ಏಷ್ಯನ್ ಫೆಸಿಫಿಕ್ ರ‍್ಯಾಲಿ ಚಾಂಪಿಯನ್‌ಶಿಪ್ ದ್ವಿತೀಯ ರೌಂಡ್ ಮೂಸಾ ಶರೀಫ್ ತಂಡಕ್ಕೆ ದ್ವಿತೀಯ ಸ್ಥಾನ

ಕಾಸರಗೋಡು: ಚೆನ್ನೈಯಲ್ಲಿ ನಡೆದ 49ನೇ ದಕ್ಷಿಣ ಭಾರತ ರ‍್ಯಾಲಿಯಲ್ಲಿ ಸ್ಪರ್ಧೆಗಿಳಿದಿರುವುದರೊಂದಿಗೆ 350ನೇ ರ‍್ಯಾಲಿ ಎಂಬ ಇತಿಹಾಸ ಸಾಧನೆಗೆ ಮೂಸಾ ಶರೀಫ್ ಕಾಲಿರಿಸಿದ್ದಾರೆ. ನಿನ್ನೆ ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್ ನಲ್ಲಿ ಆಯೋಜಿಸಿದ ಏಷ್ಯನ್ ಫೆಸಿಫಿಕ್ ರ‍್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ 2ನೇ ರೌಂಡ್ ಆಗಿರುವ ರ‍್ಯಾಲಿಯಲ್ಲಿ ಮೂಸಾ ಶರೀಫ್ ಹೈದರಾಬಾದ್‌ನ ಜೀತ್ ಜಬಕ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಏಷ್ಯನ್ ಫೆಸಿಫಿಕ್ ರ‍್ಯಾಲಿ ಚಾಂಪಿಯನ್‌ಶಿಪ್‌ನ ೩ನೇ ಹಂತದ ಸ್ಪರ್ಧೆ ಆಗಸ್ಟ್ 7ರಿಂದ 9ರವರೆಗೆ ಇಂಡೋನೇಷ್ಯಾದಲ್ಲೂ, ಕೊನೆಯ …

ಅಂತಾರಾಷ್ಟ್ರ ಕರಾಟೆ ಸ್ಪರ್ಧೆ: ಕುಂಬಳೆ ಜೆಎಸ್‌ಕೆಎ ಉನ್ನತ ಸಾಧನೆ

ಕಾಸರಗೋಡು: ತೃಶೂರು ಟೆನ್ನಿಸ್ ಕ್ಲಬ್‌ನಲ್ಲಿ ನಡೆದ ೪೮ನೇ ಅಂತಾರಾಷ್ಟ್ರೀಯ ಶೋಟೊ ಕಾನ್ ಕರಾಟೆ ಸ್ಪರ್ಧೆಯಲ್ಲಿ ಕುಂಬಳೆ ಜೆಎಸ್‌ಕೆಎಯ ವಿದ್ಯಾರ್ಥಿಗಳು ೭ ಚಿನ್ನ ಸಹಿತ ೧೭ ಪದಕಗಳ ಸಾಧನೆ ಮಾಡಿದ್ದಾರೆ. ಕಾತ, ಕುಮಿತೆ ವಿಭಾಗಗಳಲ್ಲಿ  9 ಸ್ಪರ್ಧಾಳುಗಳನ್ನು ಸ್ಪರ್ಧೆಗಿಳಿಸಿ ಜೆಎಸ್‌ಕೆಎ ಈ ಸಾಧನೆ ಮಾಡಿದೆ. ಗ್ರೀನ್, ಬ್ರೌನ್ ಬೆಲ್ಟ್ ಮಕ್ಕಳ ಸ್ಪರ್ಧೆಯಲ್ಲಿ ಚರಿತ್ (6), ಮುಹಮ್ಮದ್ ಸಯಾನ್ ಇಸ್ಮಾಯಿಲ್ (12) ಎಂಬಿವರು ಎರಡು ವಿಭಾಗಳಲ್ಲಿ ಚಿನ್ನ ಗಳಿಸಿದ್ದಾರೆ. ಬ್ರೌನ್ ಬೆಲ್ಟ್ ಅಕುಲ್‌ರಾಜ್ (11)ಗೆ ಒಂದು ಚಿನ್ನ, ಒಂದು ಬೆಳ್ಳಿ …

