ಈ ಕೃತ್ಯವೆಸಗಿದ್ದಾರೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಮುಖ್ಯೋಪಾಧ್ಯಾಯ ಪ್ರದೀಪ್, ಪಿಟಿಎ ಅಧ್ಯಕ್ಷ ಅಬ್ಬಾಸ್ ಅಲಿ ಕೊಡ್ಯಮ್ಮೆ ನೀಡಿದ ದೂರಿನಂತೆ  ಕುಂಬಳೆ ಪೊಲೀಸರು …

ಉಚಿತ ಪ್ರಯಾಣ: ಖಾಸಗಿ ಬಸ್‌ಗಳ ಸಂಕಷ್ಟ ಬಗ್ಗೆ  ಅಧ್ಯಯನ ನಡೆಸಲು ಸಮಿತಿ ರಚನೆ

ತಿರುವನಂತಪುರ: ಕೆಎಸ್‌ಆರ್‌ಟಿಸಿ  ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿರುವು ದರಿಂದ ಖಾಸಗಿ ಬಸ್‌ಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಅಧ್ಯಯನ ನಡೆಸಲು ರಾಜ್ಯ ಸರಕಾರ ತಜ್ಞರ ಸಮಿತಿಗೆ ರೂಪು ನೀಡಿದೆ. ಮಾಜಿ ಸಾರಿಗೆ ಆಯುಕ್ತ ಕೆ. ಪದ್ಮಕುಮಾರ್‌ರನ್ನು  ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಗಿದೆ. ನಾಟ್‌ಪಾಕ್‌ನ ಮಾಜಿ ನಿರ್ದೇಶಕಿ ಬಿ.ಜಿ. ಶ್ರೀದೇವಿ, ಸಾರಿಗೆ ಇಲಾಖೆ ಯ ಹೆಚ್ಚುವರಿ ಕಾರ್ಯದರ್ಶಿ ಕೆ.ಎಸ್. ವಿಜಯಶ್ರೀ, ಜಂಟಿ ಸಾರಿಗೆ ಆಯುಕ್ತ ಕೆ. ಮನೋಜ್ ಕುಮಾರ್ ಮತ್ತು ನಾಟ್‌ಪಾಕ್ ವಿಜ್ಞಾನಿ ಡಾ. ಸಂಜಯ್ ಎಂಬಿವರನ್ನು ಸಮಿತಿಯ …