
ನೀರ್ಚಾಲು: ಗೋವಾದಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ನೀರ್ಚಾಲು ಬಳಿಯ ಮಲ್ಲಡ್ಕ ನಿವಾಸಿ ವಿದ್ಯಾರ್ಥಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮಲ್ಲಡ್ಕ ನಿವಾಸಿ ನಿವೃತ್ತ ಶಿಕ್ಷಕ ವೀರೇಶ್ವರ ಕರ್ಮಲ್ಕರ್ ಎಂಬವರ ಪುತ್ರ ಪ್ರಜ್ವಲ್ ಕರ್ಮಲ್ಕರ್ (೨೬) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಗೋವಾದಲ್ಲಿ ಎಂಬಿಎ ವಿದ್ಯಾರ್ಥಿಯಾಗಿದ್ದರು. ಕಳೆದ ಸೋಮವಾರ ಇವರು ಚಲಾಯಿಸಿದ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ತಂದೆ, ತಾಯಿ ಅನ್ನಪೂರ್ಣೇಶ್ವರಿ (ಶಿಕ್ಷಕಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಬದಿಯಡ್ಕ: ನಿಯಂತ್ರಣ ತಪ್ಪಿದ ಓಮ್ನಿ ವ್ಯಾನ್ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಬಳಿಕ 12 ಅಡಿ ಆಳದ ಕಂದಕಕ್ಕೆ ಮಗುಚಿಬಿದ್ದಿದೆ. ದೀರ್ಘ ಹೊತ್ತು ವ್ಯಾನ್ನಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ನಾಗರಿಕರು ಅತೀ ಸಾಹಸಿಕವಾಗಿ ರಕ್ಷಿಸಿದ್ದಾರೆ. ಬದಿಯಡ್ಕ ವಿದ್ಯಾಗಿರಿ ಬಜದ ಸತ್ಯನಾರಾಯಣ ಭಟ್ (70) ಎಂಬವರನ್ನು ನಾಗರಿಕರು ರಕ್ಷಿಸಿದ್ದಾರೆ. ಬಳಿಕ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ 7 ಗಂಟೆ ವೇಳೆ ವಿದ್ಯಾಗಿರಿ ನವಕಾನ ಎಂಬಲ್ಲಿ ಅಪಘಾತವುಂಟಾ ಗಿದೆ. ಶುಗರ್ ತಪಾಸಣೆಗಾಗಿ ಸತ್ಯನಾರಾ ಯಣ ಭಟ್ …




ಕಾಸರಗೋಡು: ಶಾರ್ಜಾದ ಅಲ್ನಬ್ಬ ಎಂಬಲ್ಲಿನ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟ ಮೊಗ್ರಾಲ್ ನಿವಾಸಿ ಬಾಲಕಿಯ ಮೃತದೇಹದ ಅಂತ್ಯಸಂಸ್ಕಾರ ನಿನ್ನೆ ಮೊಗ್ರಾಲ್ ಚಳಿಯಂಗೋಡು ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು. ಮೊಗ್ರಾಲ್ ಕಾಡಿಯಂಕುಳಂ ಸಫ ಮಂಜಿಲ್ನ

ಸೀತಾಂಗೋಳಿ: ದಿನಂಪ್ರತಿ ನೂರಾರು ಮಂದಿ ಆಶ್ರಯಿಸುವ ರಸ್ತೆಯೊಂದು ಇನ್ನೂ ಡಾಮರು ಕಾಣದೆ ಇದೀಗ ಕೆಸರುಗದ್ದೆಯಾಗಿ ಮಾರ್ಪಾಡುಗೊಂಡಿದೆ. ಬೇಳ ಗ್ರಾಮದ ದರ್ಬೆತ್ತಡ್ಕ-ನಾನಿಲಪಳ್ಳ-ಮುಖಾರಿಕಂಡವನ್ನು ಸಂಪರ್ಕಿಸುವ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಸುಮಾರು ಒಂದೂವರೆ ಕಿಲೋ ಮೀಟರ್ ಉದ್ದದ ಈ

ಕುಂಬಳೆ: ಹೊಳೆಯಿಂದ ಅಕ್ರಮವಾಗಿ ಹೊಯ್ಗೆ ಹೇರಿಕೊಂಡು ಸಾಗುತ್ತಿದ್ದ ಎರಡು ಲಾರಿಗಳನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಚ್ಲಂಗೋಡ್ ಬಿ ಸಿ ರೋಡ್ ಎಂಬಲ್ಲಿಂದ ಶಿರಿಯ ಹೊಳೆಯ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಸೇವಾ ಸಮಿತಿ ಮತ್ತು ಮಾತೃ ಸಮಿತಿಯ ಸಹಯೋಗದೊಂದಿಗೆ ಶ್ರೀ ವರಮಹಾಲಕ್ಷ್ಮಿ ವೃತಾಚರಣೆ ವೇದಮೂರ್ತಿ ಶಿವರಾಮ್ ಭಟ್ರ ಪೌರೋಹಿತ್ಯದಲ್ಲಿ ನೆರವೇರಿತು.ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಭಟ್ ಚಂಬಲ್ತಿಮಾರು, ಮೊಕ್ತೇಸರ ಜಗನ್ನಾಥ
ಕಾಸರಗೋಡು: ಶಾರ್ಜಾದ ಅಲ್ನಬ್ಬ ಎಂಬಲ್ಲಿನ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟ ಮೊಗ್ರಾಲ್ ನಿವಾಸಿ ಬಾಲಕಿಯ ಮೃತದೇಹದ ಅಂತ್ಯಸಂಸ್ಕಾರ ನಿನ್ನೆ ಮೊಗ್ರಾಲ್ ಚಳಿಯಂಗೋಡು ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು. ಮೊಗ್ರಾಲ್ ಕಾಡಿಯಂಕುಳಂ ಸಫ ಮಂಜಿಲ್ನ

ತಿರುವನಂತಪುರ: ಉಳ್ಳಾಲದಿಂದ ಮಂಗಳೂರು ತನಕದ ರೈಲು ನಿಲ್ದಾಣಗಳನ್ನು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈರುತ್ಯ ವಲಯದಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿದ ರೈಲ್ವೇ ಇಲಾಖೆಯ ತೀರ್ಮಾನದ ವಿರುದ್ಧ ಕೇರಳ ತೀವ್ರ ಪ್ರತಿಭಟನೆಯೊಂದಿಗೆ ರಂಗಕ್ಕಿಳಿದಿದೆ. ಇಂತಹ

ನವದೆಹಲಿ: ದೇಶದ ಜನತೆಗೆ ತಿಂಗಳ ಮೊದಲ ದಿನವೇ ಸಿಹಿ ಸುದ್ದಿ ಸಿಕ್ಕಿದ್ದು 19 ಕೆ.ಜಿ ತೂಕದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿದೆ. ಈ ಹೊಸ ಪರಿಷ್ಕರಣೆಯಲ್ಲಿ 19 ಕೆ.ಜಿ ತೂಕದ

ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್ನ ಮೇಲೆ ವ್ಯಾಪಕ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page