ಅಂತಃಕರಣ ಶುದ್ಧವಾಗಿದ್ದರೆ ನೋಡುವ ದೃಷ್ಟಿ ಬದಲಾಗುತ್ತದೆ- ಕೊಂಡೆವೂರು ಶ್ರೀ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ೩ನೇ ದಿನ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಯೋಗಾ ನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು ಇವರು ಆಶೀರ್ವಚನ ನೀಡಿ, ಸನಾತನ ಸಂಸ್ಕೃತಿಯ ಕೇಂದ್ರ ಬಿಂದು ಧಾರ್ಮಿಕ ಕೇಂದ್ರಗಳು. ಒಂದು ದೇವಸ್ಥಾನವು ಆ ಗ್ರಾಮದ ಅಳತೆಗೋಲು ಎಂದರೆ ತಪ್ಪಾಗಲಾ ರದು. ಅಂತಃಕರಣ ಶುದ್ಧವಾಗಿದ್ದರೆ ಲೋಕವನ್ನು ನೋಡುವ ದೃಷ್ಟಿ ಬದಲಾಗುತ್ತದೆ. ಪ್ರಾಚೀನ ಗ್ರಂಥಗಳು ನಮ್ಮ ಜೀವನಕ್ಕೆ ಅದೆಷ್ಟೋ ಒಳ್ಳೆಯ ಸಂದೇಶಗಳನ್ನು ನೀಡಿದೆ. ನಮ್ಮಲ್ಲಿರುವ ಒಳ್ಳೆಯತನ, ಉತ್ತಮ ಭಾವವನ್ನು ಜಾಗೃತಗೊಳಿಸಬೇಕು. ದೇವರು ಬಿಂಬವಾದರೆ …

ಬದುಕಿನ ಸಮಸ್ಯೆಗಳಿಗೆ ಆತ್ಮಾವಲೋಕನವೊಂದೇ ಪರಿಹಾರ- ಒಡಿಯೂರು ಶ್ರೀ

ಕಾಸರಗೋಡು: ಬೆಳಕು ಹುಡುಕುವ ಕೆಲಸ ಅಂತರAಗದಲ್ಲಿ ಆಗಬೇಕು. ಭಾರತದ ಅಂತಃಸ್ಸತ್ವ ಆಧ್ಯಾತ್ಮಿಕ ಅಂತರAಗದಲ್ಲಿದೆ. ಅದು ಎಲ್ಲರನ್ನೂ ಬೆಳಗಿಸುವ ಬೆಳಕಾಗಿದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು. ಯೋಗ ಭಂಗಿಯಲ್ಲಿರುವ ಶ್ರೀಅಯ್ಯಪ್ಪ ಸ್ವಾಮಿ ಬದುಕಿನ ಮೌಲ್ಯಗಳ ಪ್ರತೀಕ. ರಾಜನಾದವನು ಯೋಗಿಯಂತೆ ಬದುಕಬೇಕೆಂಬುದನ್ನು ಶ್ರೀಸ್ವಾಮಿ ಸೂಚ್ಯವಾಗಿ ತಿಳಿಸಿದ್ದಾನೆ. ಕಠಿಣ ವ್ರತಧಾರಿಗಳಾಗಿ ಅನುಷ್ಠಾನಗಳಿಂದ ಅಯ್ಯಪ್ಪ ಸ್ವಾಮಿಯ ಭಕ್ತಿ ಬದುಕನ್ನು ಪರಿಪಕ್ವಗೊಳಿಸುತ್ತದೆ ಎಂದವರು …

ಖ್ಯಾತ ವೈದ್ಯ ಶಂಕರ್‌ರಾಜ್ ಆಲಂಪಾಡಿ ನಿಧನ

ಕಾಸರಗೋಡು:  ಕಾಸರಗೋಡು ನಗರದ ಎಸ್‌ವಿಟಿ ರಸ್ತೆ ಬಳಿಯ ವೆಂಕಟೇಶ ಮನೆಯ ಖ್ಯಾತ ಆಯುರ್ವೇದ ವೈದ್ಯರಾಗಿರುವ  ಶಂಕರ್‌ರಾಜ್  ಆಲಂಪಾಡಿ (66) ನಿಧನಹೊಂದಿದರು. ಖ್ಯಾತ ಆಲಂಪಾಡಿ ಮನೆತನಕ್ಕೆ ಸೇರಿದ ದಿ| ವೆಂಕಟೇಶ್ ಶ್ಯಾನುಭೋಗ್-ಜಲಜಮ್ಮ ದಂಪತಿ ಪುತ್ರನಾಗಿರುವ ಡಾ| ಶಂಕರ್‌ರಾಜ್ ಆಲಂಪಾಡಿಯವರು ಖ್ಯಾತ ಮೃದಂಗ ವಿದ್ವಾನ್ ಕೂಡಾ ಅಗಿದ್ದರು. ಹಲವು ಸಂಗೀತ ಕಛೇರಿಗಳಲ್ಲೂ  ಅವರು ಮೃದಂಗ ವಾದಕರಾಗಿ ಸಹಕರಿಸಿದ್ದಾರೆ. ಇವರು ಅನೇಕ ಮೃದಂಗ ಶಿಷ್ಯವೃಂದದ ವರನ್ನು ಹೊಂದಿದ್ದು ಓರ್ವ ಅಪ್ರತಿಮ ಕಲಾಸಕ್ತರೂ ಆಗಿದ್ದರು. 1983ರಿಂದ ನಾಯಮ್ಮಾರ ಮೂಲೆಯಲ್ಲಿ ಸುಪ್ರಭಾತ ಕ್ಲಿನಿಕ್ ಆರಂಭಿಸಿ …

ಮಾರಾಟಕ್ಕಾಗಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 19.340 ಗ್ರಾಂ ಎಂಡಿಎಂಎ ಪತ್ತೆ: ಓರ್ವ ಸೆರೆ

ಕುಂಬಳೆ: ಮಾರಾಟಕ್ಕಾಗಿ ಸ್ಕೂಟಿಯಲ್ಲಿ ಸಾಗಿಸುತ್ತಿದ್ದ ಮಾರಕ ಮಾದಕ ದ್ರವ್ಯವಾದ 19.340 ಗ್ರಾಂ ಎಂಡಿಎಂಎಯನ್ನು ಕುಂಬಳೆ ಪೊಲೀಸರು ಪತ್ತೆಹಚ್ಚಿ ವಶಪಡಿಸಿ ಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪೆರುಮಣ್ಣೂರು ಪಳ್ಳಕಳ್ಳಾಪ್ ಎಸ್.ಎಂ. ಮಂಜಿಲ್‌ನ  ಸೈಯ್ಯದ್ ಅಫ್ರೀದಿ (28) ಎಂಬಾತ ನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾದಕದ್ರವ್ಯ ಸಾಗಿಸುತ್ತಿದ್ದ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್‌ರಿಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ಎಸ್‌ಐ ಸನಿತ್ ಸಿ, ಎಎಸ್‌ಐ ಗಳಾದ ಸುಧೀಶ್, ಅತುಲ್ ರಾಮ್, …

ಇಡೀ ನಾಡನ್ನು ಶೋಕಸಾಗರದಲ್ಲಿ ಮುಳುಗಿಸಿದ ವಾಹನ ಅಪಘಾತ: ಅಧ್ಯಾಪಿಕೆಯರ ಸಹಿತ 9 ಮಂದಿ ದಾರುಣ ಮೃತ್ಯು

ಮಲಪ್ಪುರಂ: ತಮಿಳುನಾಡಿನ ಪೊಳ್ಳಾಚಿ ರಸ್ತೆಯಲ್ಲಿ ನಿನ್ನೆ ಸಂಜೆ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ  ಮಲಪ್ಪುರಂ ಪಾಂಙ್‌ಪಳ್ಳಿಪರಂಬ್  ಸರಕಾರಿ ಎಲ್‌ಪಿ ಶಾಲೆಯ ಅಧ್ಯಾಪಿಕೆಂiiರ ಸಹಿತ ೯ ಮಂದಿ ಮೃತಪಟ್ಟ ದಾರುಣ ಘಟನೆ ಇಡೀ ನಾಡನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಅಪಘಾತದಲ್ಲಿ ೪ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವೆಂದು ಹೇಳಲಾಗುತ್ತಿದೆ. ಮಲಪ್ಪುರಂ ಪಾಂಙ್ ಪಳ್ಳಿಪರಂಬ್ ಸರಕಾರಿ ಎಲ್‌ಪಿ ಶಾಲೆಯ ಮುಖ್ಯೋಪಾಧ್ಯಾ ಯಿನಿ ಅಜಿತ (54), ಅಧ್ಯಾಪಕ, ಅಧ್ಯಾಪಿ ಕೆಯರಾದ ರಮ್ಲ (52), ಸುಹರಾ (43), ಆಶಾ (41), …

ಸಮಸ್ತ ಕಾರ್ಯಕರ್ತ ಹೃದಯಾಘಾತದಿಂದ  ನಿಧನ

ನೀರ್ಚಾಲು: ಮುಂಡ್ಯತ್ತಡ್ಕ ಬಳಿಯ ಬಾಪಲಿಪೊನ ತೊಟ್ಟಿ ನಿವಾಸಿ ಟಿ.ಎಂ. ಅಬ್ದುಲ್ ಅಸೀಸ್ (59) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ಸಂಜೆ ಮನೆಯಲ್ಲಿ ಹೃದಯಾಘಾತವುಂಟಾದ ಇವರನ್ನು ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿದರೂ ಜೀವ ರಕ್ಷಿಸಲಾಗಲಿಲ್ಲ. ಇವರು ಸಮಸ್ತ ಹಾಗೂ ಪೋಷಕ ಸಂಘಟನೆಗಳ ಸಕ್ರಿಯ ಕಾರ್ಯಕರ್ತನಾಗಿದ್ದರು. ಮೃತರು ಪತ್ನಿ ಮೈಮೂನ, ಮಕ್ಕಳಾದ ನಸ್ರೀನ, ನೌಫಲ್, ನೌರಿನ, ನಿಹಾಲ್, ನುಹ್‌ಮಾನ್, ಅಳಿಯಂದಿ ರಾದ ಅಯ್ಯೂಬ್ ಉರ್ಮಿ, ನೌಫಲ್ ಚಳ್ಳಂಗಯ, ಸೊಸೆ ನಾಫಿಯ, ಸಹೋದರರಾದ ಟಿ.ಎಂ. ಸತ್ತಾರ್, ಟಿ.ಎಂ. ಹನೀಫ್ ಹಾಗೂ …

ತ್ಯಾಜ್ಯ ತುಂಬಿ ತುಳುಕುತ್ತಿರುವ ಮಂಜೇಶ್ವರ ಸಮುದ್ರ ತೀರ: ತೆರವಿಗೆ ಕ್ರಮವಿಲ್ಲ

ಮಂಜೇಶ್ವರ: ಮಂಜೇಶ್ವರ ಸಮುದ್ರ ತೀರದಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದ್ದರೂ ತೆರವುಗೊಳಿಸಲು ಅಧಿಕಾರಿಗಳು ಕ್ರಮಕೈಗೊಳ್ಳದಿರುವುದು ಸಾರ್ವಜನಿ ಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲಿ ತಂಪು ಪಾನೀಯ ಸಹಿತ ವಿವಿಧ ಬಾಟಲಿಗಳನ್ನು ಹಾಕಲು ಪೆಟ್ಟಿಗೆಯನ್ನು ಇರಿಸಲಾಗಿದ್ದು, ಆದರೆ ಅದರಲ್ಲಿ ಇತರ ತ್ಯಾಜ್ಯಗಳನ್ನು ಹಾಕಿ ಪರಿಸರ ಶೋಚನೀಯಾವಸ್ಥೆಗೊಂಡಿರುವುದಾಗಿ ದೂರಲಾಗಿದೆ. ಇದರಿಂದ ಸಮುದ್ರ ತೀರಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಊರವರು ಈ ತ್ಯಾಜ್ಯದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಭಾರೀ ಪ್ರಮಾಣದ ತ್ಯಾಜ್ಯ ರಾಶಿಗೆ ಬೀದಿ ನಾಯಿಗಳು ಮುತ್ತಿಗೆ ಹಾಕುತ್ತಿರುವುದು ಮಕ್ಕಳು ಸಹಿತ ಸಾರ್ವಜನಿಕರಿಗೆ ಆತಂಕÀ …

ಸೌಹಾರ್ದತೆಗೆ ಸಾಕ್ಷಿ : ಉದ್ಯಾವರ ಜಮಾಯತ್‌ಗೆ ಭೇಟಿ ನೀಡಿದ ಶ್ರೀ ಅರಸು ದೈವ ಪಾತ್ರಿಗಳು

ಮಂಜೇಶ್ವರ: ತುಳುನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ಹಿಂದೂ-ಮುಸ್ಲಿA ಭಾವೈಕ್ಯತೆಗೆ ಸಾಕ್ಷಿಯಾಗಿರುವ ಇತಿಹಾಸ ಪ್ರಸಿದ್ಧ ಉದ್ಯಾವರ ಅರಸು ಮಂಜೀಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ವಿಧಿವಿಧಾನಗಳು ಭಕ್ತಿ ಮತ್ತು ಸೌಹಾರ್ದತೆಯೊಂದಿಗೆ ನೆರವೇರಿದವು. ಪ್ರಾಚೀನ ಕಾಲದಿಂ ದಲೂ ನಡೆದುಕೊಂಡು ಬರುತ್ತಿರುವ ಪದ್ಧತಿಯಂತೆ ಕ್ಷೇತ್ರದ ಅರಸು ದೈವಗಳ ಪಾತ್ರಿಗಳು ಶುಕ್ರವಾರ ಮಧ್ಯಾಹ್ನ ಉದ್ಯಾವರ ಸಾವಿರ ಜಮಾಯತ್ ಮಸೀದಿಗೆ ಭೇಟಿ ನೀಡಿ ಮುಸ್ಲಿಂ ಬಾಂಧವರನ್ನು ಜಾತ್ರೆಗೆ ಆಹ್ವಾನಿಸಿದರು. ಮೇಷ ಸಂಕ್ರಮಣ ಮುಗಿದು ಬರುವ ಮೊದಲ ಶುಕ್ರವಾರದಂದು ದೈವಗಳು ಮಸೀದಿಗೆ ಭೇಟಿ ನೀಡುವುದು ಶತಮಾನಗಳ ಹಳೆಯ …